ಮಾರಾಟಕಿದ್ದ ನಿರ್ಬಂಧ ತೆರವು -ದರ ದುಬಾರಿ!


Team Udayavani, Apr 6, 2020, 4:17 PM IST

ಮಾರಾಟಕಿದ್ದ ನಿರ್ಬಂಧ ತೆರವು -ದರ ದುಬಾರಿ!

ಶಿವಮೊಗ್ಗ: ಚಿಕನ್‌ ಮತ್ತು ಮಾಂಸ ಮಾರಾಟಕ್ಕಿದ್ದ ನಿರ್ಬಂಧ ತೆರವು ಮಾಡಲಾಗಿದ್ದು, ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರ ಕೈ ಸುಡುತ್ತಿದೆ. ಲಾಕ್‌ಡೌನ್‌ಗೂ ಮುನ್ನ 100 ರೂ.ಇದ್ದ ಚಿಕನ್‌ ಕೆ.ಜಿಗೆ ಇಂದು 140-150 ರೂ. ಏರಿದೆ. ಕುರಿ ಮಾಂಸಕ್ಕೆ 400-500ರೂ. ಆಸುಪಾಸಿನಲ್ಲಿತ್ತು. ಆದ್ದರಿಂದ 600-700 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಚಿಕನ್‌, ಮಟನ್‌, ಮೀನು ಮಾರಾಟಕ್ಕೆ ಜಿಲ್ಲೆಯಲ್ಲಿ ಶುಕ್ರವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರ 130 ರೂ. ಗೆ ದೊರೆಯುತ್ತಿದ್ದ ಚಿಕನ್‌ ಶನಿವಾರ 140 ರೂ.ಗೆ ಮಾರಾಟವಾಗಿದೆ.

ಲಾಕ್‌ಡೌನ್‌ ಹಾಗೂ ಹಕ್ಕಿಜ್ವರ ಕಾರಣ ಏಕಾಏಕಿ ಮಾರ್ಕೆಟ್‌ ಬಂದ್‌ ಮಾಡಿದ ಕಾರಣ ಫಾರ್ಮ್ಗಳಲ್ಲಿದ್ದ ಕೋಳಿಗಳನ್ನು ಕೆಲವರು ಜೀವಂತ ಹೂತು ಹಾಕಿದ್ದರು. ಕೆಲವರು ಸಾಯಿಸಿ ಗುಂಡಿಗೆ ಹಾಕಿದ್ದರು. ಇನ್ನೂ ಕೆಲವರು ಸಿಕ್ಕಷ್ಟು ಸಿಗಲೆಂದು ಜನರಿಗೆ ಮಾರಾಟ ಮಾಡಿದ್ದರು. ಹೊಸ ಮರಿಗಳನ್ನು ಬಿಡಲು ಸಹ ಹಿಂದೇಟು ಹಾಕಿದ್ದರು. ಈಗ ಯಾವುದೇ ಚಿಕನ್‌ ಸ್ಟಾಲ್‌ ಗಳಲ್ಲಿ 2ಕೆ.ಜಿ.ಗಿಂತ ದೊಡ್ಡ ಕೋಳಿಗಳು ಸಿಗುವುದು ಕಷ್ಟವಾಗಿದ್ದು, ಫಾರ್ಮ್ಗಳಲ್ಲಿ ಅಳಿದುಳಿದ ಕೋಳಿಗಳೇ ಸರಬರಾಜಾಗುತ್ತಿವೆ. ಹೀಗಾಗಿ, ದರ ಕೂಡ ಏರಿಕೆಯಾಗಿದೆ ಎನ್ನುತ್ತಾರೆ ಮಾರಾಟಗಾರರು.

ಮಾಂಸ ಖರೀದಿಗೆ ಬೇಡಿಕೆ ಇಲ್ಲದಿದ್ದರೂಎಲ್ಲ ಕಡೆ 600 ರೂ.ಗಿಂತ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ಜಾತ್ರೆ ಸಮಯದಲ್ಲೂ ಇಷ್ಟೊಂದು ದರ ಏರಿಕೆಯಾಗಿರಲಿಲ್ಲ. ಕೆಲ ಮಾರಾಟಗಾರರು 15 ದಿನಗಳ ನಷ್ಟವನ್ನು ಒಂದೇ ಬಾರಿಗೆ ಬಾಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇನ್ನು ಮಾಂಸಕ್ಕೆ ಬೇಕಾದ ಕುರಿ, ಮೇಕೆಗಳು ದಾವಣಗೆರೆ, ಚಿತ್ರದುರ್ಗದಂಥ ಜಿಲ್ಲೆಗಳಿಂದ ಬರಬೇಕಿದೆ. ಸರಕು ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶ ಇದ್ದರೂ ಮಾರಾಟಗಾರರು ನೆಪ ಹೇಳುತ್ತಿದ್ದಾರೆ ಎನ್ನಲಾಗಿದೆ.

ತರಕಾರಿ ಕೂಡ ದುಬಾರಿ :  ಎಪಿಎಂಸಿಯಲ್ಲಿ ಖರೀದಿ ಮಾಡಿ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ವರ್ತಕರು ದುಬಾರಿ ದರಕ್ಕೆಮಾರುತ್ತಿರುವ ಆರೋಪಗಳು ಕೇಳಿ ಬಂದಿವೆ. ಹೋಲ್‌ಸೆಲ್‌ ಮಾರಾಟ ದರ ಮಾತ್ರ ಎಪಿಎಂಸಿಯಿಂದ ಒದಗಿಸಲಾಗುತ್ತಿದೆ. ಮಾರಾಟ ಮಾಡುವ ಗಾಡಿಗಳಲ್ಲಿ ದರಪಟ್ಟಿ ಹಾಕಲೇಬೇಕೆಂಬ ನಿಯಮವಿಲ್ಲ. ಇದು ಕೆಲ ವರ್ತಕರಿಗೆ ವರದಾನವಾಗಿದೆ. ಮನಸ್ಸಿಗೆ ಬಂದ ದರಕ್ಕೆ ಮಾರುತ್ತಿದ್ದಾರೆ. ಕೆಲಸ, ಸಂಬಳ ಇಲ್ಲದೇ ಪರದಾಡುತ್ತಿರುವ ಮಧ್ಯಮ, ಬಡ ವರ್ಗದ ಜನರು ಇದರಿಂದ ಹೈರಾಣಾಗಿದ್ದಾರೆ.

 

ಹಾಪ್‌ಕಾಮ್ಸ್‌ ಬೆಸ್ಟ್‌ :  ಹಾಪ್‌ಕಾಮ್ಸ್‌ನಿಂದ ವ್ಯವಸ್ಥೆ ಮಾಡಿರುವ ಲಗೇಜ್‌ ಆಟೋಗಳಲ್ಲಿ ಹಣ್ಣು, ತರಕಾರಿ ಸಿಗುತ್ತಿದೆ. ರೇಟ್‌ಕಾರ್ಡ್‌ ಕೂಡ ಅಳವಡಿಸಲಾಗುತ್ತಿದೆ. ಎಪಿಎಂಸಿ ಹಾಗೂ ಹಾಪ್‌ಕಾಮ್ಸ್‌ಗಳಲ್ಲಿ ನಿಗದಿ ಮಾಡುವ ದರದಲ್ಲೇ ಮಾರಲು ಸೂಚನೆ ನೀಡಲಾಗಿದೆ. ಅನೇಕ ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಗರದ ಎಲ್ಲ 35 ವಾರ್ಡ್ ಗಳಿಗೆ ಇದನ್ನು ಗಾಡಿಗಳನ್ನು ಬಿಡಲಾಗಿದೆ. ಜತೆಗೆ 12 ವಾರ್ಡ್‌ಗಳಲ್ಲಿ ಮಳಿಗೆಗಳು ಇವೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರು ಹಾಪ್‌ಕಾಮ್ಸ್‌ ಮ್ಯಾನೇಜರ್‌ಗೆ ದೂರು ನೀಡಬಹುದು. ಮೊ. 944868731.

ಬಾಳೆಹಣ್ಣು ದುಬಾರಿ ಇಲ್ಲ :  ಬೇರೆ ಜಿಲ್ಲೆಗಳಿಗೆ ಹೋಗಬೇಕಿದ್ದ ಬಾಳೆಹಣ್ಣು ಸಂಚಾರ ಸಮಸ್ಯೆಯಿಂದ ಇಲ್ಲೇ ಉಳಿದ ಪರಿಣಾಮ ಲಾಕ್‌ಡೌನ್‌ಗೂ ಮುಂಚೆ ಇದ್ದ ದರದಲ್ಲೇ ಸಿಗುತ್ತಿದೆ. ಹೋಲ್‌ಸೇಲ್‌ ದರ ಕೆ.ಜಿಗೆ 15ರೂ ಇದ್ದರೆ, ಚಿಲ್ಲರೆ ದರ 30 ರೂ. ಇದೆ.

 

ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ತರಕಾರಿ ವ್ಯಾಪಾರಸ್ಥರಿಗೆ, ಮಾಂಸ, ಕೋಳಿ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಅಂತಹ ಪ್ರಕರಣ ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ದೂರು ನೀಡಬಹುದು.  ಚಿದಾನಂದ ವಟಾರೆ, ಕಮೀಷನರ್‌, ಮಹಾನಗರ ಪಾಲಿಕೆ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.