ಜಿಲ್ಲೆಯಾಗುವ ಹೊಸ್ತಿಲಲ್ಲೇ ತಾಲೂಕು ಗುಪ್ತಚರ ಘಟಕಕ್ಕೆ ಕುತ್ತು


Team Udayavani, Jul 4, 2023, 3:49 PM IST

ಜಿಲ್ಲೆಯಾಗುವ ಹೊಸ್ತಿಲಲ್ಲೇ ತಾಲೂಕು ಗುಪ್ತಚರ ಘಟಕಕ್ಕೆ ಕುತ್ತು

ಮಧುಗಿರಿ: ಮೊನ್ನೆಯಷ್ಟೆ ಮಧುಗಿರಿ ಜಿಲ್ಲೆ ಯಾಗುವ ಎಲ್ಲ ಅರ್ಹತೆಯಿದ್ದು ಜಿಪಂ ಸಿಇಒ, ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಮಾತ್ರ ಬರಬೇಕಿದ್ದು, ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಕೆ.ಎನ್‌.ರಾಜಣ್ಣ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ ಈಗ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ ರಾಜ್ಯ ಗುಪ್ತಚರ ಇಲಾಖೆ ಮಧುಗಿರಿ ಘಟಕವು ಸದ್ದಿಲ್ಲದೆ ತುಮಕೂರಿಗೆ ಶಿಫ್ಟ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನು ಸಚಿವರು ತಡೆಯಬೇಕಿದೆ.

ತಾಲೂಕು ಆಡಳಿತ, ಆಂತರೀಕ ಚಟುವಟಿಕೆಗಳು, ಅಕ್ರಮ ಚಟುವಟಿಕೆಗಳು ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದ ರಾಜ್ಯ ಗುಪ್ತಚರ ಘಟಕವು ಕಳೆದ 3 ದಶಕಗಳಿಂದ ಮಧುಗಿರಿ ಉಪವಿಭಾಗದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಪಾವಗಡದಲ್ಲಿನ ನಕ್ಸಲ್‌ ಸಮಸ್ಯೆಯನ್ನು ಹತ್ತಿಕ್ಕಲು ರಾಜ್ಯ ಗುಪ್ತದಳವನ್ನು ಆರಂಭಿಸಲಾಗಿತ್ತು. ನಂತರ ನಕ್ಸಲ್‌ ಚಟುವಟಿಕೆ ಪೂರ್ಣವಾಗಿ ನಿಂತಿದ್ದು, ಬಳಿಕ ಅಕ್ರಮ ಚಟುವಟಿಕೆ, ಆಂತರಿಕ ಬುಡಮೇಲು ಚುಟುವಟಿಕೆಗಳನ್ನು ಘಟಕ ವರದಿ ಮಾಡುತ್ತಿತ್ತು. ಈಗಲೂ ಗುಪ್ತದಳ ಅನಿವಾರ್ಯ: ಮಧುಗಿರಿ ಉಪವಿಭಾಗ ಈಗ 4 ತಾಲೂಕುಗಳನ್ನು ಒಳಗೊಂಡ ಜಿಲ್ಲಾ ಕೇಂದ್ರದತ್ತ ಮುಖ ಮಾಡಿರುವ ಗಡಿನಾಡ ಪ್ರದೇಶ. ಇಲ್ಲಿನ ಮಧುಗಿರಿ ಹಾಗೂ ಶಿರಾ ನೆರೆಯ ಆಂದ್ರದ ಜತೆಗೆ ಅಂಟಿಕೊಂಡಿರುವ ಕ್ಷೇತ್ರಗಳು. ಇಲ್ಲಿ ಈಗಲೂ ಅಕ್ರಮ ಮದ್ಯ, ಜೂಜು, ಹಾಗೂ ಕಾನೂನು ಬಾಹಿರ ಕೃತ್ಯಗಳು ಈಗಲೂ ನಡೆಯುತ್ತಿವೆ. ಇದರೊಂದಿಗೆ ರಾಜಕೀಯವಾಗಿ ಗಲಭೆಗಳು ನಡೆಯುವ ಪರಿಸ್ಥಿತಿ ತಳ್ಳಿ ಹಾಕುವಂತಿಲ್ಲ. ಮಧುಗಿರಿಯಲ್ಲಿ ಈಗಲೂ ಧರ್ಮಗಳ ಮಧ್ಯೆ ದ್ವೇಷದ ಭಾವನೆ ಬೂದಿ ಮುಚ್ಚಿದ ಕೆಂಡದಂತಿದೆ.

ಇದನ್ನೆಲ್ಲ ಗುಪ್ತಚರ ಇಲಾಖೆಯು ವರದಿ ಮಾಡಿ ತಡೆಯಲು ಸಹಕಾರ ನೀಡಿತ್ತು. ಇಂತಹ ಘಟಕವನ್ನು ಈಗ ಮಧುಗಿರಿಯಿಂದ ತುಮಕೂರಿಗೆ ಮುಂದೆ ಜಿಲ್ಲೆಯಾಗುವ ಮಧುಗಿರಿಯ ಸಾರ್ವಜನಿಕರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಇದು ಪರೋಕ್ಷವಾಗಿ ಹೊಡೆತ ಬೀಳಲಿದೆ. ಈಗಿದ್ದ ಮಧುಗಿರಿ ಗುಪ್ತಚರ ಘಟಕ ಬಾಡಿಗೆ ಕಟ್ಟಡದಲ್ಲಿದ್ದು, 2 ಪಿಎಸೈ, 2 ಎಸೈ, 4 ಪೇದೆಗಳು, 3 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಘಟಕವನ್ನು ತೆರವುಗೊಳಿಸಲು ಇದೇ 2023 ಜನವರಿಯಲ್ಲೇ ಆದೇಶ ಬಂದಿದ್ದು, ಚುನಾವಣೆಗಾಗಿ ಉಳಿಸಿ ಕೊಳ್ಳಲಾಗಿತ್ತು. ಇದರಿಂದಲೇ ಗುಪ್ತಚರ ಘಟಕ ಅನಿವಾರ್ಯತೆ ಎಷ್ಟೆಂಬುದು ಅರ್ಥವಾಗಲಿದ್ದು ಇದು ಮುಂದುವರಿಯಬೇಕಿದೆ ಎಂಬುದು ಪ್ರಾಜ್ಞರ ಒತ್ತಾಯವಾಗಿದೆ.

ತಾಲೂಕಿನಲ್ಲಿ ಗುಪ್ತಚರ ಘಟಕ ಅನಿವಾರ್ಯವೇಕೆ? : ಮಧುಗಿರಿ ಉಪವಿಭಾಗಕ್ಕೆ ರಾಜ್ಯ ಗುಪ್ತಚರ ಇಲಾಖೆಯ ಘಟಕ ಅನಿವಾರ್ಯ. ಏಕೆಂದರೆ ಮುಂದೆ ಜಿಲ್ಲೆಯಾಗುವ ಮಧುಗಿರಿ ಸೂತ್ತಲೂ ನೆರೆರಾಜ್ಯ ಸುತ್ತುವರಿದಿದೆ. ಅಲ್ಲದೆ ಎಲ್ಲ 4 ಕ್ಷೇತ್ರದಲ್ಲೂ ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ದ್ವೇಷ ಭಾವನೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಾತಾವರಣವಿದೆ. ಮುಂದೆ ಎದುರಾಗಬಹುದಾದ ಕೋಮು ಗಲಭೆಗಳನ್ನು ತಡೆಯಲು ಹಾಗೂ ನೆರೆ ರಾಜ್ಯದಿಂದ ನಡೆಯುವ ಅಕ್ರಮ ನುಸುಳುವಿದೆ, ಮಾದಕ ದಂಧೆಯನ್ನು ಪತ್ತೆಹಚ್ಚಿ ಹತ್ತಿಕ್ಕಲು ಮಧುಗಿರಿ ಉಪ ವಿಭಾಗಕ್ಕೆ ಗುಪ್ತಚರ ಘಟಕ ಬೇಕಾಗಿದೆ. ಈ ವಿಚಾರವನ್ನು ಮನಗಂಡು ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕ ಕೆ.ಎನ್‌.ರಾಜಣ್ಣನವರು ಈ ಘಟಕವನ್ನು ಮತ್ತೆ ಮಧುಗಿರಿಯಲ್ಲೇ ಉಳಿಸಿಕೊಳ್ಳಬೇಕಿದೆ.

ಮಧುಗಿರಿ ಸತೀಶ್‌

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.