ಹಲಸಿನ ಮರದ ಮುಳ್ಳುತಂತಿಯಲ್ಲಿ ಸಿಲುಕಿ ಮರಿ ಕರಡಿ ಚೀರಾಟ; ರಕ್ಷಣೆ
Team Udayavani, Jul 14, 2022, 9:22 PM IST
ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಸಿದ್ದರಾಜು ಎನ್ನುವವರ ಜಮೀನಿನಲ್ಲಿ ಮರಿ ಕರಡಿಯೊಂದು ಹಲಸಿನ ಮರದ ಮುಳ್ಳುತಂತಿಯಲ್ಲಿ ಸಿಲುಕಿ ಚೀರಾಡಿದ ಘಟನೆ ನಡೆದಿದೆ.
ಕುರಂಕೋಟೆಯ ರೈತ ಸಿದ್ದರಾಜು ಎನ್ನುವವರ ಜಮೀನಿನಲ್ಲಿನ ಹಲಸಿನ ಮರವನ್ನು ಹತ್ತಿ ಕೆಳಗೆ ಇಳಿಯುವಾಗ ಮುಳ್ಳುತಂತಿಗೆ ಕರಡಿ ಕಾಲು ಸಿಲುಕಿಕೊಂಡಿದೆ. ಮುಂಜಾನೆಯೇ ರೈತರು ತಮ್ಮ ಜಮೀನಿನ ಕೆಲಸಕ್ಕೆ ತೆರಳುವಾಗ ಹಲಸಿನ ಮರದಲ್ಲಿ ನೇತಾಡುತ್ತಿದ್ದ ಕರಡಿ ಚಿರಾಟವನ್ನು ಕಂಡು ಕೊರಟಗೆರೆ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ
ಅರಣ್ಯಾಧಿಕಾರಿ ಸುರೇಶ್, ಪಶು ಇಲಾಖೆಯ ಮುಖ್ಯ ವೈಧ್ಯಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ನಾಗರಾಜು, ಮಂಜುನಾಥ, ರಘು, ಚಾಂದುಪಾಷ ಕಾರ್ಯಚರಣೆ ನಡೆಸಿ ಕರಡಿಯನ್ನು ಮತ್ತೆ ಅರಣ್ಯಕ್ಕೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.