Election ಅವರಿಗೆ ಕಣ್ಣೀರನ್ನೇ ಕೊಟ್ಟರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಹೆಚ್ ಡಿಡಿ
ಮಧುಗಿರಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಆಕ್ರೋಶ..
Team Udayavani, Apr 24, 2023, 4:22 PM IST
ಮಧುಗಿರಿ: ರಾಜಕೀಯ ಬೇಡವೆಂದರೂ ಇಲ್ಲಿಗೆ ಕರೆತಂದು ಲೋಕಸಭೆಯಲ್ಲಿ ನನ್ನ ಸೋಲಿಸಿ ನನ್ನ ಕಣ್ಣೀರಿಗೆ ಕಾರಣದವರಿಗೆ ಕಣ್ಣೀರು ಹಾಕಿಸಿದರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಣ್ಣೀರು ಹಾಕಿದ್ದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಸೋಲಿಗೆ ಕರೆ ನೀಡಿದರು.
ತಾಲೂಕಿನ ಡಿ.ಕೈಮರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು ನಾನು ಸಿಎಂ ಆದಾಗ 1995 ರಲ್ಲಿ ಜಿಲ್ಲೆಯಿಂದ 9 ಸ್ಥಾನ ಕೊಟ್ಟ ಜಿಲ್ಲೆ ಇದು. ಈಗ ನಾಡಿನ ಅಭಿವೃದ್ಧಿ ಬಯಸಿ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿರುವ ಕುಮಾರಸ್ವಾಮಿ ಸಿಎಂ ಆಗಲಿದ್ದು ಜಿಲ್ಲೆಯಿಂದ ಕನಿಷ್ಟ 10 ಸ್ಥಾನಗಳನ್ನು ಜನತೆ ನೀಡಬೇಕು.ರಾಜ್ಯದ ಕಾಂಗ್ರೆಸ್ ಬಿಜೆಪಿಯವರು ಜೆಡಿಎಸ್ ಕೇವಲ ,20 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಉತ್ತರ ಮಧುಗಿರಿಯಿಂದಲೇ ಕೊಡುವುದಾಗಿ ಗುಡುಗಿದರು.
ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳಿದ ರಾಜಣ್ಣ ನಿನಗೆ ಯಾವ ತತ್ವವಿದೆ ಎಂದು ಪ್ರಶ್ನಿಸಿದ ಇಬ್ರಾಹಿಂ ನಾಯಕ ಸಮಾಜಕ್ಕೆ ಮೀಸಲಾತಿ ಕಲ್ಪಿಸಿದ ದೇವೇಗೌಡರನ್ನು ಇಂದು ನೀನೆ ಸ್ವಾಗತಿಸಬೇಕಿತ್ತು. ಮುಸ್ಲಿಂ, ಯಾದವ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಲು ಗೌಡರು ಕಾರಣರಾಗಿದ್ದಾರೆ. ಅಂತಹ ಗೌಡರಿಗೆ ಲೋಕಸಭೆಯ ಚುನಾವಣೆಯಲ್ಲಿ ವಿಷವಿಕ್ಕಿದಿರಿ. ಇದಕ್ಕೆ ಉತ್ತರ ಮಧುಗಿರಿ ಜನತೆ ಈ ಬಾರಿ ಕೊಡ್ತಾರೆ. ಶಾಸಕ ವೀರಭದ್ರಯ್ಯ ಶಾಸಕ ಮಾತ್ರವಲ್ಲ ಮಂತ್ರಿಯಾಗುವ ಯೋಗವಿದೆ ಎಂದಿದ್ದು, ಈ ಬಾರಿ ಶೇ.90 ರಷ್ಟು ಮುಸ್ಲಿಮರು ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ