ವೈದ್ಯರಿಗೆ ವಿಷಜಂತುಗಳ ಕಾಟ


Team Udayavani, Dec 29, 2019, 4:32 PM IST

rn-tdy-1

ಚನ್ನಪಟ್ಟಣ: ದೀಪದ ಕೆಳಗೆ ಕತ್ತಲು ಎಂಬಂತೆ, ರೋಗಿಗಳನ್ನು ಗುಣಪಡಿಸುವ ವೈದ್ಯರು ಹಾಗೂ ಸಿಬ್ಬಂದಿ ವಾಸ ಮಾಡುವ ವಸತಿ ಗೃಹಗಳ ಬಳಿ ಅಶುಚಿತ್ವ ತಾಂಡವವಾಡುತ್ತಿದ್ದು, ಹೇಳುವವರು ಕೇಳುವವರು ಯಾರು ಇಲ್ಲದೆ ಶೋಚನೀಯ ಸ್ಥಿತಿಯನ್ನು ನಿವಾಸಿಗಳು ಎದುರಿಸುತ್ತಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ವರ್ಗ ವಾಸ ಮಾಡುವ ವಸತಿ ಗೃಹಗಳ ಸುತ್ತಮತ್ತಲಿನ ಪರಿಸ್ಥಿತಿ ಹಾಳು ಕೊಂಪೆಯ ತಾಗಿದ್ದು, ಕಲುಷಿತ ಪರಿಸರವನ್ನು ಅಣಕಿಸುವಂತಿದೆ. ವಸತಿ ಗೃಹಗಳ ಸುತ್ತಾ ಅಳೆತ್ತರಕ್ಕೆ ಬೆಳದಿರುವ ಗಿಡ ಗಂಟೆಗಳು, ವಿಷ ಜಂತುಗಳ ವಾಸಸ್ಥಾನ ಹಾಗೂ ಸಾರ್ವಜನಿಕ ಆಸ್ಪತ್ರೆಯ ಕಸ ಇದೇ ಸ್ಥಳದಲ್ಲಿ ರಾಶಿ ಬಿದ್ದಿದ್ದು, ಭೂತ ಬಂಗಲೆ ನೋಡಿದದಂತೆ ಭಾಸವಾಗುತ್ತದೆ.

ಭಯದ ವಾತಾವರಣ: ರೋಗಿಗಳ ಸೇವೆಯಲ್ಲಿ ನಿರತರಾಗುವ ವೈದ್ಯರು, ಶುಶ್ರೂಷಕಿ ಹಾಗೂ ಸಿಬ್ಬಂದಿವರ್ಗ ತಮ್ಮ ಮನೆಗೆಬರಬೇಕಾದರೆ ಬಹಳ ಎಚ್ಚರಿಕೆ ಯಿಂದ ಬರಬೇಕಾದ ಅನಿ ವಾರ್ಯತೆ ಹಾಗೂ ಎಚ್ಚರಿಕೆ ವಹಿಸ ಬೇಕಾಗಿದೆ. ಏಕೆಂದರೆ ಎಲ್ಲೆಂದರಲ್ಲಿ ಚೇಳು ಹಾವುಗಳು ಹಾಗೂ ಕಳ್ಳರು ಯಾವ ಸಮಯದಲ್ಲಿ ಅಕ್ರಮಣ ಮಾಡಬಹುದೋ ಎಂಬುದು ಇವರ ಭಯವಾಗಿದೆ.

ಕಳ್ಳರ ಹಾವಳಿ: ವಸತಿ ಗೃಹದ ಕಟ್ಟಡಗಳು ಹಾಳು ಕೊಂಪೆಯಾಗಿ ಪರಿವರ್ತನೆಯಾಗಿದ್ದು, ಅಲ್ಲಿನ ಸ್ಥಿತಿಯನ್ನು ನೋಡಿದರೆ, ಎಷ್ಟೋ ವರ್ಷಗಳಿಂದ ವಸತಿ ಗೃಹಗಳ ಬಾಗಲು ತಗೆಯಲಿಲ್ಲವೋ ಎನ್ನುವಂತಿವೆ. ಕೆಲ ತಿಂಗಳಿಂದ ವಸತಿ ಗೃಹ ಹಾಗೂ ಆಸ್ಪತ್ರೆಯ ಸುತ್ತಲೂ ವಿದ್ಯುತ್‌ ದೀಪಗಳಿಲ್ಲದೆ ರಾತ್ರಿ ವೇಳೆ ಕಗ್ಗತ್ತಲು ಆವರಿಸಿದರೂ, ಕೂಡ ಯಾರೂ ಕೂಡ ತಲೆ ಕೆಡಿಸಿಕೊಳ್ಳದೆ ಕತ್ತಲೆಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ವಸತಿ ಗೃಹಗಳ ಭದ್ರತೆಗೆ ಯಾವುದೇ ರೀತಿಯ ಗೇಟ್‌ ಅಳವಡಿಸದಿರುವುದು ಕೂಡ ಹಲವಾರು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಕೆಲ ದಿನಗಳ ಹಿಂದೆ ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಉಪಕರಣಗಳು ಕಳ್ಳತನವಾಗಿವೆ.

ಸಮಸ್ಯಗೆ ಪರಿಹಾರ ಸಿಗುವುದೆ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ವತ್ಛತೆಯ ಟೆಂಡರ್‌ ಪಡೆದಿರುವವರಿಗೆ ಕೇವಲ ಆಸ್ಪತ್ರೆಯ ಸ್ವತ್ಛತೆಗೆ ಸೀಮಿತವೋ, ಇಲ್ಲಾ ವಸತಿ ಗೃಹಗಳ ಸ್ವಚ್ಚತೆಯು ಸೇರಿಲ್ಲವೋ ಎಂಬುದು ತಿಳಿಯದಾಗಿದೆ. ನಮ್ಮ ಸಮಸ್ಯೆಯನ್ನು ಕೇಳುವವರೂ ಯಾರು ಇಲ್ಲವೇ ಎಂದು ವಸತಿ ನಿಲಯದ ನಿವಾಸಿ ಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಭಾರಿ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಮಹೇಂದ್ರಕುಮಾರ್‌ ಇತ್ತ ಗಮನ ಹರಿಸಿ ಅವ್ಯವಸ್ಥೆಯಿಂದ ಕೂಡಿರುವ ವಸತಿ ನಿಲಯದ ಸಮಸ್ಯೆ ಹಾಗೂ ಆಸ್ಪತ್ರೆ ಯನ್ನು ಆವರಿಸಿಕೊಂಡಿರುವ ಕಗ್ಗತ್ತಲನ್ನು ಹೋಗಲಾಡಿಸುವರೇ ಕಾದು ನೋಡಬೇಕಿದೆ.

 

-ಎಂ.ಶಿವಮಾದು.

Ad

ಟಾಪ್ ನ್ಯೂಸ್

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Gunjan Arya assumed office as the new Superintendent of Police of Dharwad District

Dharwad ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Ramanagara: ತಡೆಗೋಡೆಗೆ ಢಿಕ್ಕಿ ಹೊಡೆದು ಭೀಕರ ಅಪಘಾತ… ಕಾರಿನಲ್ಲಿದ್ದ ನಾಲ್ವರು ಮೃ*ತ್ಯು

Ramanagara: ತಡೆಗೋಡೆಗೆ ಢಿಕ್ಕಿ ಹೊಡೆದು ಭೀಕರ ಅಪಘಾತ… ಕಾರಿನಲ್ಲಿದ್ದ ನಾಲ್ವರು ಮೃ*ತ್ಯು

7

Fraud: 48000 ರೂ.ಗಳ ರೇಷ್ಮೆಗೂಡು ಪಡೆದು ರೈತನಿಗೆ ವಂಚನೆ

ಸಿದ್ದರಾಮಯ್ಯ ಎಂಜಿನ್‌, ನಾವು ಪ್ರಯಾಣಿಕರು: ಶಾಸಕ ಕೊತ್ತನೂರು ಮಂಜು

ಸಿದ್ದರಾಮಯ್ಯ ಎಂಜಿನ್‌, ನಾವು ಪ್ರಯಾಣಿಕರು: ಶಾಸಕ ಕೊತ್ತನೂರು ಮಂಜು

5-ramanagara

Ramanagara: ತಾವರೆಕೆರೆ ಬಾಲಕಿ ರೇಪ್‌, ಹತ್ಯೆ: ಆರೋಪಿ ಬಂಧನ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

14-lotus

Environment: ಪ್ರಕೃತಿಯ ಪೋಷಣೆಗೆ ನಾವೆಲ್ಲರೂ ಪಾಲುದಾರರು

Roti Kapda Aur Makaan fame actor Dheeraj Kumar passes away

Dheeraj Kumar: ರೋಟಿ ಕಪಡಾ ಔರ್‌ ಮಖಾನ್‌ ಖ್ಯಾತಿಯ ನಟ ಧೀರಜ್‌ ಕುಮಾರ್‌ ನಿಧನ

13-plant

Environment: ಹಸುರು ಕಾಯ್ದರೆ ಉಸಿರು ಉಳಿಯುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.