ಪವತಿ ಖಾತೆ ಕೆಲಸ ಆಂದೋಲನವಾಗಲಿ: ಡೀಸಿ


Team Udayavani, Nov 20, 2022, 4:42 PM IST

ಪವತಿ ಖಾತೆ ಕೆಲಸ ಆಂದೋಲನವಾಗಲಿ: ಡೀಸಿ

ಮಧುಗಿರಿ: ಜಿಲ್ಲಾದ್ಯಂತ ರೈತರ ಪವತಿ ಖಾತೆಯ ಕೆಲಸ ಆಂದೋಲನದ ರೂಪ ಪಡೆದು ಶೀಘ್ರವಾಗಿ ಇತ್ಯರ್ಥ ಮಾಡಲು ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

ತಾಲೂಕಿನ ಗಿಡದಾಗಲಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಪವತಿ ಖಾತೆ ಕಾರ್ಯಕ್ಕೆ ಚುರುಕು ನೀಡಬೇಕು. ಜಿಲ್ಲೆಯಾದ್ಯಂತ ಕಂದಾಯ ಗ್ರಾಮವಾಗಿಸಲು 502 ಬೇಚಾರ್‌ ಗ್ರಾಮ ಗುರುತಿಸಿದ್ದು, 195 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿದೆ.

ಅನುಮತಿ ಪಡೆದು ಘೋಷಣೆ: ತಾಲೂಕಿನಲ್ಲಿ 47 ಗ್ರಾಮ ಗುರುತಿಸಿದ್ದು 26 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿದ್ದೇವೆ. ಕಂದಾಯ ಗ್ರಾಮವಾಗಿಸಲು ಯಾವುದೇ ಜನ ವಿರೋಧಿ ಕ್ರಮಕ್ಕೆ ಮುಂದಾಗದೇ ಜನರ ಅನುಮತಿ ಪಡೆದು ಘೋಷಿಸಲಾಗುವುದು ಎಂದರು.

ಈ ಗ್ರಾಮದಲ್ಲೂ 25 ಪವತಿ ಖಾತೆಯ ಅರ್ಜಿಯಿದ್ದು ಇತ್ಯರ್ಥಗೊಳಿಸಲಾಗುವುದು. ಜಿಲ್ಲೆಯಾ ದ್ಯಂತ ಇಂತಹ 3,200 ಗ್ರಾಮಗಳಿದ್ದು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಜಾಗ, ಗೋಮಾಳ, ಸ್ಮಶಾನ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಿ ಎಂದರು.

ಗ್ರಾಮದ ಸಂಸ್ಕೃತಿಗೆ ಗೌರವ : ಜಿಲ್ಲಾಧಿಕಾರಿಗಳು ಬಂದಾಗ ತೋರಣ ಕಟ್ಟಿ ಎತ್ತಿನಗಾಡಿಯಲ್ಲಿ ಹಾರಹಾಕಿ ಮೆರವಣಿಗೆ ಮಾಡುವುದು ಆಡಂಬರದ ಕೆಲಸವಲ್ಲ. ಇದು ಗ್ರಾಮಸ್ಥರು ತಮ್ಮ ಗ್ರಾಮದ ಸಂಸ್ಕೃತಿಯನ್ನು ನಮಗೆ ಪರಿಚಯಿಸಿಕೊಡುವ ಕ್ರಿಯೆ. ಅಧಿಕಾರಿಗಳು ಬೇರೆ ರಾಜ್ಯದಿಂದ ಬಂದರೂ ಜನಪರ ಆಡಳಿತ ನೀಡಲು ಕನ್ನಡ ಕಲಿಯಲೇಬೇಕು ಎಂದರು.

ಕನ್ನಡ ಕಲಿತ ರಿಷಿ ಆನಂದ್‌ : ಮಧುಗಿರಿಯ ಉಪವಿಭಾಗಾಧಿಕಾರಿಯಾಗಿ ಕಳೆದ ವಾರ ಅಧಿಕಾರ ವಹಿಸಿಕೊಂಡ ಜಾರ್ಖಂಡ್‌ ಮೂಲದ ಐಎಎಸ್‌ ಅಧಿಕಾರಿ ರಿಷಿ ಆನಂದ್‌ ಹಿಂದಿಯಲ್ಲಿ ಮಾತನಾಡಿ ದ್ದರು. ಆದರೆ ಕೇವಲ ವಾರದಲ್ಲೇ ಕನ್ನಡ ಕಲಿತು ಮಾತ ನಾಡಿದ್ದು ಎಲ್ಲರೂ ಆಶ್ವರ್ಯಚಕಿತರಾದರು. ಇದೊಂದು ಜನಪರ ಕಾರ್ಯಕ್ರಮ ಆಗಿದೆ. ಎಲ್ರೂ ಇದ್ರ ಉಪಯೋಗ್‌ ಪಡಯ್‌ಬೇಕು. ಯಾವ್‌ ಸಮಸ್ಯೆ ಇದ್ರು ನನಗೆ ತಿಳಿಸಿ ಎಂದು ಮಾತು ಮುಗಿಸಿದರು.

ತಹಶೀಲ್ದಾರ್‌ ಸುರೇಶಾಚಾರ್‌ ಮಾತನಾಡಿದರು. ಎಸ್ಪಿ ರಾಹುಲ್‌ ಕುಮಾರ್‌ ಶಹಾಪುರ್‌, ಎಡಿಸಿ ಚನ್ನಬಸಪ್ಪ, ಡಿವೈಎಸ್ಪಿ ವೆಂಕಟೇಶ್‌ನಾಯ್ಡು, ಗ್ರಾಪಂ ಅಧ್ಯಕ್ಷೆ ಜ್ಯೋತಿ, ಪಿಡಿಒ, ಜುಂಜೇಗೌಡ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯಾಧಿಕಾರಿ ಚೆನ್ನವೀರಪ್ಪ, ಗ್ರಾಮ ಲೆಕ್ಕಿಗರಾದ ಹರೀಶ್‌, ರಾಮಗಿರಿ, ಶಶಿ, ರಮೇಶ್‌, ಪ್ರಸನ್ನ, ಶ್ರೀನಿವಾಸ್‌, ಗ್ರಾಮಸ್ಥರು ಜೊತೆಗಿದ್ದರು.

ಬಗರ್‌ಹುಕುಂ ಸಮಿತಿಯಿಂದ ಹಲವು ತಪ್ಪು: ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕ್ಷೇತ್ರದ ಹಿಂದಿನ ಬಗರ್‌ಹುಕುಂ ಸಮಿತಿಯಿಂದ ಹಲವು ತಪ್ಪುಗಳಾಗಿದ್ದು, ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು. ಮಾರೀಪಾಳ್ಯ ಗ್ರಾಮವನ್ನು ಕಂದಾಯ ಗ್ರಾಮವಾಗಿಸುವಲ್ಲಿ ಗೊಂದಲವಿದ್ದು, ಸರಿಪಡಿಸಬೇಕಿದೆ ಎಂದರು.

900 ಜನಸಂಖ್ಯೆಯ ಈ ಗಿಡದಾಗಲಹಳ್ಳಿ ಶಾಲೆಗೆ ರಂಗಭೂಮಿ, ದೇಗುಲದ ಅಭಿವೃದ್ಧಿ, ಸಿಸಿ ರಸ್ತೆ ಹಾಗೂ ನೂತನ ಶಾಲಾ ಕೊಠಡಿ ಸೇರಿ 30 ಲಕ್ಷಕ್ಕೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.