ಕೊರಟಗೆರೆ: ಮಣ್ಣು ತುಂಬುವ ವಿಚಾರದಲ್ಲಿ ಜಗಳ ; ಟ್ರ್ಯಾಕ್ಟರ್ ಡ್ರೈವರ್ ಹತ್ಯೆ
Team Udayavani, Sep 29, 2022, 4:45 PM IST
ಕೊರಟಗೆರೆ: ಮಣ್ಣು ತುಂಬುವ ವಿಚಾರದಲ್ಲಿ ಜಗಳವಾಗಿ ಮಾಲೀಕನೋರ್ವ ಟ್ರ್ಯಾಕ್ಟರ್ ಡ್ರೈವರ್ ಗೆ ಕಾಲಿನಿಂದ ಒದ್ದು ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ತೋವಿನಕೆರೆ ಹೋಬಳಿಯ ಮಣುವಿನಕುರಿಕೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಉಗ್ರಪ್ಪ ಹತ್ಯೆಗೀಡಾದ ವ್ಯಕ್ತಿ.
ಉಗ್ರಪ್ಪ ಟ್ರ್ಯಾಕ್ಟರ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಣುವಿನಕುರಿಕೆ ಗ್ರಾಮದಲ್ಲಿ ಟ್ರ್ಯಾಕ್ಟರ್ ನಿಂದ ಮಣ್ಣು ತುಂಬಿಕೊಂಡು ಹೋಗುವಾಗ ಹಳ್ಳವೂಂದರಲ್ಲಿ ಟ್ರ್ಯಾಕ್ಟರ್ ಸಿಲುಕಿಕೊಂಡು ಹೊರ ತೆಗೆಯಲು ಜೆಸಿಬಿ ಕರೆಸಿಕೊಂಡಾಗ ಜೆಸಿಬಿ ಬಾಡಿಗೆ ತಂದಿದ್ದ ಅದೇ ಗ್ರಾಮದ ಪ್ರಕಾಶ್ ನನ್ನ ಕೆಲಸ ಹಾಳು ಮಾಡಿದ್ದಿ ಎಂದು ಮಾತಿನ ಚಕ ಮಕಿ ನಡೆದು ಘಟನೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ಆರೋಪಿ ಪ್ರಕಾಶ್ ನಾನು ಜೆಸಿಬಿ ಇಟ್ಟು ಮಣ್ಣು ಹೊಡೆಸುತ್ತಿದ್ದು, ನೀನು ನನ್ನ ಕೆಲಸ ಹಾಳು ಮಾಡುತ್ತಿದ್ದೀಯಾ ನಿನ್ನ ಟ್ರ್ಯಾಕ್ಟರ್ ಸಿಲುಕಿಕೊಂಡರೆ ನಿನ್ನ ಹಣೆಬರಹ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಉಗ್ರಪ್ಪನನ್ನು ಎಳೆದಾಡಿ ಕಾಲಿನಿಂದ ನಾಲ್ಕೈದು ಬಾರಿ ಒದ್ದ ಪರಿಣಾಮ ಉಗ್ರಪ್ಪನಿಗೆ ತೀವ್ರತರ ಲಿವರ್ ಹಾಗೂ ಶ್ವಾಸಕೋಶಕ್ಕೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ನಂತರ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಿದರಾದರು ಪ್ರಯೋಜನವಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಮೃತ ಉಗ್ರಪ್ಪ ಬಡತನದಿಂದ ಜೀವನ ಸಾಗಿಸುತ್ತಿದ್ದು ಟ್ರ್ಯಾಕ್ಟರ್ ಡ್ರೈವರ್ ಆಗಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದು, ಅಂಗವಿಕಲ ಮಡದಿ ಹಾಗೂ ಅಂಗ ವಿಕಲ ಮಗಳು ಅನಾಥವಾಗಿದ್ದು ದಿಕ್ಕು ಕಾಣದಂತಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ. ಸುರೇಶ್ ಹಾಗೂ ಪಿಎಸ್ಐ ನಾಗರಾಜ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ