ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ
Team Udayavani, Jun 13, 2021, 8:33 PM IST
ತುಮಕೂರು: ಬೆಂಗಳೂರು – ಅರಸೀಕೆರೆ- ಶಿವಮೊಗ್ಗ ಸೇರಿದಂತೆ ಇತರೆ ನಗರಗಳಿಗೆಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕು ಎಂದು ಜಿÇÉಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದಅವರು, ಎರಡು ಮೂರು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ವಿನಾಕಾರಣ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಪ್ರಸ್ತುತ ಮುಂಗಾರು ಮಳೆ ಶುರುವಾಗಿದ್ದು, ಇಡೀರಸ್ತೆ ಮಣ್ಣು, ಗುಂಡಿಗಳಿಂದ ಕೂಡಿದೆ. ಸಾರ್ವಜನಿಕರು ರಸ್ತೆ ದುಸ್ಥಿತಿ ಕಂಡು ಶಾಪಹಾಕುತ್ತಿದ್ದಾರೆ. ಆದ್ಯತೆ ಮೇಲೆ ಈಕಾಮಗಾರಿಯನ್ನು ಮುಗಿಸಿ ಎಂದುಎಂಜಿನಿಯರ್ಗಳಿಗೆ ಸೂಚಿಸಿದರು.
ಈ ಹೆದ್ದಾರಿಯಲ್ಲಿ ತೆರವುಗೊಳಿಸಿರುವಮುಜರಾಯಿ ಇಲಾಖೆಗೆ ಸಂಬಂಧಿಸಿದದೇವಾಲಯಗಳಿಗೆ ಪರ್ಯಾಯವಾಗಿಬೇರೆಡೆ ದೇವಾಲಯಗಳನ್ನು ನಿರ್ಮಾಣಮಾಡಬೇಕು ಎಂದರು. ಸಂಸದ ಜಿ.ಎಸ್.ಬಸವರಾಜ…, ಶಾಸಕ ಬಿ.ಸಿ.ನಾಗೇಶ್,ಎಸ್.ಆರ್.ಶ್ರೀನಿವಾಸ್, ಡಾ.ರಾಜೇಶ್ಗೌಡ, ಎಸ್ಪಿ ರಾಹುಲ್ಕುಮಾರ್, ಎಡಿಸಿಚನ್ನಬಸಪ್ಪ, ಎಸಿ ಅಜಯ… ಹಾಗೂಎಂಜಿನಿಯರ್, ಗುತ್ತಿಗೆದಾರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ