ಪುಂಡರ ಕಡಿವಾಣಕ್ಕೆ ಮಫ್ತಿವೇಷ ಹಾಕಿದ ಕೊರಟಗೆರೆ ಪಿಎಸೈ: 10ಕ್ಕೂ ಅಧಿಕ ಬೈಕ್ ವಶಕ್ಕೆ
ಪಿಎಸೈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ
Team Udayavani, Jan 18, 2023, 10:06 PM IST
ಕೊರಟಗೆರೆ: ಪುಂಡರಿಂದ ರಾಗಿಂಗ್ ಮತ್ತು ವಿನಾಕಾರಣ ಹಾರನ್ ಕಿರಿಕಿರಿ ಕಡಿವಾಣಕ್ಕೆ ಮಫ್ತಿಯಲ್ಲಿಯೇ ರಸ್ತೆಗಿಳಿದ ಕೊರಟಗೆರೆ ಪಿಎಸೈ ಚೇತನ್ಗೌಡ.. ಶಾಲಾ-ಕಾಲೇಜು ಪ್ರಾರಂಭಕ್ಕೂ ಮುನ್ನಾ ಮತ್ತು ಮುಕ್ತಾಯದ ನಂತರ ಸಾವಿರಾರು ವಿದ್ಯಾರ್ಥಿಗಳ ನಡುವೆ ಸಾಮಾನ್ಯರಂತೆ ನಿಂತು ಸಾರ್ವಜನಿಕ ಪ್ರದೇಶದಲ್ಲಿ ಮಫ್ತಿಯ ವೇಷದಲ್ಲಿ ಪೊಲೀಸರ ಕಾರ್ಯಚರಣೆ ನಡೆದಿದೆ.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣ, ಸಂತೆ ಮೈದಾನ, ಬಾಲಕಿಯರ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಖಾಸಗಿ ಬಸ್ ನಿಲ್ದಾಣ, ಟೀ ಅಂಗಡಿ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಕೆಲಸವೇ ಇಲ್ಲದೇ ವಿನಾಕಾರಣ ತಿರುಗಾಡುವ ಪುಂಡರಿಗೆ ಬಿಸಿಮುಟ್ಟಿಸುವ ಕೆಲಸವನ್ನು ಕೊರಟಗೆರೆ ಪಿಎಸೈ ಚೇತನ್ಗೌಡ ನೇತೃತ್ವದ ಪೊಲೀಸರ ತಂಡ ಮಾಡಿದೆ.
ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬೈಕ್ ವಿಲಿಂಗ್ ಮಾಡೋದು. ವಿದ್ಯಾರ್ಥಿಗಳಿಗೆ ರಸ್ತೆ ಬೀಡದೇ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು. ಹೆಣ್ಣು ಮಕ್ಕಳನ್ನು ಹಿಂದೆಯಿಂದ ಚುಡಾಯಿಸುವ ಕೆಲಸ. ಜೋರಾಗಿ ಹಾರನ್ ಹೊಡೆದು ಕಿರಿಕಿರಿ ಉಂಟು ಮಾಡೋದು. ರಸ್ತೆಯ ಮಧ್ಯೆ ಕಾದು ಕುಳಿತು ಸಮಸ್ಯೆ ಸೃಷ್ಟಿಸೋದು ಸೇರಿದಂತೆ ಹತ್ತಾರು ದೂರುಗಳು ಪೊಲೀಸರ ಗಮನಕ್ಕೆ ಬಂದಾಕ್ಷಣವೇ ಪೊಲೀಸರು ಪೀಲ್ಡಿಗಿಳಿದು ಕಾರ್ಯಚರಣೆ ನಡೆಸಿದ್ದಾರೆ.
ಶಾಲಾ-ಕಾಲೇಜು ಆವರಣ, ಟೀಅಂಗಡಿ, ಚಿಲ್ಲರೇ ಅಂಗಡಿ, ಹೊಟೇಲ್ನ ಮುಂದೆ ಕಾರಣವೇ ಇಲ್ಲದೇ ಕಾರು, ಆಟೋ ಮತ್ತು ದ್ವಿಚಕ್ರ ವಾಹನ ನಿಲ್ಲಿಸಬಾರದು. ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಿದೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದ್ರು ತಕ್ಷಣ ಪೊಲೀಸರ ಗಮನಕ್ಕೆ ತರಬಹುದಾಗಿದೆ ಎಂದು ಕೊರಟಗೆರೆ ಪಿಎಸೈ ಚೇತನ್ಗೌಡ ಜನರಲ್ಲಿ ಮನವಿ ಮಾಡಿರುವ ಘಟನೆಯು ನಡೆದಿದೆ.
ವಾಹನಗಳ ಪತ್ತೆ ಹಚ್ಚಿ ಕಾರ್ಯಚರಣೆ..
ಕಾಲೇಜು ಸಮಯದಲ್ಲಿ ಅತಿವೇಗದ ಚಾಲನೆ ಮತ್ತು ವಿನಾಕಾರಣ ತಿರುಗಾಡುವ ದ್ವಿಚಕ್ರವಾಹನ, ಆಟೋ ಮತ್ತು ಕಾರುಗಳ ಮಾಹಿತಿಯನ್ನು ಎರಡು ದಿನದ ಮುಂಚೆಯೇ ಕೊರಟಗೆರೆ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಮಾರನೇಯ ದಿನವೇ ಪಿಎಸೈ ಚೇತನ್ಗೌಡ ನೇತೃತ್ವದ ಪೊಲೀಸರ ತಂಡ ಬೀಸಿದ ಬಲೆಗೆ ದ್ವಿಚಕ್ರ ವಾಹನ ಸಮೇತ ಪುಂಡರು ಬಿದ್ದಿದ್ದಾರೆ. 10ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಪುಂಡ ಯುವಕರಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯುವ ವಿದ್ಯಾರ್ಥಿಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿ ಜಾಗೃತೆ ವಹಿಸಬೇಕಿದೆ. ೧೮ವರ್ಷದ ಒಳಗಿನ ಮಕ್ಕಳಿಗೆ ಪೋಷಕರು ದ್ವಿಚಕ್ರ ವಾಹನ ನೀಡಬಾರದು. ವಿದ್ಯಾಥಿಗಳಿಗೆ ಏನೇ ಸಮಸ್ಯೆ ಇದ್ದರೂ ನೇರವಾಗಿ ಬಂದು ಠಾಣೆಗೆ ದೂರುನೀಡಿ. ಟೀಅಂಗಡಿ ಮತ್ತು ಹೊಟೇಲ್ ಮಾಲೀಕರು ಪುಂಡರಿಗೆ ವಿನಾಕಾರಣ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರೇ ತಕ್ಷಣ ನಾನೇ ಸ್ಥಳಕ್ಕೆ ಬರುತ್ತೇನೆ.
– ಚೇತನ್ಗೌಡ. ಪಿಎಸೈ. ಕೊರಟಗೆರೆ
ಇದನ್ನೂ ಓದಿ: ಪುತ್ತೂರು: ಯುವತಿಗೆ ಚೂರಿ ಇರಿತ ಪ್ರಕರಣ… ಘಟನೆ ನಡೆದ 24 ತಾಸಿನೊಳಗೆ ಆರೋಪಿ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ