Koratagere ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ 100 ಅಡಿ ಎತ್ತರದ ಶಿವಲಿಂಗ
17 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ.. 17 ಜೋಡಿಗಳ ಸರಳ ವಿವಾಹ ಮಹೋತ್ಸವ
Team Udayavani, Jun 12, 2023, 8:24 PM IST
ಕೊರಟಗೆರೆ: ಮನುಷ್ಯನ ಜೀವನದ ಉನ್ನತಿಗೆ ಗುರಿಯು ಅತಿಮುಖ್ಯ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಮನುಷ್ಯನ ಬದುಕು ವ್ಯರ್ಥ. ಸರಳ ವಿವಾಹದಿಂದ ಮನುಷ್ಯನ ಸುಂದರ ಬದುಕು ನಿರ್ಮಾಣ ಸಾಧ್ಯ.17ನವ ಜೋಡಿಗಳ ಬದುಕು ಸಮೃದ್ದವಾಗಿ ಬೆಳಗಲಿ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಶ್ರೀಮಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಆರ್ಶಿವಚನ ನೀಡಿದರು.
ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಸಸ್ಯಸಂಜೀವಿನಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 17ನೇ ವರ್ಷದ ವಾರ್ಷಿಕೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಾಂತಿ ಸುಖದಾಯಕ ಬದುಕು ನಿರ್ಮಾಣಕ್ಕಾಗಿ ಧರ್ಮದ ಅರಿವು ಅಚರಣೆ ಅಗತ್ಯ. ಬದುಕು ಭಗವಂತ ಕೊಟ್ಟ ಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರ ಧಾರೆಗಳಿವೆ. ಸಿದ್ದರಬೆಟ್ಟ ಶ್ರೀಮಠವು ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬೆಳೆದುನಿಂತಿದೆ. ಶ್ರೀಮಠದ ಪ್ರಾಮಾಣಿಕ ಪ್ರಯತ್ನದ ಭರವಸೆ, ಗುರುಕುಲದ ಕನಸು, ಶಿಕ್ಷಣ ಮತ್ತು ಜನಪರ ಕಾರ್ಯಕ್ಕೆ ನಮ್ಮ ಆರ್ಶಿವಾದ ಸದಾ ಇರಲಿದೆ ಎಂದು ತಿಳಿಸಿದರು.
ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀರಂಭಾಪುರಿ ಜಗದ್ಗುರುಗಳ ಆರ್ಶಿವಾದ ಮತ್ತು ಭಕ್ತರ ಸಹಕಾರದಿಂದ ಧರ್ಮಜಾಗೃತಿಯ ಸಂಕಲ್ಪ. ಸಿದ್ದರಬೆಟ್ಟ ಶ್ರೀಕ್ಷೇತ್ರದ ಧರ್ಮ ಕಾರ್ಯಗಳಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಹಕಾರ ಸೀಗುತ್ತಿದೆ. ಭಕ್ತಾವೃಂದ್ದ ಮತ್ತು ಶ್ರೀಮಠದ ಸಂಬಂಧವೇ ವಾರ್ಷಿಕೋತ್ಸವ ಸಮಾರಂಭ. ಸರಳತೆಯ ವಿವಾಹ ಮಹೋತ್ಸವವು ಆಧುನಿಕ ಸಮಾಜಕ್ಕೆ ಮಾದರಿ ಆಗಲಿದೆ. ಪುಸ್ತಕ ದಾಸೋಹ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವು ಯಶಸ್ವಿಕಂಡಿದೆ ಎಂದು ತಿಳಿಸಿದರು.
ಸಸ್ಯಸಂಜೀವಿನಿ ಸಿದ್ದರಬೆಟ್ಟ ಶ್ರೀಕ್ಷೇತ್ರವು ವಿಶ್ವಪ್ರಸಿದ್ದಿ ಪಡೆದಿದೆ. ಸಿದ್ದರಬೆಟ್ಟ ಶ್ರೀಕ್ಷೇತ್ರದ ಸಿದ್ದೇಶ್ವರ ಸ್ವಾಮಿಯ ಹೆಸರಿನಲ್ಲಿ ೧೦೦ಅಡಿ ಎತ್ತರದ ಶಿವಾಲಿಂಗ ಸ್ಥಾಪನೆಯ ಅಗತ್ಯವಿದೆ. ಶಿವಾಲಿಂಗ ಸ್ಥಾಪನೆಯಿಂದ ಪ್ರವಾಸೋಧ್ಯಮ ಬೆಳೆದು ನಿರುದ್ಯೋಗವು ನಿವಾರಣೆಯಾಗಿ ಉದ್ಯೋಗ ಸೃಷ್ಟಿ ಆಗಲಿದೆ. ಚಿಕ್ಕಬಳ್ಳಾಪುರದ ರೀತಿಯಲ್ಲಿ ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ ಶಿವಲಿಂಗ ಸ್ಥಾಪನೆಗೆ ಸರಕಾರದ ಸಹಕಾರ ಅವಶ್ಯಕತೆ ಇದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಸಿದ್ದರಬೆಟ್ಟ ಶ್ರೀಮಠದ ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯು ಆಧುನಿಕ ಜಗತ್ತಿಯಲ್ಲಿ ಪ್ರಜ್ವಲಿಸುತ್ತಿದೆ. ಸಿದ್ದರಬೆಟ್ಟ ಶ್ರೀಮಠವು ಲಕ್ಷಾಂತರ ಜನ ಭಕ್ತರಿಗೆ ಧರ್ಮದ ವಿಚಾರಧಾರೆ ತಿಳಿಸುವ ಪ್ರಯತ್ನ ಮಾಡಿದೆ. ಮಾಡಿದ್ದಾರೆ. ಸಿದ್ದಗಂಗಾ ಶ್ರೀಮಠದ ರೀತಿಯಲ್ಲಿ ಸಿದ್ದರಬೆಟ್ಟ ಶ್ರೀಮಠವು ಇನ್ನಷ್ಟು ಪ್ರಜ್ವಲಿಸಲಿ. ದೇವರಾಯನದುರ್ಗ, ಗೊರವನಹಳ್ಳಿ, ಕ್ಯಾಮೇನಹಳ್ಳಿ ಮತ್ತು ಸಿದ್ದರಬೆಟ್ಟ ಕ್ಷೇತ್ರವು ಪ್ರವಾಸೋದ್ಯಮ ಅಡಿಯಲ್ಲಿ ಅಭಿವೃದ್ದಿ ಆಗಲಿದೆ ಎಂದು ಭರವಸೆ ನೀಡಿದರು.
ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯು ನಮ್ಮ ಧರ್ಮದ ಗಂಟಿನಲ್ಲಿದೆ. ಧರ್ಮ ಪ್ರಚಾರವು ಯಾರೊಬ್ಬರ ಸ್ವತ್ತು ಅಲ್ಲ. ಧರ್ಮಕ್ಕೆ ಯಾರು ಪಾಲಕ ಆಗೋದಿಕ್ಕೆ ಸಾಧ್ಯವಿಲ್ಲ. ಭಾರತದ ಐಶ್ವರ್ಯವಂತ ವಿಚಾರಧಾರೆ ಪ್ರತಿಯೊಬ್ಬ ಭಾರತೀಯನಿಗೆ ಸೇರಿದೆ. ಸಂವಿಧಾನವು ಅವರವರ ಧರ್ಮ ಆಚರಣೆಗೆ ಅವಕಾಶ ಕಲ್ಪಿಸಿದೆ. ಧರ್ಮವು ಎಲ್ಲರಿಗೆ ಸೇರಬೇಕು ಎಂಬುದೇ ನಮ್ಮ ನಂಬಿಕೆ ಎಂದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಧರ್ಮಪಾಲನೆಯ ಸ್ವಾಮರಸ್ಯ ಮತ್ತು ಶಾಂತಿ ಸುವ್ಯವಸ್ಥೆಗೆ ಶ್ರೀಮಠಗಳ ಸಹಕಾರವು ಇನ್ನಷ್ಟು ಅಗತ್ಯವಿದೆ. ಸಾಮೂಹಿಕ ವಿವಾಹವು ಬಡಮಕ್ಕಳಿಗೆ ಮಾತ್ರ ಸಿಮೀತ ಆಗುವುದು ಬೇಡ. ಉಳ್ಳವರು ಸಹ ಸಾಮೂಹಿಕ ವಿವಾಹ ಮಾಡಿಕೊಂಡರೇ ನಮ್ಮ ಸಮಾಜಕ್ಕೆ ಮಾದರಿ. ಸಿದ್ದರಬೆಟ್ಟ ಶ್ರೀಮಠವು ಪರಿಸರ ಜಾಗೃತಿಗೆ ಹೆಚ್ಚಿನ ಕಾಳಜಿ ವಹಿಸಿದೆ. ಬಡಮಕ್ಕಳ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ರಾಜ್ಯದ ಶ್ರೀಮಠಗಳ ಕೊಡುಗೆ ಅನನ್ಯ. ಸಿದ್ದಗಂಗಾ ಶ್ರೀಮಠವು ಬಡಮಕ್ಕಳ ಶೈಕ್ಷಣಿಕ ದೇವಾಲಯ ಎಂದರೇ ತಪ್ಪಾಗದು ಎಂದು ಹೇಳಿದರು.
ಧರ್ಮಗಳ ನಡುವೆ ಯಾವುದೇ ಬಿರುಕು ಇರಬಾರದು. ಮತಗಳಿಗಾಗಿ ರಾಜಕೀಯ ನಾಯಕರಿಂದ ಮಾತ್ರ ಬಿರುಕು ಉಂಟಾಗುತ್ತೇ ಅಷ್ಟೆ. ಯಾವ ಧರ್ಮವು ಕೂಡ ಮತ್ತೊಂದು ಧರ್ಮದ ವಿರುದ್ದ ಧ್ವೇಷದ ಪ್ರೇರಣೆ ಉಂಟು ಮಾಡೋಲ್ಲ. ನಮ್ಮ ಪೂರ್ವಜರು ನೀಡಿದ ಕೂಡುಗೆಯು ಮುಂದುವರೆಯಲಿದೆ. ಚುನಾವಣೆ ಗೆಲುವು ಹಾಗೂ ಮತಗಳ ದುರಾಸೆಗೆ ಪ್ರಸ್ತುತ ಸಮಾಜದಲ್ಲಿ ಧರ್ಮದ ದ್ವೇಷವು ಬೆಳೆಯುತ್ತಿರೊದು ಖಂಡನೀಯ ಎಂದರು.
ಎಡೆಯೂರು ಶ್ರೀರೇಣುಕಾ ಶಿವಾಚಾರ್ಯರು, ಎಲೆರಾಂಪುರದ ಡಾ.ಹನುಮಂತ ಸ್ವಾಮೀಜಿ, ಬೆಳ್ಳಾವಿಯ ಶ್ರೀವೀರಬಸವ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹಲಕರಟಿಯ ಶ್ರೀಮುನೀಂದ್ರ ಶ್ರೀಗಳು, ಕಲ್ಕೇರಿಯ ಶ್ರೀಸಿದ್ದರಾಮ ಶ್ರೀಗಳು, ತಂಗನಹಳ್ಳಿಯ ಶ್ರೀಬಸವಲಿಂಗ ಶ್ರೀಗಳು, ಹತ್ತಿಕಣವಸ ಪ್ರಭುಶಾಂತ ಶ್ರೀಗಳವರು ಪಾಲ್ಗೊಂಡು 50 ಜನ ವೀರಮಾಹೇಶ್ವರ ಮತ್ತು ಶ್ರೀಮಠದ ಭಕ್ತರಿಗೆ ಅಯ್ಯಾಚಾರ ಶಿವದೀಕ್ಷೆ ನೇರವೇರಿಸಿದ ನಂತರ 17 ಜೋಡಿ ನವ ದಂಪತಿಗಳಿಗೆ ಆರ್ಶಿವಾದ ಮಾಡಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಮುಖಂಡರಾದ ಸಿದ್ದಮಲ್ಲಪ್ಪ, ಬಲರಾಮಯ್ಯ, ಸಿದ್ದಗಿರಿ ನಂಜುಂಡ ಸ್ವಾಮಿ, ಜಯರಾಮ್, ಪುಟ್ಟನರಸಪ್ಪ, ಮಲ್ಲೇಕಾವು ಸೋಮಣ್ಣ, ಅರವಿಂದ್, ತಿಪ್ಪೇಸ್ವಾಮಿ, ಗಿರೀಶ್, ಹರೀಶ್, ನಂಜಾರಾಧ್ಯ, ವಿನಯ್, ರುದ್ರಮುನಿ, ರಾಮಮೂರ್ತಿ ಸೇರಿದಂತೆ ಇತರರು ಇದ್ದರು.
ಶ್ರೀಕ್ಷೆತ್ರದಲ್ಲಿ ಹಬ್ಬದ ಸಡಗರ..
ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀಸಿದ್ದೇಶ್ವರ ಸ್ವಾಮಿಗೆ ಕುಂಭಾಭಿಷೇಕ ಮತ್ತು ಬಿಲ್ವಾರ್ಚನೆ, ಉಚಿತ ಸಾಮೂಹಿಕ ದೀಕ್ಷಾ ಸಂಸ್ಕಾರ ಸಮಾರಂಭ, ಶ್ರೀಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀಬಸವೇಶ್ವರ ಪಲ್ಲಕ್ಕಿ ಉತ್ಸವ, 17ನವ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಜರುಗಿತು. ಗ್ರಂಥಾಲಯ ಸಹಕಾರದಿಂದ ನಡೆದ ಪುಸ್ತಕ ದಾಸೋಹ ಮತ್ತು ಅರಣ್ಯ ಇಲಾಖೆಯ ಸಹಬಾಗಿತ್ವದಿಂದ ಜರುಗಿದ ಸಸಿ ವಿತರಣೆ ಕಾರ್ಯಕ್ರಮ ಯಶಸ್ವಿಕಂಡಿದೆ. ಗುರುರಕ್ಷೆ ಮತ್ತು ಧರ್ಮ ಜನಜಾಗೃತಿ ಕಾರ್ಯಕ್ರಮವು ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ ಹಬ್ಬದ ಸಡಗರದ ವಾತವರಣವನ್ನೇ ಸೃಷ್ಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ