ಹುಲಿಕೆರೆ ಸರ್ಕಾರಿ ಶಾಲಾ ಮಕಳಿಗೆ ಜ್ವರ: ಆತಂಕ
Team Udayavani, Dec 19, 2021, 2:34 PM IST
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಹುಲಿಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಗುರುವಾರ ಸಂಜೆ ಆರೋಗ್ಯದಲ್ಲಿ ಏರು ಪೇರಾಗಿ ಪಾಲಕರಲ್ಲಿ ಆತಂಕ ಸೃಷ್ಠಿಯಾಗಿತ್ತು. ಶನಿವಾರ ವೈದ್ಯರು ಮತ್ತು ಶುಶ್ರೂಷಕರು ಶಾಲೆಗೆ ಭೇಟಿ ಕೊಟ್ಟು ಮಕ್ಕಳನ್ನು ವೈದ್ಯಕೀಯ ಪರೀಕ್ಷಿಸಿದ್ದಾರೆ. ಎಸ್ಆರ್ಎಸ್ ಕ್ಷೇತ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸುನಿಲ್, ಶುಶ್ರೂಷಕಿ ರುಕ್ಮಿಣಿ, ಪ್ರಯೋಗಾಲಯ ತಂತ್ರಜ್ಞ ಶಿವಸ್ವಾಮಿ, ಸಿಬ್ಬಂದಿ ಬಸವರಾಜು ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಪರೀಕ್ಷಿಸಿದ್ದಾರೆ.
ರೋಗ ಲಕ್ಷಣ ತಿಳಿದುಬಂದಿಲ್ಲ: ಮಕ್ಕಳಲ್ಲಿ ಜ್ವರ, ಕೆಮ್ಮು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡಿವೆ.ಕೋವಿಡ್ ಸೋಂಕು ಇದೆ ಅಥವಾ ಇಲ್ಲ ಎಂಬುದು ಪರೀಕ್ಷೆಯ ಫಲಿತಾಂಶದಿಂದ ಗೊತ್ತಾಗಬೇಕಾಗಿದೆ.ಅನಾರೋಗ್ಯ ಲಕ್ಷಣಗಳ ಬಗ್ಗೆ ಈಗಲೇ ಏನನ್ನು ಹೇಳಲಾಗುವುದಿಲ್ಲ. ಕುಡಿಯುವ ನೀರಿನಿಂದಲೂ ಈ ಸಮಸ್ಯೆ ಉದ್ಭವಿಸಿರಬಹುದು ಎಂದರು. ಅನಾರೋಗ್ಯ ಲಕ್ಷಣಗಳಿದ್ದರೂ ಕೆಲವು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿ ತೀವ್ರ ಜ್ವರದಿಂದಬಳಲಿ ಸುಸ್ತಾಗಿದ್ದನ್ನು ಕಂಡು ಡಾ.ಸುನಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.
ಗುರುವಾರ ಸಂಜೆ ಘಟನೆ: ಗುರುವಾರ ಮಕ್ಕಳು ಶಾಲೆಯಲ್ಲಿ ಹಾಲು ಕುಡಿದು, ಮಧ್ಯಾಹ್ನದ ಊಟಮಾಡಿದ್ದಾರೆ. 16 ವಿದ್ಯಾರ್ಥಿಗಳ ಪೈಕಿ ಊಟದ ನಂತರ ಮನೆಗೆ ತೆರಳಿದ ಸುಮಾರು 10 ಮಕ್ಕಳಲ್ಲಿ ಗಂಟಲು ನೋವು, ಜ್ವರ, ಸುಸ್ತು ಕಾಣಿಸಿಕೊಂಡಿದೆ. ಪೋಷಕರುತಮ್ಮ ಮಕ್ಕಳನ್ನು ರಾಮನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಶಾಲೆಯಲ್ಲಿ ಕೊಟ್ಟ ಊಟ ಅಥವಾ ಹಾಲಿನಿಂದಲೇ ಈ ಸಮಸ್ಯೆಯಾಗಿದೆ ಎಂಬ ಆರೋಪಗಳು ಸಹ ಪೋಷಕರಿಂದ ಕೇಳಿ ಬಂದಿತ್ತು. ಶನಿವಾರ ಶಾಲೆಗೆ ಬಂದ ಮಕ್ಕಳಲ್ಲಿ ಕೆಮ್ಮು, ಜ್ವರಇರುವ ಬಗ್ಗೆ ಗ್ರಾಮಸ್ಥರಿಗೆ ಗೊತ್ತಾಗಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಆಹಾರ ಪದಾರ್ಥ ಪರಿಶೀಲನೆ: ವಿಷಯ ತಿಳಿದು ಸ್ಥಳಕ್ಕೆ ತಾಪಂ ಅಕ್ಷರ ದಾಸೋಹ ಅಧಿಕಾರಿ ಪ್ರಸನ್ನ ಕುಮಾರ್ ಭೇಟಿ ಕೊಟ್ಟು ಶಾಲೆಯಲ್ಲಿದ್ದ ಆಹಾರ ಪದಾರ್ಥಗಳು, ಹಾಲಿನ ಪುಡಿ ಪರೀಕ್ಷಿಸಿದರು. ಎಲ್ಲವೂ ಸರುಕ್ಷಿತವಾಗಿರುವುದನ್ನು ಖಾತರಿ ಪಡಿಸಿಕೊಂಡು ಗ್ರಾಮಸ್ಥರ ಗಮನಕ್ಕೂ ತಂದರು. ಹುಲಿಕೆರೆ- ಗುನ್ನೂರು ಗ್ರಾಪಂ ಅಧ್ಯಕ್ಷೆ ತೇಜಾ ಸತೀಶ್, ಗ್ರಾಪಂ ಸದಸ್ಯರಾದ ನಾಗೇಶ್, ಮಹದೇವಯ್ಯ, ಗ್ರಾಪಂ ಪಿಡಿಒ ಕೃಷ್ಣಯ್ಯ, ಕಾರ್ಯದರ್ಶಿ ಜಯಶೀಲ ಅವರು ಸಹ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದರು. ಮಕ್ಕಳ ಆರೋಗ್ಯ ವಿಚಾರಿಸಿದರು. ಅಕ್ಷರ ದಾಸೋಹ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸ್ಯಾನಿಟೈಸಿಂಗ್ಗೆ ಸೂಚನೆ: ಗ್ರಾಪಂ ಪಿಡಿಒ ಕೃಷ್ಣಯ್ಯ ಶಾಲೆಯಲ್ಲಿ ಬಳಸಲಾಗುತ್ತಿರುವ ಕುಡಿಯುವ ನೀರಿನ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸುವುದಾಗಿ ತಿಳಿಸಿದರು. ಮುನ್ನೆಚ್ಚರಿಕೆಯಾಗಿ ಶಾಲೆಗಳ ಕೊಠಡಿ ಮತ್ತು ಆವರಣವನ್ನು ಇಂದೇ ಸ್ಯಾನಿಟೈಸ್ ಮಾಡಿಸುವುದಾಗಿ, ಶಾಲೆಯ ನೀರಿನ ಟ್ಯಾಂಕ್ ಅನ್ನು ಸಹ ಸ್ವತ್ಛ ಮಾಡಿಸುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಶೌಚಾಲಯ, ನೀರಿನ ಸಮಸ್ಯೆ: ನೀರು, ಶೌಚಾಲಯ ಸಮಸ್ಯೆ ಬಗ್ಗೆ ಪಾಲಕರ ಅಸಮಾಧಾನ ಶಾಲೆಯಲ್ಲಿ ಶುದ್ಧ ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳ ಬಗ್ಗೆ ಪಾಲಕರಾದ ತಿಮ್ಮಪ್ಪರಾಜು, ಅಂಬಿಕಾ, ಆಶಾ, ಸೌಮ್ಯ, ಸೌಜನ್ಯ, ಗ್ರಾಮದ ಮುಖಂಡರಾದ ವೆಂಕಟೇಶ್, ಪುಟ್ಟಮಾದಯ್ಯ ಮತ್ತಿತರರು ಹಾಜರಿದ್ದ ಅಧಿಕಾರಿಗಳ ಗಮನಕ್ಕೆ ತಂದರು. ಶಾಲೆಯ ಆಹಾರ ಸೇವನೆಯಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ದೂರಿದರು.
ತಾಪಂ ಇಒ ವಿರುದ್ಧ ಗ್ರಾಮಸ್ಥರ ಕಿಡಿ: ಶಾಲೆಗೆ
ಕಾಂಪೌಂಡ್ ನಿರ್ಮಿಸಲಾಗಿದೆ, ಆದರೆ ಗೇಟ್ ಅಳವಡಿಸಿಲ್ಲ. ಶಾಲಾ ಆವರಣದಲ್ಲಿರುವ ನೀರಿನ ಟ್ಯಾಂಕ್ಗೆ ಭದ್ರತೆ ಇಲ್ಲ. ಕೂಡಲೆ ಅಳವಡಿಸಬೇಕು ಎಂದು ಗ್ರಾಮಸ್ಥರು ತಾಪಂ ಇಒ ಅವರನ್ನು ಆಗ್ರಹಿಸಿದಾಗ ಇಒ ಅವರು ರಾತ್ರಿ ವೇಳೆ ಗ್ರಾಮಸ್ಥರೆ ಕಾವಲು ಕಾಯಬೇಕು ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒಬೇಜವಾಬ್ದಾರಿ ಹೇಳಿಕೆ, ಮಕ್ಕಳ ಆರೋಗ್ಯ ವಿಚಾರಿಸದ ಅಧಿಕಾರಿಗಳ ನಡೆಯನ್ನು ಗ್ರಾಪಂ ಮಾಜಿ ಸದಸ್ಯ ದೇವರಾಜು ಖಂಡಿಸಿದರು.
ಹುಲಿಕೆರೆ ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆ ಬಗ್ಗೆಗ್ರಾಪಂ ಗಮನಕ್ಕೂ ತಂದಿಲ್ಲ. ಕಳೆದ ವಾರವೇ ಇಲ್ಲಿನ ಶಾಲೆಯ ನೀರಿನ ಪರೀಕ್ಷೆ ನಡೆಸಲಾಗಿದೆ. ನೀರು ಮಾನವ ಬಳಕೆಗೆಯೋಗ್ಯವಾಗಿದೆ ಎಂದು ವರದಿ ಇದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತೂಮ್ಮೆನೀರಿನ ಪರೀಕ್ಷೆ ನಡೆಸಿ ಶುದ್ಧ ನೀರು ಗ್ರಾಪಂನಿಂದ ದೊರೆಯುವಂತೆಮಾಡಲಾಗುವುದು. ವೈದ್ಯರಿಂದ ಮಕ್ಕಳ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳಬಗ್ಗೆ ನಿಗಾ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. – ತೇಜಾ ಸತೀಶ್, ಅಧ್ಯಕ್ಷರು, ಹುಲಿಕೆರೆ-ಗುನ್ನೂರು ಗ್ರಾಪಂ