ಶೇ.70 ಸಾಲ ವಸೂಲಾತಿ: ವೇಣುಗೋಪಾಲ್‌


Team Udayavani, Dec 23, 2020, 2:56 PM IST

RN-TDY-1ಶೇ.70 ಸಾಲ ವಸೂಲಾತಿ: ವೇಣುಗೋಪಾಲ್‌

ಮಾಗಡಿ: ಪ್ರಸ್ತುತ ಸಾಲಿನಲ್ಲಿ ಶೇ.70ರಷ್ಟು ಸಾಲ ವಸೂಲಾತಿಯಾಗಿದ್ದು, ಪಿಕಾರ್ಡ್‌ ಬ್ಯಾಂಕ್‌ ರೈತರಿಗೆ ಸಾಲ ನೀಡುವಂತ ಅರ್ಹತೆಪಡೆದಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ವೇಣುಗೋಪಾಲ್‌ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಪಿಕಾರ್ಡ್‌ ಬ್ಯಾಂಕ್‌ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರೈತರ ಮನೆಗೆ ಹೋಗಿ ಸದಸ್ಯರ ಸಹಕಾರದಿಂದ ಶೇ.70ರಷ್ಟು ಸಾಲವಸೂಲಾತಿಯಾಗಿದೆ. ಈಗ ಸಾಲ ಕೊಡಲು ಮಂಡಲಿ ತೀರ್ಮಾನಕೈಗೊಂ ಡಿದ್ದು, ಪ್ರಸ್ತುತ ಸಾಲಿನಲ್ಲಿಯೇ ಪಿಕಾರ್ಡ್‌ ಬ್ಯಾಂಕ್‌ ಈಗಾಗಲೇ 40 ರೈತರಿಗೆ ಸುಮಾರು 65 ಲಕ್ಷ ರೂ.ಸಾಲ ಮಂಜೂರು ಮಾಡಲಾಗಿದೆ ಎಂದರು.

ಸಾಲಕ್ಕಾಗಿ ಅಗತ್ಯ ದಾಖಲೆ ಕಲ್ಪಿಸಿ: ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆಯ ಬೇಕು. ಸಾಲ ಮಂಜೂರು ಮಾಡಲಿಲ್ಲ ಎಂದು ಆಡಳಿತ ಮಂಡಲಿಯನ್ನು ದೂರುವುದ‌ನ್ನು ಬಿಟ್ಟು ದಾಖಲೆ ಒದಗಿಸುವ ಸಂಬಂಧ ಲೋಪ ದೋಷಗಳಿದ್ದರೆ ಸರಿಪಡಿಸಿಕೊಡ ಬೇಕು. ಮಾಹಿತಿ ಕೊರತೆಯಿಂದ ರೈತರು ಸಾಲ ಕೊಡ ಲಿಲ್ಲ ಎಂದು ಆಡಳಿತ ಮಂಡಲಿ ವಿರುದ್ಧ ಆರೋಪ ಮಾಡುತ್ತಾರೆ. ಬ್ಯಾಂಕ್‌ ಸಿಬ್ಬಂದಿ ಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ದೂರುವುದರಿಂದ ಪ್ರಯೋಜನವಿಲ್ಲ: ನಿರ್ದೇಶಕ ಎನ್‌.ಗಂಗರಾಜು ಮಾತನಾಡಿ, ಸದಸ್ಯರು ವಾರ್ಷಿಕ ಮಹಾಸಭೆಗೆ ಆಹ್ವಾನ ಪತ್ರಿಕೆ ಕೊಡಲಿಲ್ಲ ಎಂದು ದೂರುವುದರಿಂದ ಪ್ರಯೋಜನವಿಲ್ಲ. ಇದು ರೈತರ ಬ್ಯಾಂಕ್‌,ಪೋಸ್ಟ್‌ ಮೂಲಕ ಆಹ್ವಾನ ಪತ್ರಿಕೆ ಹಂಚಿಕೆ ಮಾಡಲಾಗುತ್ತದೆ. ಸಾಲ ಕೊಡಲಿಲ್ಲ ಎಂದು ರೈತರು ಆರೋಪಿಸುವುದು ಸರಿಯಲ್ಲ. ಸರಾಸರಿ ಸಾಲ ವಸೂಲಾತಿ ಆಗದಿದ್ದರೆ ಕೇಂದ್ರ ಕಚೇರಿ ಸಾಲ ಮಂಜೂರಾತಿ ಕೊಡುವುದಿಲ್ಲ. ಸಾಲ ಪಡೆದವರು ಸಮರ್ಪಕವಾಗಿ ಸಾಲ ಹಿಂದಿರಿಗಿಸಿದರೆ ಇತರೆ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಸುವುದರಿಂದ ಬ್ಯಾಂಕ್‌ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಅಸಮಾಧಾನ: 9 ಸಾವಿರಕ್ಕೂ ಹೆಚ್ಚು ಸದಸ್ಯರ ಪೈಕಿ ಕೇವಲ 200 ಮಂದಿ ಸದಸ್ಯರು ಭಾಗ ವಹಿಸಿದ್ದರು. ಇದರಿಂದ ಬಹುತೇಕ ಸದಸ್ಯರು ಆಹ್ವಾನ ಪತ್ರಿಕೆ ವಿತರಿಸಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಿರ್ದೇಶಕ ಕೆ.ಟಿ. ಚಂದ್ರಶೇಖರ್‌ ಮಾತನಾಡಿದರು. ನಿರ್ದೇಶಕರಾದ ಸಿದ್ದೇಗೌಡ, ಸಿ.ಬಿ.ರವೀಂದ್ರ, ಬಿ.ದೇವೇಂದ್ರ ಕುಮಾರ್‌, ಕೆ.ಜಿ.ನಾಗರಾಜು, ಸರೋಜಮ್ಮ, ನರಸಿಂ ಹಯ್ಯ,ಪಿ.ಚಂದ್ರೇಗೌಡ,ಪ್ರಭಾರವ್ಯವಸ್ಥಪಕ ಎಚ್‌.ಎ.ಸೋಮಶೇಖರ್‌ ಹಾಜರಿದ್ದರು.

ಟಾಪ್ ನ್ಯೂಸ್

vidhana-soudha

Cauvery ಜಲ ವಿವಾದ ; ಸೆ. 26 ರಂದು ಬೆಂಗಳೂರು ನಗರ ಬಂದ್ ಗೆ ಕರೆ

1wwewqe

Fraud Case ; ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

JDS ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಉಡ ಹೊಕ್ಕ ಮನೆಯಂತೆ… : ವೀರಪ್ಪ ಮೊಯ್ಲಿ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Ramanagar; ವಸತಿ ಶಾಲೆಯಲ್ಲಿ ನೀರಿನ ಸಂಪು ಕುಸಿದು ಬಾಲಕ ಸಾವು

Ramanagar; ವಸತಿ ಶಾಲೆಯಲ್ಲಿ ನೀರಿನ ಸಂಪು ಕುಸಿದು ಬಾಲಕ ಸಾವು

tdy-4

Mekedatu: ಕಾವೇರಿ ಸಂಕಷ್ಟಕ್ಕೆ ಮೇಕೆದಾಟು ಅಣೆಕಟ್ಟು ಪರಿಹಾರ

Cauvery Issue ರಾಜ್ಯದ ರೈತರ ಹಿತಕಾಯುವಲ್ಲಿ ರಾಜ್ಯ ಸರ್ಕಾರ ಎಡವಿದೆ: ಕುಮಾರಸ್ವಾಮಿ ಆರೋಪ

Cauvery Issue ರಾಜ್ಯದ ರೈತರ ಹಿತಕಾಯುವಲ್ಲಿ ರಾಜ್ಯ ಸರ್ಕಾರ ಎಡವಿದೆ: ಕುಮಾರಸ್ವಾಮಿ ಆರೋಪ

Missing: ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆ

Missing: ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

vidhana-soudha

Cauvery ಜಲ ವಿವಾದ ; ಸೆ. 26 ರಂದು ಬೆಂಗಳೂರು ನಗರ ಬಂದ್ ಗೆ ಕರೆ

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

1wwewqe

Fraud Case ; ಚೈತ್ರಾ ಸೇರಿ 7 ಮಂದಿಗೆ ಅ. 6ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Varanasi New Cricket Stadium: ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.