ಸಾಗರ: ಪತ್ರಕರ್ತನ ಬೈಕ್ ಕಳ್ಳತನ; ಪತ್ತೆ
Team Udayavani, Sep 12, 2022, 10:38 PM IST
ಸಾಗರ: ಇಲ್ಲಿನ ಜೆಸಿ ರಸ್ತೆಯಲ್ಲಿನ ಗಾಂಧಿಮಂದಿರದ ಪಕ್ಕದ ನಗರಸಭೆ ಕಾಂಪ್ಲೆಕ್ಸ್ನ ಎದುರು ಭಾನುವಾರ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಕಳ್ಳತನವಾಗಿದ್ದ ದ್ವಿಚಕ್ರವಾಹನ ಸೋಮವಾರ ಆರ್ಪಿ ರಸ್ತೆಯಲ್ಲಿನ ಮಲ್ನಾಡ್ ಡಯಗ್ನಾಸ್ಟಿಕ್ ಸೆಂಟರ್ ಬಳಿ ಪತ್ತೆಯಾಗಿದೆ.
ಇಲ್ಲಿನ ವಕೀಲ ಮತ್ತು ಪತ್ರಕರ್ತ ಎಂ.ರಾಘವೇಂದ್ರ ನಗರಸಭೆ ಕಾಂಪ್ಲೆಕ್ಸ್ನ ಎದುರು ಭಾನುವಾರ ಸಂಜೆ ಎಂದಿನಂತೆ ದ್ವಿಚಕ್ರವಾಹನ ನಿಲ್ಲಿಸಿ, ತಮ್ಮ ಕಚೇರಿ ಕೆಲಸಕ್ಕೆ ತೆರಳಿದ್ದರು. ಕಚೇರಿ ಕೆಲಸದ ನಂತರ ರಾತ್ರಿ ಮನೆಗೆ ತೆರಳುವ ಸಂದರ್ಭದಲ್ಲಿ ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಭಾನುವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೋಮವಾರ ದ್ವಿಚಕ್ರವಾಹನ ಸೋಮವಾರ ಆರ್ಪಿ ರಸ್ತೆಯ ಪಕ್ಕದಲ್ಲಿರುವುದು ಪತ್ತೆಯಾಗಿದೆ. ಹ್ಯಾಂಡಲ್ಲಾಕ್ ಹಾಕಿದ್ದರೂ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿದ್ದ ಅಪರಿಚತರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ತೆರಳಿದ್ದರು ಎಂದು ಭಾವಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ