ಪಾವಗಡ: ಸಾಲದ ಹೊರೆ ಹೆಚ್ಚಿ ರೈತ ಆತ್ಮಹತ್ಯೆ
Team Udayavani, Jul 6, 2023, 5:57 PM IST
ಪಾವಗಡ: ಸಾಲದ ಹೊರೆ ಹೆಚ್ಚಿ ತಾಲೂಕಿನ ಕಿಲಾರ್ಲಹಳ್ಳಿ ಗ್ರಾಮದ ರೈತರೊಬ್ಬರು ಗುರುವಾರ ಜಮೀನು ನಲ್ಲಿ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.
ತಾಲೂಕಿನ ಕಿಲಾರ್ಲಹಳ್ಳಿ ಗ್ರಾಮದ ಭೀಮಪ್ಪ(62) ಮೃತರು. ಬ್ಯಾಂಕ್ ನಲ್ಲಿ ಸಾಲ ಕೈ ಸಾಲ ಇರುವುದಾಗಿ ಭೀಮಪ್ಪ ಹೇಳುತ್ತಿದ್ದರು. ಯಾವಾಗ ಸಾಲ ತೀರುತ್ತದೆಯೋ ಎಂಬುದಾಗಿ ಆತಂಕ ವ್ಯಕ್ತಪಡಿಸುತ್ತಿದ್ದರು. ಸಾಲ ಭಾದೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಪಟ್ಟಣ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.