ಕೊರಟಗೆರೆ : ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವೃದ್ದೆ ಸಾವು
Team Udayavani, Jun 12, 2022, 9:17 PM IST
ಕೊರಟಗೆರೆ : ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದಲ್ಲಿ ನಡೆದಿದೆ.
ಅಕ್ಕಿರಾಂಪುರ ಗ್ರಾಮದ ವಾಸಿಯಾದ ಲಕ್ಷ್ಮಮ್ಮ ಕೋಂ ಬೆಟ್ಟಯ್ಯ(65 ವರ್ಷ) ಮೃತ ಪಟ್ಟ ದುರ್ದೈವಿ.
ಈಕೆ ಎರಡು ಮೂರು ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿದ್ದು , ಆಗಿದ್ದಾಂಗ್ಗೆ ಮನೆಯಿಂದ ಹೊರ ಹೋಗುತ್ತಿದ್ದರು ಎನ್ನಲಾಗಿದೆ. ಅದರಂತೆ ಶನಿವಾರ ರಾತ್ರಿ ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ6.ಗಂಟೆಯ ಸಮಯದಲ್ಲಿ ನಿದ್ದೆಯಿಂದ ಎದ್ದಾಗ ತನ್ನ ತಾಯಿ ಮನೆಯಲ್ಲಿ ಕಾಣಿಸಲಿಲ್ಲ. ಎಲ್ಲಾ ಕಡೆ ಹುಡುಕಾಡಿ ನಂತರ ಮನೆಯ ಹತ್ತಿರ ದೊಡ್ಡಪ್ಪನಾದ ವೀರಸಿದ್ದಯ್ಯರವರ ಜಮೀನಲ್ಲಿರುವ ಬಾವಿಯ ಬಳಿ ಹೋಗಿ ನೋಡಿದಾಗ, ಬಾವಿಯಲ್ಲಿ ತಾಯಿ ಶವ ಪತ್ತೆಯಾಗಿದೆ.
ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗಡಿಯಲ್ಲಿನ ಉದ್ವಿಗ್ನತೆಗೆ ಭಾರತವೇ ನೇರ ಹೊಣೆ; ಚೀನದ ವಿದೇಶಾಂಗ ಸಚಿವ ಆರೋಪ