ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ; ಆಟಗಾರ ಸ್ಥಳದಲ್ಲೇ ಸಾವು
Team Udayavani, Dec 25, 2022, 10:13 PM IST
ಕುಣಿಗಲ್ : ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಆಟಗಾರನೋರ್ವ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಹೊರ ವಲಯದ ಗಿರಿಗೌಡನಪಾಳ್ಯ ಕ್ರಿಕೆಟ್ ಟ್ರರ್ಪ್ ಮೈದಾನದಲ್ಲಿ ಭಾನುವಾರ ನಡೆದಿದೆ.
ಬೆಂಗಳೂರು ಭುವನೇಶ್ವರಿ ನಗರ ನಿವಾಸಿ ರಮೇಶ್ಕುಮಾರ್ (36) ಮೃತ ಕ್ರಿಕೆಟಿಗ.
ರಮೇಶ್ಕುಮಾರ್ ಹಾಗೂ ಅವರ ತಂಡ ಕ್ರಿಕಟ್ ಆಟವಾಡಲೆಂದು ಗಿರಿಗೌಡನಪಾಳ್ಯ ಕ್ರಿಕೆಟ್ ಟ್ರರ್ಪ್ ಮೈದಾನಕ್ಕೆ ಭಾನುವಾರ ಬಂದಿದ್ದರು ಮಧ್ಯಾಹ್ನ ಸುಮಾರು 1.30 ರ ಸಮಯದಲ್ಲಿ ರಮೇಶ್ ಕುಮಾರ್ ಬ್ಯಾಟಿಂಗ್ ಮಾಡಿ ರನ್ ಓಡುವ ವೇಳೆ ಹೃದಯಘಾತವಾಗಿ ನೆಲಕ್ಕೆ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ .
ರಮೇಶ್ಕುಮಾರ್ ಕುಸಿದು ನೆಲಕ್ಕೆ ಬೀಳುತ್ತಿದ್ದಂತೆ ಸಹ ಆಟಗಾರರು ತಕ್ಷಣ ಓಡಿ ಬಂದು ನೋಡಿದ್ದಾರೆ, ಆದರೆ ಅಷ್ಟರಲ್ಲಿ ರಮೇಶ್ಕುಮಾರ ಮೃತಪಟ್ಟಿದ್ದಾರೆ.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ