ದುಡಿಮೆಯ ಒಂದು ಭಾಗ ಧರ್ಮ ರಕ್ಷ ಣೆಗೆ ಮೀಸಲಿಡಿ

ವಿರಾಟ್‌ ಹಿಂದೂ ಸಮಾಜೋತ್ಸವ-ಹಿಂದೂ ರಾಷ್ಟ್ರ ಉದಯೋತ್ಸವದಲ್ಲಿ ವಾಗ್ಮಿ ಚೈತ್ರಾ ಕುಂದಾಪುರ ಕರೆ

Team Udayavani, May 24, 2022, 5:45 PM IST

chaithra-kundapura

ಆನವಟ್ಟಿ: ಯುವಕರು ದುಡಿಮೆಯ ಬದುಕಿನ ಒಂದು ಭಾಗವನ್ನು ದರ್ಮ ರಕ್ಷಣೆಗಾಗಿ ಮೀಸಲಿಡಬೇಕು. ಇಲ್ಲವಾದರೆ ಜ್ಞಾನವಾಪಿ ಎಂಬ ಮಸೀದಿಯಲ್ಲಿರುವ ಶಿವಲಿಂಗಕ್ಕೆ ಬಂದ ಪರಿಸ್ಥಿತಿ ಮುಂದೆ ನಿಮ್ಮೂರಿನ ದೇವಸ್ಥಾನದಲ್ಲಿರುವ ಶಿವನಿಗೂ ಬರಬಹುದು. ಹಿಂದೂಗಳ ರಕ್ಷಣೆಗಾಗಿ ಹಿಂದೂ ಸಮಾಜ ಸಂಘಟಿತವಾಗಬೇಕು ಎಂದು ಖ್ಯಾತ ವಾಗ್ಮಿ ಚೈತ್ರಾ ಕುಂದಾಪುರ ಕರೆ ನೀಡಿದರು.

ಪಟ್ಟಣದ ಕೆಪಿಎಸ್‌ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವಿರಾಟ್‌ ಹಿಂದೂ ಸಮಾವೇಶದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಶ್ಮೀರ, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಹಿಂದೂಗಳ ಹತ್ಯೆಯಾಗಿದೆ. ನಮಗೇನೂ ನಮ್ಮಲ್ಲಿ ಅಂತಹದ್ದು ಇಲ್ಲ ಎಂದು ಹಿಂದೂಗಳು ಸುಮ್ಮನೆ ಇರದೆ ಎಲ್ಲಾ ಹಿಂದೂ ಸಮಾಜದವರು ಎಚ್ಚೆತ್ತು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು.

ಬೈಬಲ್‌ ಪುಸ್ತಕ ಹಿಡಿದು ಶಾಂತಿದೂತರು ಎಂದು ಹೇಳಿ, ಬಡತನವನ್ನು ಮತಾಂತರಕ್ಕೆ ಬಳಸಿಕೊಳ್ಳುವ ಕ್ರೈಸ್ತ ಮಿಶನರಿಗಳ ಬಗ್ಗೆ ಎಚ್ಚರವಿರಲಿ. ತುಳಸಿ, ಆಲದಮರಕ್ಕೆ ಪೂಜಾ ಭಾವನೆಯಿಂದ ಪೂಜೆ ಮಾಡುವುದನ್ನು ಮೌಡ್ಯ ಎಂದು ಕರೆಯುವ ಅವರಿಗೆ ಇದರಲ್ಲಿ ವಿಜ್ಞಾನ ಅಡಗಿದೆ ಎಂಬ ಸತ್ಯ ಗೊತ್ತಿಲ್ಲ. ಕ್ರಿಸ್‌ಮಸ್‌ ಹಬ್ಬಕ್ಕೆ ಗಿಡವನ್ನು ತೆಗೆದು ಕತ್ತರಿಸಿ ತಂದು ಕ್ರಿಸ್‌ಮಸ್‌ ಟ್ರೀ ಎಂದು ತೋರಿಸುವುದು ಮೌಡ್ಯವಲ್ಲವೇ ಎಂದು ಪ್ರಶ್ನಿಸಿದರು.

ಕೋರ್ಟ್‌ ಹಿಜಾಬ್‌ ತೀರ್ಪು ನೀಡಿದಾಗ ಹಿಂದೂ ವಿರೋಧಿ ಸಂಘಟನೆಯವರು ನ್ಯಾಯಾಧಿಧೀಶರನ್ನೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವುದನ್ನು ನೋಡಿದರೆ ನಾವು ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯ ಕಂಡು ಬರುತ್ತದೆ. ಕ್ರೈಸ್ತ ಮಿಶನರಿಗಳ ಕಾನ್ವೆಂಟ್‌ ಶಾಲೆಗಳಲ್ಲಿ ಹಿಂದೂ ಮಕ್ಕಳಿಗೆ ಕುಂಕುಮ, ಬಳೆ, ವಿಭೂತಿ ಹಚ್ಚಬಾರದು ಎಂಬ ನಿಯಮವಿದೆ. ಇಂತಹ ಶಾಲೆಗಳಿಗೆ ನಮ್ಮ ಮಕ್ಕಳನ್ನು ಏಕೆ ಕಳಿಸಬೇಕು. ಹಿಂದೂ ಮಕ್ಕಳಿಗೆ ನಮ್ಮ ಸಂಪ್ರಾದಾಯ, ಆಚಾರ-ವಿಚಾರ ಕಲಿಸಬೇಕು. ಬಸವಣ್ಣರ ಆದಿಯಾಗಿ ಶರಣರ ವಚನ ಸಾಹಿತ್ಯ ಪಠಿಸಬೇಕು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮಕ್ಕಳಿಗೆ ಕಲಿಸುವಂತಹ ಶಿಕ್ಷಣ ಬೇಕು ಎಂದರು.

ಮಕ್ಕಳಿಗೆ ಕಲಿಸುವುದಾದರೆ ಮಯೂರ ವರ್ಮನ ಇತಿಹಾಸ, ಹುಲಿಯನ್ನು ಸೀಳಿ ಹೊಯ್ಸಳ ಸಾಮ್ರಾಜ್ಯ ಕಟ್ಟಿದ ಹೊಯ್ಸಳನ ಸಾಹಸದ ಬಗ್ಗೆ ಕಲಿಸಬೇಕು. ಅದನ್ನು ಬಿಟ್ಟು ಯಾರೋ ಪೈಂಟಿಂಗ್‌ ಚಿತ್ರದಲ್ಲಿ ಹುಲಿ ಹಿಡಿದುಕೊಂಡ ತಕ್ಷಣ ಮೈಸೂರು ಹುಲಿಯಾಗುವುದಿಲ್ಲ. ಅಂತಹ ಇತಿಹಾಸ ಮಕ್ಕಳಿಗೆ ಕಲಿಸುವುದಲ್ಲ ಎಂದರು. ಮುಸ್ಲಿಂ ದಾಳಿಕೋರರು ನಮ್ಮ ಮಂದಿರ, ದೇವಸ್ಥಾನಗಳನ್ನು ನಾಶ ಮಾಡಿ ಮಸೀದಿಗಳನ್ನು ಕಟ್ಟಿದ್ದಾರೆ. ಅವುಗಳನ್ನು ಕಳೆದುಕೊಂಡಾಗ ನಮ್ಮ ಹಿರಿಯರು ಅನುಭವಿಸಿದ ನೋವು, ಸಂಕಟ ನಮ್ಮ ಮುಂದಿನ ಪೀಳಿಗೆಗೆ ಬರಬಾರದು. ಆದ್ದರಿಂದ ಹಿಂದೂಗಳಾದ ನಾವು ಒಂದಾಗಬೇಕಾಗಿದೆ ಎಂದರು.

ಡಿಜೆಗೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ

ಆನವಟ್ಟಿ ಸಮೀಪದ ಕೋಟಿಪುರ ಗ್ರಾಮದಿಂದ ಗ್ರಾಮದ ಕೆ.ಪಿ.ಎಸ್. ಶಾಲೆಯವರೆಗೂ ಡಿಜೆಯೊಂದಿಗೆ ಬಾನುವಾರ ಮೆರವಣಿಗೆಯನ್ನು ಆನವಟ್ಟಿ ಹಿಂದೂ ಸಭಾ ಕಾರ್ಯಕರ್ತರು ಹಮ್ಮಿಕೊಂಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಡಿಜೆಗೆ ಅನುಮತಿ ನೀಡದೆ ತೆರವುಗೊಳಿಸಲಾಯಿತು. ಡಿ.ಜೆ ಅನುಮತಿ ನೀಡುವಂತೆ ಹಿಂದೂ ಸಭಾ ಕಾರ್ಯಕರ್ತರು ಸ್ಥಳದಲ್ಲಿಯೇ ಸುಮಾರು 45 ನಿಮಿಷಗಳ ಕಾಲ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು, ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಇದನ್ನರಿತ ಸಿ.ಪಿ.ಐ., ಪಿ.ಎಸ್.ಐ. ಅವರು ಪ್ರತಿಭಟನಾಕಾರರ ಮನವೊಲಿಸಿ ಡಿ.ಜೆ ಬದಲಾಗಿ ಕಡಿಮೆ ಸೌಂಡ್‌ ಬಳಸಿ ಮೆರವಣಿಗೆ ನಡೆಸಲು ಸಲಹೆ ನೀಡಿದರು.

ನಂತರ ಕೋಟಿಪುರದಿಂದ ಪ್ರಾರಂಭವಾದ ಹಿಂದೂ ಸಮಾವೇಶದ ಬೃಹತ್‌ ಶೋಭಾಯಾತ್ರೆಯು ಆನವಟ್ಟಿಯ ಪಬ್ಲಿಕ್‌ ಶಾಲೆಯವರೆಗೆ ಅದ್ಧೂರಿಯಾಗಿ ನಡೆಯಿತು. ಶೋಭಾಯಾತ್ರೆಯಲ್ಲಿ ಆನವಟ್ಟಿಯ ಅಕ್ಕಪಕ್ಕದ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೇಸರಿ ಶಾಲು ಹಿಡಿದು ಜೈ ಶ್ರೀರಾಮ್‌ ಘೋಷಣೆ ಕೂಗುತ್ತ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.