ವ್ಯಕ್ತಿಯ ಮೇಲೆ ಪೊಲೀಸ್ ಮುಖ್ಯ ಪೇದೆಯಿಂದ ದೌರ್ಜನ್ಯ;ವಿಡಿಯೋ ವೈರಲ್
Team Udayavani, Nov 11, 2022, 9:16 PM IST
ಕುಣಿಗಲ್ : ನಾಗರಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಮುಖ್ಯ ಪೇದೆ ವ್ಯಕ್ತಿಯೋರ್ವನಿಗೆ ಅವಾಚ್ಯವಾಗಿ ನಿಂಧಿಸಿ, ಮನ ಬಂದತೆ ಥಳಿಸಿರುವ ಘಟನೆ ಕುಣಿಗಲ್ ತಾಲೂಕು ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದ್ದು, ಚರ್ಚೆಗೆ ಗ್ರಾಹಸವಾಗಿದೆ.
ಅಮೃತೂರು ಪೊಲೀಸ್ ಠಾಣೆಯ ಮುಖ್ಯಪೇದೆ ಕೇಶವ ನಾಯ್ಕ್ ವ್ಯಕ್ತಿಯೋರ್ವನ ಮೇಲೆ ಯಾತಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ಹಲ್ಲೆಗೆ ಒಳಗಾದ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ.
ಮೂಲಗಳ ಪ್ರಕಾರ ಕೌಟುಂಬಿಕ ವಿಚಾರ ಸಂಬಂಧ ವ್ಯಕ್ತಿರ್ಯೊವನ್ನು ಠಾಣೆಗೆ ಕರೆ ತದು, ವಿಚಾರಣೆ ವೇಳೆ ಆಕ್ರೋಶಗೊಂಡ ಠಾಣೆಯ ಮುಖ್ಯಪೇದೆ ಕೇಶವನಾಯ್ಕ್ ವ್ಯಕ್ತಿಯ ಬಾಯಿಗೆ ಬೂಟು ಇಡುತ್ತೇನೆ ಎಂದು ಅಶ್ಲೀಲ ಪದ ಬಳಸುತ್ತಾ ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವುದು ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ವೇದಿಕೆ ಎಂಬ ಪೇಸ್ ಬುಕ್ ಖಾತೆಯಲ್ಲಿ ವೈರೆಲ್ ಆಗಿದೆ. ಈ ಸಂಬಂಧ ಪೊಲೀಸ್ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ.