Koratagere: ರೋಗಿಗಳ ಜೊತೆ ವೈದ್ಯ ಗಲಾಟೆ; ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ


Team Udayavani, Jun 25, 2024, 8:35 PM IST

11-koratagere

ಕೊರಟಗೆರೆ: ನೀನೇನು ಎಸಿನಾ ಅಥವಾ ಡಿಸಿನಾ.. ನಿನ್ನಿಂದ ನಾನು ಹೆದರೋಕೆ.. ನಿನ್ನ ಹೇಸರೇನು ಹೇಳಿ ನೋಡು.. ನಾನೇನು ಮಾಡ್ತೀನಿ ಅಂತಾ ಗೊತ್ತಾಗುತ್ತೆ.. ನಾನು ಯಾರಿಗೂ ಹೆದರೋದಿಲ್ಲ.. ಹೆದರಿಸೋಕೆ ಬರಬೇಡಿ ನೀವು.. ನಾನು ಪ್ರಕರಣ ದಾಖಲು ಮಾಡ್ತಿದ್ರೇ ನೀವು ಜೈಲಿಗೆ ಹೋಗ್ತಿರಾ ಹುಷಾರ್ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ ಚಿಕ್ಕರಂಗಯ್ಯನಿಗೆ ಡಾ.ನವೀನ್ ಹೆದರಿಸಿರುವ ಘಟನೆ ಜೂ.25ರ ಮಂಗಳವಾರ ನಡೆದಿದೆ.

ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂ.25ರ ಮಂಗಳವಾರ ಸುಮಾರು ಬೆಳಿಗ್ಗೆ 11 ಗಂಟೆಯ ಸಮಯ ಈ ಘಟನೆ ನಡೆದಿದೆ. ಡಾ.ನವೀನ್ ಜೂ.24ರ ಸೋಮವಾರ ಬೆ.9ರಿಂದ ಜೂ.25ರ ಮಂಗಳವಾರ ಬೆ.9 ರ ವರೆಗೆ ಕರ್ತವ್ಯನಿರತ ವೈದ್ಯರು. ಆದರೆ ಡಾ.ನವೀನ್‌ಗೆ ಜು. 25ರ ಬೆಳಿಗ್ಗೆ 11 ಗಂಟೆಯ ಮೇಲೂ ಆಸ್ಪತ್ರೆಯಲ್ಲಿ ಏನು ಕೆಲಸ ಇತ್ತು ? ವೈದ್ಯರು ಸಮವಸ್ತ್ರ ಧರಿಸದೇ ರೋಗಿಗಳ ಜೊತೆ ವರ್ತಿಸಿದ ರೀತಿ ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೂ ನವೀನ್‌ಗೂ ಸಂಬಂಧ ಏನು.?

ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ್‌ಗೆ ಪ್ರಶ್ನೆ ಮಾಡ್ತಾರೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯ ಡಾ.ನವೀನ್ ಏಕಾಏಕಿ “ಕಿರುಚಬೇಡಿ ಇಲ್ಲಿ ಹೆದರುವವರು ಯಾರು ಇಲ್ಲ… ನಿನ್ನ ಹೆಸರೇನು.. ನಿನಗೆ ಏನ್ ಮಾಡ್ತೀನಿ ನೋಡ್ತಾ ಇರು” ಎನ್ನುತ್ತಾರೆ. ವೈದ್ಯ ಡಾ.ಪುರುಷೋತ್ತಮ ಅವರು ಡಾ.ನವೀನ್‌ಗೆ ಸುಮ್ಮನಿರಲು ಸೂಚಿಸಿದರೂ ಸುಮ್ಮನಾಗದೇ ಜಗಳಕ್ಕೆ ಇಳಿದಿರುವುದು ಎಷ್ಟು ಸರಿ ಎಂಬುವುದಕ್ಕೆ ಆರೋಗ್ಯ ಇಲಾಖೆಯೇ ಸ್ಪಷ್ಟನೇ ನೀಡಬೇಕಾಗಿದೆ.

ಪೊಲೀಸ್ ಠಾಣೆಯಲ್ಲಿ ದೂರು: ಸಾರ್ವಜನಿಕ ಆಸ್ಪತ್ರೆಯ ಡಾ.ನವೀನ್ ಸಮವಸ್ತ್ರ ಇಲ್ಲದೇ ಚಿಕಿತ್ಸೆಗೆ ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈ ಎತ್ತಿ ಹೊಡೆಯಲು ಬಂದು ಜಾತಿಯ ಹೆಸರು ಹೇಳಿ ನಿಂದನೆ ಮಾಡಿದ್ದಾನೆ ಎಂದು ಕೊರಟಗೆರೆ ಪೊಲೀಸ್ ಠಾಣೆಗೆ ದಲಿತ ಮುಖಂಡ ಚಿಕ್ಕರಂಗಯ್ಯ ದೂರು ನೀಡಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪದೇ ಪದೇ ಕರ್ತವ್ಯಲೋಪ ಮಾಡುವ ಡಾ.ನವೀನ್‌ರನ್ನು ತಕ್ಷಣ ಅಮಾನತು ಮಾಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಮನವಿ ಮಾಡಿರುವ ಘಟನೆ ನಡೆದಿದೆ.

ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ಜಾರಿ: ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿವೆ. ವೈದ್ಯರಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ ಸಮಸ್ಯೆ ಸರಿ ಹೋಗಿಲ್ಲ. ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಆಗಮಿಸದೇ ಇದ್ದರೆ ವೈದ್ಯರೇ ನೇರ ಹೊಣೆ ಆಗಬೇಕಾಗುತ್ತೆ. ಚಿಕ್ಕರಂಗಯ್ಯ ಮೇಲೆ ಡಾ.ನವೀನ್ ನೀಡಿರುವ ದೂರು ಪತ್ರ ಕುರಿತು ವಿಚಾರಣೆ ಪ್ರಯುಕ್ತ ಜೂ.25ರ ಮಧ್ಯಾಹ್ನ 3.30ಕ್ಕೆ ಹಾಜರಾಗುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರೌಡಿಗಳಂತೆ ಡಾ.ನವೀನ್ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತು. ಸಮವಸ್ತ್ರವೇ ಇಲ್ಲದ ಕೊರಟಗೆರೆ ಆಸ್ಪತ್ರೆಯ ವೈದ್ಯ ಡಾ.ನವೀನ್, ನನ್ನ ಮೈಮೇಲಿನ ಬಟ್ಟೆ ಎಳೆದು ಜಾತಿನಿಂದನೆ ಮಾಡಿದ್ದಾರೆ. ಡಾ.ನವೀನ್ ಮೇಲೆ ಪ್ರಕರಣ ದಾಖಲಿಸಲು ಠಾಣೆಗೆ ದೂರು ನೀಡಿದ್ದೇನೆ.  -ಚಿಕ್ಕರಂಗಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ತುಮಕೂರು

ಸರಕಾರಿ ಆಸ್ಪತ್ರೆಗೆ ಚಿಕ್ಕರಂಗಯ್ಯ ಚಿಕಿತ್ಸೆಗೆ ಬಂದಾಗ ಡಾ.ನವೀನ್ ನಡುವೆ ವಾಗ್ವಾದ ನಡೆದಿದೆ. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸೌಮ್ಯತೆಯಿಂದ ವರ್ತಿಸಲು ಈಗಾಗಲೇ ನವೀನ್‌ಗೆ ಸೂಚಿಸಲಾಗಿದೆ. ದೂರಿನ ಬಗ್ಗೆ ನನಗೇನು ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಆಗದಂತೆ ಎಲ್ಲರಿಗೂ ಸೂಚಿಸಲಾಗುವುದು. ಆರೋಗ್ಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದೆ. –ಡಾ. ಲಕ್ಷ್ಮೀಕಾಂತ ಟಿ.ಎಸ್., ಮುಖ್ಯ ಆಡಳಿತ ವೈದ್ಯಾಧಿಕಾರಿ, ಕೊರಟಗೆರೆ

Ad

ಟಾಪ್ ನ್ಯೂಸ್

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

fadnavis

Maharashtra; ಧಾರ್ಮಿಕ ಸ್ಥಳಗಳಿಂದ 3,367 ಧ್ವನಿವರ್ಧಕಗಳ ತೆರವು : ಸಿಎಂ ಫಡ್ನವಿಸ್

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ತಿರುಪತಿ ದೇಗುಲದ 1000 ಹಿಂದೂಯೇತರ ಸಿಬಂದಿ ಕೆಲಸ: ಕೇಂದ್ರ ಸಚಿವ

ತಿರುಪತಿ ದೇಗುಲದಲ್ಲಿ 1000 ಹಿಂದೂಯೇತರ ಸಿಬಂದಿಗಳಿಂದ ಕೆಲಸ: ಬಂಡಿ ಸಂಜಯ್ ಆರೋಪ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-koratagere

ಸಾರ್ವಜನಿಕ ಸ್ಮಶಾನದ ಅಭಿವೃದ್ಧಿಗೆ ಮೀನಾಮೇಷ: ಎ.ಸಿ., ಡಿ.ಸಿ. ಸೂಚನೆಗೂ ಕೇರ್ ಮಾಡದ ಗ್ರಾ.ಪಂ.

10-koratagere-1

Koratagere: ಕಲ್ಲುಕ್ವಾರೆ ಅವಘಡ; ಓರ್ವ ಸಾವು, ಇಬ್ಬರಿಗೆ ಗಾಯ

Kunigal-Accisdent1

ಕ್ಯಾಂಟರ್-ಕಾರು ನಡುವೆ ಭೀಕರ ಅಪಘಾತ: ಒಂದೇ‌ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃ*ತ್ಯು 

KN-Rajanna

ಪ್ರಧಾನಿ ಮೋದಿ ಬಿಜೆಪಿಯ ಮಾರ್ಗದರ್ಶಕ ಮಂಡಳಿಗೆ ಹೋಗಬೇಕು: ಕೆ.ಎನ್‌.ರಾಜಣ್ಣ

Koratagere: ನಿದ್ದೆ ಮಂಪರು… ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್…

Koratagere: ನಿದ್ದೆ ಮಂಪರು… ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್…

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

POLICE-5

Brahmavar: ಮದ್ಯ ಅಕ್ರಮ ಮಾರಾಟ; ಪ್ರಕರಣ ದಾಖಲು

1

Hiriydaka: ಆನ್‌ಲೈನ್‌ ವಂಚನೆ; 3.60 ಲಕ್ಷ ರೂ. ಕಳೆದುಕೊಂಡ ಯುವತಿ

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.