ಪಾವಗಡ: ವಿದ್ಯುತ್ ತಗುಲಿ ಯುವಕ ಸಾವು
Team Udayavani, Oct 28, 2022, 4:22 PM IST
ಪಾವಗಡ: ತಾಲೂಕಿನ ಕ್ಯಾತಗಾನಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್ ನ ಅವಾದ್ ಪ್ಲಾಂಟ್ ನಲ್ಲಿ ವಿದ್ಯುತ್ ತಗುಲಿ ಯುವಕನೋರ್ವ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ತಾಲೂಕಿನ ಚಿಕ್ಕಹಳ್ಳಿ ಗ್ರಾಮದ ಗೋಪಾಲ್(22)ಬಿನ್ ತಿಪ್ಪಣ್ಣ ಮೃತರು. ಯುವಕ ತಂತ್ರಜ್ಞನಾಗಿ ಸೋಲಾರ್ ಪ್ಲಾಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ಲಾಂಟ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದು, ತಿರುಮಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಕೆಲ ದಿನಗಳ ಹಿಂದೆ ಗ್ರಾಮದ ಕೆರೆ ತುಂಬಿ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿತ್ತು. ಅಧಿಕಾರಿಗಳು ಪರಿಹಾರ ಕೊಡಿಸುವುದಾಗಿ ರೈತರ ಮನವೊಲಿಸಿ ಕೆರೆ ನೀರು ಹೊರ ಬಿಡಿಸಿದ್ದರು.