ನದಿ, ಸಾಗರಗಳು ಪ್ಲಾಸ್ಟಿಕ್‌ ಮಯ

ಸಾಲು ಮರದ ತಿಮ್ಮಕ್ಕ ಆತಂಕ | ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನೆ | ಸುಸ್ಥಿರ ಅಭಿವೃದ್ಧಿ ಅಗತ್ಯ

Team Udayavani, May 28, 2019, 11:40 AM IST

ramanagar-tdy-1..

ಎಬಿಸಿಡಿ ಡ್ಯಾನ್ಸ್‌ ಅಕಾಡೆ‌ಮಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಮನಗರ: ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್‌ನ್ನು ಬಳಸುತ್ತಿರುವುದರಿಂದ ಇಂದು, ನದಿ ಸಾಗರಳು ಪ್ಲಾಸ್ಟಿಕ್‌ ಕಸದಿಂದ ತುಂಬಿ ಹೋಗಿದೆ ಎಂದು ಸಾಲು ಮರದ ತಿಮ್ಮಕ್ಕ ಆತಂಕ ವ್ಯಕ್ತಪಡಿಸಿದರು.

ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಎಬಿಸಿಡಿ ಡ್ಯಾನ್ಸ್‌ ಅಕಾಡೆಮಿ ಹಮಿಕೊಂಡಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ಮುನಿದರೆ, ಮಾನವ ಅಸಹಾಯಕ: ಪ್ಲಾಸ್ಟಿಕ್‌ ಹಾಳೆ, ಚೀಲಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದೇವೆ. ಪ್ಲಾಸ್ಟಿಕ್‌ ಅನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಆಹಾರ ತಿನ್ನುವ ಹಸು ಸೇರಿದಂತೆ ಬೀಡಾಡಿ ಪ್ರಾಣಿಗಳು ಪ್ಲಾಸ್ಟಿಕ್‌ ನುಂಗಿ ಅವುಗಳ ಪ್ರಾಣಕ್ಕೆ ಅಪಾಯವನ್ನು ತರುತ್ತಿದೆ. ಪ್ಲಾಸ್ಟಿಕ್‌ ಮಾಲಿನ್ಯ ವಿಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಡಿಯುವ ನೀರಿನ ಖಾಲಿ ಬಾಟಿಲಿಗಳು ಜಾಸ್ತಿ ಪ್ರಮಾಣದಲ್ಲಿ ಕಸವಾಗುತ್ತಿವೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಅನುಕೂಲತೆ ಮತ್ತು ಆಡಂಬರದ ದೃಷ್ಟಿಯಿಂದ ಊಟದ ವೇಳೆ ಪ್ಲಾಸ್ಟಿಕ್‌ ಬಾಟಲಿಯ ಕುಡಿಯುವ ನೀರು, ಪ್ಲಾಸ್ಟಿಕ್‌ ಚಮಚ ನೀಡುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್‌ ಆಡಂಬರವನ್ನು ನಿಲ್ಲಿಸಿ. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ನಮ್ಮ ಬಾಳು ಚೆಂದವಾಗಿ ಇರತ್ತದೆ. ವಿಜ್ಞಾನ ಎಷ್ಟು ಬೆಳೆದರೇನು ? ಪ್ರಕೃತಿ ಮುನಿದರೆ, ಮಾನವ ಅಸಾಹಯಕ. ಪ್ರಕೃತಿ ವಿರುದ್ಧ ಕೆಲಸ ಮಾಡುವುದನ್ನು ತಕ್ಷಣ ನಿಲ್ಲಿಸಿ ಎಂದರು.

ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದ ಮೈಸೂರಿನ ಮ್ಯಾಜಿಕ್‌ ಸ್ಟೆಪ್ಸ್‌ ಡ್ಯಾನ್ಸ್‌ ಅಕಾಡೆಮಿಯ ಮಂಜುಳ ಹರೀಶ್‌ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಪ್ರಕೃತಿಗೆ ಹಾನಿಯಾಗದಂತಹ ಸುಸ್ಥಿರ ಪ್ರಗತಿ ಅಗತ್ಯ: ತಾಪಂ ಮಾಜಿ ಅಧ್ಯಕ್ಷ ಎಸ್‌.ಟಿ. ಕಾಂತರಾಜ್‌ ಪಟೇಲ್ ಮಾತನಾಡಿ, ಪರಿಸರ ಹಾಗೂ ಜೀವ ಸಂಕುಲದ ಬಗ್ಗೆ ನಾವು ಅಸೂಕ್ಷ್ಮರಾಗಿದ್ದೇವೆ. ಮನುಷ್ಯ ನಿರ್ಮಾಣ ಮಾಡಿದ್ದನ್ನು ಪರಿಸರ ಕೆಡವಿದರೆ, ಅದನ್ನು ವಿಧ್ವಂಸಕ ಎನ್ನುತ್ತೇವೆ. ಅದೇ ಮನುಷ್ಯ ಪ್ರಕೃತಿಯನ್ನು ನಾಶ ಮಾಡಿದರೆ ಅಭಿವೃದ್ಧಿ ಎಂಬ ಹೆಸರು ಕೊಡುತ್ತೇವೆ. ಪರಿಸರಕ್ಕೆ ಹಾನಿಯಾಗದಂತಹ ಸುಸ್ಥಿರ ಪ್ರಗತಿಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಎಲ್ಲರೂ ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಬೇಕು. ಮಕ್ಕಳು ಸಹಜವಾಗಿಯೇ ಪರಿಸರದ ಬಗ್ಗೆ ಪ್ರೀತಿ ಹೊಂದಿರುತ್ತಾರೆ. ಆದರೆ ಅವರನ್ನು ಪರಿಸರದಿಂದ ಬೇರೆ ಮಾಡಲಾಗುತ್ತಿದೆ. ಶಿಕ್ಷಣ ಪಡೆದ ಹಾಗೆ ಅವರು ನಿಸರ್ಗದಿಂದ ದೂರ ಆಗುತ್ತಿದ್ದಾರೆ. ಪರಿಸ್ಥಿತಿ ಬದಲಾವಣೆ ಆಗಬೇಕು. ಅದು ಮನೆಯಿಂದಲೇ ಆರಂಭವಾಗಬೇಕು ತಿಳಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಸಾರ್ವಜನಿಕ ಪ್ರಮುಖ ರಾದ ಎಂ.ಜಿ.ಆರ್‌. ಮಣಿ, ಲಕ್ಷ್ಮಣ್‌, ಎನ್‌. ರಾಜು, ಎಂ.ವಿ. ನಾಗರಾಜ್‌, ಎಂ.ವಿ. ಪುಟ್ಟಸ್ವಾಮಿ, ದೇವರಾಜ್‌, ಕಲಾವಿದ ರಾದ ಮಂಜುನಾಥ್‌, ರಘುನಂದನ್‌, ಜಗದೀಶ್‌, ನಾಗೇಶ್‌, ಎಬಿಸಿಡಿ ಡ್ಯಾನ್ಸ್‌ ಅಕಾಡೆಮಿಯ ಎಸ್‌. ರೇಣುಕಾಪ್ರಸಾದ್‌, ಪರಮೇಶ್‌, ಸೋಮಪ್ರಭಸಿದ್ದೇಶ್‌, ಪ್ರಕಾಶ್‌, ಶಶಿಕಲಾರೇಣುಕಾಪ್ರಸಾದ್‌, ಲೀಡರ್ಸ್‌ ಅಕಾಡೆಮಿಯ ಸಿಂಧು ಉಪಸ್ಥಿತರಿದ್ದರು.

ಡ್ಯಾನ್ಸ್‌ ಸ್ಪರ್ಧೆಯಲ್ಲಿ ವಿಜೇತರು: ಜೂನಿಯರ್‌ ಸೋಲೊ ವಿಭಾಗ: ವರ್ಷ (ಮಂಡ್ಯ) ಪ್ರಥಮ, ಚಂದನ(ಚನ್ನಪಟ್ಟಣ) ದ್ವಿತೀಯ, ಬನ್ನಿ (ಬೆಂಗಳೂರು) ತೃತೀಯ. ಜೂನಿಯರ್‌ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಫೀಲ್ ದ ಬೆಸ್ಟ್‌ ಡಾನ್ಸ್‌ (ಬೆಂಗಳೂರು) ಪ್ರಥಮ, ವಿಸ್ಮಯ್‌ ಡ್ಯಾನ್ಸ್‌ (ಬೆಂಗಳೂರು) ದ್ವಿತೀಯ, ಆರ್‌ ಡಿಸಿ ಗುಂಪು (ಮಂಡ್ಯ) ತೃತೀಯ.

ಸೀನಿಯರ್‌ ಸೋಲೊ ವಿಭಾಗ: ಜನ್ಮ (ರಾಮನಗರ) ಪ್ರಥಮ, ಶಾಲಿನಿ (ರಾಮನಗರ) ದ್ವಿತೀಯ, ಭೂಮ್‌ ಬಾಯ್ಸ ಡ್ಯಾನ್ಸ್‌ (ಬೆಂಗಳೂರು) ತೃತೀಯ.

ಸೀನಿಯರ್‌ ಸಮೂಹ ನೃತ್ಯ ಸ್ಪರ್ಧೆ: ಅಂಚಿಸ್‌ ಡ್ಯಾನ್ಸ್‌ (ಬೆಂಗಳೂರು) ಪ್ರಥಮ, ಬಿಬಿಟಿ (ರಾಮನಗರ) ದ್ವಿತೀಯ, ಭೂಮ್‌ ಬಾಯ್ಸ ಡ್ಯಾನ್ಸ್‌ (ಬೆಂಗಳೂರು) ತೃತೀಯ.

ಭರತ ನಾಟ್ಯ ಸ್ಪರ್ಧೆ: ಕಿರಿಯರ ವಿಭಾಗ: ದೀಪು(ಬಿಡದಿ) ಪ್ರಥಮ, ನವ್ಯಶ್ರೀ (ರಾಮನಗರ) ದ್ವಿತೀಯ, ವರ್ಷಿಣಿ (ಚನ್ನಪಟ್ಟಣ) ತೃತೀಯ. ಕಿರಿಯರ ವಿಭಾಗದ ನೃತ್ಯ ಸ್ಪರ್ಧೆ: ಆದ್ಯವೀರ ಕಲಾ ಭವನ (ಚನ್ನಪಟ್ಟಣ) ಪ್ರಥಮ, ದೀಪು ಮತ್ತು ತಂಡ (ಬಿಡದಿ) ದ್ವಿತೀಯ, ಚಂದನ್‌ ಮತ್ತು ತಂಡ (ರಾಮನಗರ) ತೃತೀಯ.

ಹಿರಿಯರ ವಿಭಾಗ: ಆರ್‌ಡಿಸಿ(ಮಂಡ್ಯ) ಪ್ರಥಮ, ಜೀವಿತ (ಬೆಂಗ ಳೂರು) ದ್ವಿತೀಯ, ರಚನ (ಬೆಂಗಳೂರು) ತೃತೀಯ. ಹಿರಿಯರ ವಿಭಾಗದ ಸಮೂಹ ನೃತ್ಯ ಸ್ಪರ್ಧೆ: ಚಾರ್ವಿ ಮತ್ತು ತಂಡ (ಚನ್ನಪಟ್ಟಣ) ಪ್ರಥಮ, ಭಾರ್ಗವಿ ಮತ್ತು ತಂಡ (ರಾಮನಗರ) ದ್ವಿತೀಯ, ರಾಜೇಶ್‌ ತಂಡ (ಬೆಂಗಳೂರು) ತೃತೀಯ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.