ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ


Team Udayavani, Aug 30, 2020, 3:46 PM IST

ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ

ಶಿವಮೊಗ್ಗ: ನೀರಾನೆಗಳೇ ಇಲ್ಲದ ಭಾರತದಲ್ಲಿ ನೀರಾನೆ ದಂತ ಸಿಕ್ಕರೆ ಏನಾಗಬಹುದು. ಅದು ಕೂಡ ನಮ್ಮ ಶಿವಮೊಗ್ಗದಲ್ಲಿ! ನೀರಾನೆಗೂ ಶಿವಮೊಗ್ಗಕ್ಕೂ ಎಲ್ಲಿಂದೆಲ್ಲಿನ ಸಂಬಂಧ. ಈತ್ತೀಚೆಗೆ ಸೊರಬ ತಾಲ್ಲೂಕಿನಲ್ಲಿ ಸಿಕ್ಕ ನೀರಾನೆ ದಂತ ಪ್ರಕರಣ ಇಡೀ ದಕ್ಷಿಣ ಭಾರತದಲ್ಲೇ ಮೊದಲನೆಯದ್ದಾಗಿದೆ. ಈ ಪ್ರಕರಣವೀಗ ಅಂತಾರಾಷ್ಟ್ರೀಯ ಸ್ಮಗ್ಲಿಂಗ್‌ಗೆ ತಳುಕು ಹಾಕಿಕೊಂಡಿದ್ದು ತನಿಖೆ ಹಾದಿಯಲ್ಲಿದೆ.

ತಾಂಜೇನಿಯದ ದಂತ!

ಗೋವಾದಲ್ಲಿರುವ 80 ವರ್ಷದ ಮಹಿಳೆ ಈ ಮುಂಚೆ ಆಫ್ರಿಕಾದ ತಾಂಜೇನಿಯದಲ್ಲಿರು. ಆದರೆ, ಕುಟುಂಬ ಸಮೇತ 1960ರಲ್ಲಿ ಅವರು ಗೋವಾಕ್ಕೆ ಮರಳಿದ್ದಾರೆ. ಆಗ ಅವರು ಈ ದಂತಗಳನ್ನು ತಂದಿದ್ದರು. ಆ ದಂತಗಳು ಮನೆಯ ಸ್ಟೋರ್ ಸ್ವಚ್ಛಗೊಳಿಸುವಾಗ ಸಿಕ್ಕಿವೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ದಂತಗಳನ್ನು ಪ್ರಯೋಗಾಲಯಕ್ಕೆ ಒಳಪಡಿಸಿ ಅದು ಯಾವ ವರ್ಷದಲ್ಲಿ ಜೀವಿತವಾಗಿತ್ತು ಎಂಬಿತಾ ದಿ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ.

ಶಿವಮೊಗ್ಗದ ಸೊರಬದಲ್ಲಿ ಸೆರೆಸಿಕ್ಕ ನೀರಾನೆ ದಂತ ಕಳ್ಳಸಾಗಣೆ ಜಾಲಕ್ಕೆ ಗೋವಾ ನಂಟಿದೆ ಹಾಗೂ ನೀರಾನೆ ದಂತ ತಾಂಜೇನಿಯಾ ರಾಷ್ಟ್ರದ್ದು ಎಂದು ಶಿವಮೊಗ್ಗ ಅರಣ್ಯ ವಲಯ ಮುಖ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ರವಿಶಂಕರ್ ಹೇಳಿದ್ದಾರೆ. ಮೊದಲ ಬಾರಿ ಶಿವಮೊಗ್ಗ ಬೆರಗುಗೊಳಿಸಿದ ಪ್ರಕರಣದ ಜಾಡು ಹಿಡಿದು ಹೊರಟ ಶಿವಮೊಗ್ಗ ಅರಣ್ಯ ಸಂಚಾರಿ ದಳಕ್ಕೆ ಸಿಕ್ಕಿದ್ದು ಗೋವಾದಲ್ಲಿ ಮನೆ ಖಾಲಿ ಮಾಡಿ ಹೋಗಿದ್ದ ವೃದ್ಧೆ..!

ಭಾರತದಲ್ಲಿ ನೀರಾನೆ ಪ್ರಬೇಧವೇ ಇಲ್ಲ ಆದರೂ ಶಿವಮೊಗ್ಗದ ಬಾರ್ಡರ್ ಸೊರಬದಲ್ಲಿ ನೀರಾನೆ ದಂತ ಮಾರಾಟಗಾರರನ್ನು ಕಳೆದ ಸೋಮವಾರ ಬಂಧಿಸಲಾಗಿದೆ ಎಂಬ ಸುದ್ದಿ ಅಚ್ಚರಿ ಮೂಡಿಸಿತ್ತು. ಬಂಧಿತರಲ್ಲಿ ಜಾಕೀರ್ ಖಾನ್ ಸೊರಬದ ಚಂದ್ರಗುತ್ತಿಯವನು. ಮುಜಾಫರ್ ಹೊನ್ನಾವರ ಹಾಗೂ ಮೊಹಮ್ಮದ್ ಡ್ಯಾನಿಷ್ ಭಟ್ಕಳದವನು. ಹೀಗಿರುವಾಗ ಅವರ ವಾಹನಗಳು ಮಾತ್ರ ಗೋವಾ ರಿಜಿಸ್ಟ್ರೇಷನ್ ಹೊಂದಿದ್ದು ಇನ್ನಷ್ಟು ಅನುಮಾನಕ್ಕೆಡೆಮಾಡಿತ್ತು. ಅಳಿವಿನಂಚಿನ ನೀರಾನೆ ದಂತಗಳನ್ನ ಆರೋಪಿಗಳ ಸಮೇತ ವಶಕ್ಕೆ ಪಡೆದ ಅರಣ್ಯ ಸಂಚಾರಿ ದಳದ ಖಡಕ್ ಅಧಿಕಾರಿ, ಡಿಸಿಎಫ್ ಬಾಲಚಂದ್ರ ಹೊಸಳ್ಳಿ ಅರ್ಧದಷ್ಟು ತನಿಖೆಯನ್ನ ಮೂರೇ ದಿನಗಳಲ್ಲಿ ಮುಗಿಸಿದ್ದಾರೆ. ಹಾಗೂ ನೀರಾನೆ ದಂತಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಹೆಚ್ಚಿನ ಸಂಶೋಧನೆಗೆ ಕಳುಹಿಸಿಕೊಡಲಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ 70 ಲಕ್ಷ ದೋಚಿದ್ದ ಅಡುಗೆ ಭಟ್ಟನ ಬಂಧನ

ಸೆರೆಸಿಕ್ಕ ಆರೋಪಿಗಳ ಮಾಹಿತಿ ಮೇರೆಗೆ ಗೋವಾ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಈ ಜಾಲದ ಬೇರನ್ನ ಹುಡುಕಿ ಹೊರಟಾಗ ಸಿಕ್ಕವರು ಗೋವಾದ ಅನಿಲ್ ಪರ್ಸೆಕರ್ ಹಾಗೂ ವಿಶಾಲ್. ಅನಿಲ್ ಪರ್ಸೇಕರ್ ವಾಹನದಲ್ಲಿ ನೀರಾನೆ ದಂತಗಳನ್ನ ಕರ್ನಾಟಕದ ಗಡಿ ದಾಟಿಸಲಾಗಿದೆ. ನಮ್ಮ ದೇಶದಲ್ಲಿ ನೀರಾನೆಗಳೇ ಇಲ್ಲ, ದಂತಗಳೆಲ್ಲಿ ಬರಬೇಕು.? ಹಾಗಾದರೆ ಈ ದಂತಗಳು ಹೊರದೇಶದಿಂದಲೇ ಬಂದಿರಬೇಕು. ಈ ಅನುಮಾನ ದಟ್ಟವಾದಾಗ ಎದುರಾಗಿದ್ದು ಗೋವಾದ ವೃದ್ಧೆ.

ನೀರಾನೆ ದಂತ

ಈ ವೃದ್ಧೆ ಗೋವಾದಲ್ಲಿ ಮನೆ ಬದಲಿಸುವಾಗ ಹಳೇ ಕಾಲದ ನೀರಾನೆ ದಂತಗಳನ್ನ ಯಾರಿಗಾದರೂ ಕೊಡುವ ಚಿಂತನೆ ಮಾಡಿದ್ದಾಳೆ. ಅನಿಲ್ ಹಾಗೂ ವಿಶಾಲ್ ಈ ವೃದ್ಧೆಗೆ ಪರಿಚಿತರು. ಬಿಸಾಡುವಂತಹ ದಂತಗಳನ್ನ ನೋಡಿದ ಯುವಕರಿಗೆ ಬಂಗಾರದ ಬೆಲೆ ಗೋಚರವಾಗಿದೆ. ದಂತಗಳನ್ನು ಯಾರಿಗಾದರೂ ಮಾರಿಬಿಡಲೆಂದು ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕವರು ಸೆರೆಸಿಕ್ಕ ಮೂವರು ಆರೋಪಿಗಳು. ಮೇಲ್ನೋಟಕ್ಕೆ ಮೂವರು ಸಾಗಟದಾರರಂತೆ ಕಂಡರೂ ಇವರಿಗೆ ಅಪರಾಧ ಹಿನ್ನೆಲೆಯಿದೆ. ಈ ಆನೆ ದಂತಗಳನ್ನ ವೃದ್ಧೆ ತಾಂಜೇನಿಯಾ ರಾಷ್ಟ್ರದಿಂದ ಹಲವಾರು ದಶಕಗಳ ಹಿಂದೆಯೇ (1962) ತಂದಿದ್ದಾಗಿ  ಹೇಳಿಕೆ ನೀಡಿರುವುದರಿಂದ ಅಧಿಕಾರಿಗಳು ಇದನ್ನು ಉನ್ನತ ಪ್ರಯೋಗಾಲಯಕ್ಕೆ ರವಾನೆ ಮಾಡಲಿದ್ದಾರೆ.

ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆಯಿಂದ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ

ಪ್ರಕರಣ ಭೇದಿಸಿದ್ದು ಹೇಗೆ?

ದಂತಗಳ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದೇ ಅತ್ಯಂತ ಚಾಕಚಕ್ಯತೆಯಿಂದ ವರ್ತಿಸಿರುವ ಸಂಚಾರದ ದಳದ ಸಿಬ್ಬಂದಿ ವ್ಯಾಪಾರಿಗಳ ಸೋಗಿನಲ್ಲಿ ದಾನೀಷ್ ಮತ್ತವರ ಸಹಚರರನ್ನು ಭೇಟಿ ಮಾಡಿದ್ದಾರೆ. ವ್ಯಾಪಾರ ಕುದುರಿಸುವುದಕ್ಕಾಗಿಯೇ ಬಂದಿರುವುದನ್ನು ಖಾತರಿ ಪಡಿಸಿಕೊಂಡ ಬಳಿಕ ದಂತಗಳನ್ನು ತೋರಿಸಲಾಗಿದೆ. ಬಳಿಕ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಜಾಫರ್ ಹಸನ್ (19), ಜಹೀರ್ ಖಾನ್ (34) ಎಂಬುವವರನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆಯ ವೇಳೆ ನೀರಾನೆಗೆ ಗೋವಾ ಸಂಪರ್ಕ ಇರುವುದು ತಿಳಿದು ಅಲ್ಲಿಗೂ ಒಂದು ತಂಡ ಭೇಟಿ ನೀಡಿದೆ. ಆಗ ಸತ್ಯಾಂಶ ಬೆಳಕಿಗೆ ಬಂದಿದೆ.

ಟಾಪ್ ನ್ಯೂಸ್

1-wqewqwqe

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತ ಮೇಲಿನ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Meramec Caverns:ನಿಸರ್ಗದ ರಚನೆಗೆ ಮನಸೋಲದವರ್ಯಾರು….ವಿಸ್ಮಯ, ಕೌತುಕಗಳ ಆಗರ ಗುಹೆಗಳು

Meramec Caverns:ನಿಸರ್ಗದ ರಚನೆಗೆ ಮನಸೋಲದವರ್ಯಾರು….ವಿಸ್ಮಯ, ಕೌತುಕಗಳ ಆಗರ ಗುಹೆಗಳು

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Bulgaria: ಸಾವಿರಾರು ವರ್ಷಗಳ ಇತಿಹಾಸ ಸಾರುವ ನೆಲವಿದು

Bulgaria: ಸಾವಿರಾರು ವರ್ಷಗಳ ಇತಿಹಾಸ ಸಾರುವ ನೆಲವಿದು…

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Agricultural activity ಕೋಳಿ ಸಾಕಣೆಗೆ ತೆರಿಗೆ; ಗ್ರಾ.ಪಂ.ಗಿಲ್ಲ ಅಧಿಕಾರ: ಹೈಕೋರ್ಟ್‌

Agricultural activity ಕೋಳಿ ಸಾಕಣೆಗೆ ತೆರಿಗೆ; ಗ್ರಾ.ಪಂ.ಗಿಲ್ಲ ಅಧಿಕಾರ: ಹೈಕೋರ್ಟ್‌

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

ಸೆ. 30ರ ವರೆಗೆ ಸಬ್‌ರಿಜಿಸ್ಟ್ರಾರ್‌ ಕಚೇರಿ ಕರ್ತವ್ಯದ ಸಮಯ ವಿಸ್ತರಣೆ

Karnataka ಸೆ. 30ರ ವರೆಗೆ ಸಬ್‌ರಿಜಿಸ್ಟ್ರಾರ್‌ ಕಚೇರಿ ಕರ್ತವ್ಯದ ಸಮಯ ವಿಸ್ತರಣೆ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

10–holalkere

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು

1-wqewqwqe

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತ ಮೇಲಿನ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.