ಪುರಾತನ ವಿಷ್ಣು ವಿಗ್ರಹ ಪತ್ತೆ
Team Udayavani, Apr 22, 2021, 4:55 PM IST
ಗುಬ್ಬಿ: ಕೆರೆಯಲ್ಲಿ ಹೂಳು ತೆಗೆಯುವ ಸಂದರ್ಭ 600ವರ್ಷದ ಪುರಾತನ ಕಲ್ಲಿನ ವಿಷ್ಣು ವಿಗ್ರಹ ಪತ್ತೆಯಾದ ಘಟನೆತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ.ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ನಡೆದಿದ್ದು, 15ಅಡಿ ಆಳದಲ್ಲಿ ಜೆಸಿಬಿ ಯಂತ್ರಕ್ಕೆ ಸಿಲುಕಿದ ಈ ವಿಗ್ರಹವನ್ನುಗ್ರಾಮಸ್ಥರು ಸುರಕ್ಷಿತವಾಗಿ ಮೇಲೆತ್ತಿದರು.
ಕೂಡಲೇ ಪುರಾತತ್ವಇಲಾಖೆಗೆ ಮಾಹಿತಿ ರವಾನಿಸಲಾಗಿದ್ದು, ನಂತರ ಸ್ಥಳಕ್ಕೆ ಬಂದಇತಿಹಾಸ ತಜ್ಞ ಶ್ರೀನಿವಾಸ್ ಅಮ್ಮನಘಟ್ಟ ವಿಗ್ರಹವನ್ನುಪರಿಶೀಲನೆ ನಡೆಸಿದರು.ಹೊಯ್ಸಳರ ಕಾಲದ ಈ ವಿಗ್ರಹ ಸುಂದರವಿಷ್ಣುಮೂರ್ತಿಯಾಗಿದ್ದು, ವಿಗ್ರಹದ ಪ್ರಭಾವಳಿ ಸುತ್ತಲಿನಲ್ಲಿದ ಶವತಾರದ ಚಿತ್ರಗಳು ಮನಮೋಹಕವಾಗಿದೆ.
ಆದರೆ,ವಿಗ್ರಹದ ಎರಡು ಕೈಗಳು ತುಂಡರಿಸಲಾಗಿದೆ. ಅಂದಿನ ಶತ್ರುಗಳದಾಳಿಗೆ ಸಿಲುಕಿದ ವಿಷ್ಣುಮೂರ್ತಿಯ ಆಕರ್ಷಣಿಯ ಮುಖಸಹ ಭಿನ್ನವಾಗಿದೆ. ಹಾಗಲವಾಡಿ ಚನ್ನಕೇಶವ ಸ್ವಾಮಿದೇವಾಲಯಕ್ಕೆ ಸಂಬಂಧಿಸಿರಬಹುದು ಎಂದು ಪ್ರಾಥಮಿಕಮಾಹಿತಿ ತಿಳಿಸಿದ್ದಾರೆ.5 ಅಡಿಗಳ ಈ ಕಲ್ಲು ವಿಗ್ರಹ ಪೂಜೆ ಪುನಸ್ಕಾರಪಡೆದಿರಬಹುದು ಎನ್ನಲಾಗಿದೆ.
ಸ್ಥಳೀಯ ಹಿರಿಯರುಚನ್ನಕೇಶವಸ್ವಾಮಿ ದೇವಾಲಯ ಸಹ ಹೊಯ್ಸಳರಕಾಲದ್ದಾಗಿದೆ. ಈ ವಿಗ್ರಹ ಇಲ್ಲಿಗೆ ಸಂಬಂಧಿಸಿರಬಹುದು. ದಾಳಿನಡೆದ ಸಂದರ್ಭದಲ್ಲಿ ಕೆರೆಯ ಪಾಲಾಗಿದೆ. ಈಗ ವಿಗ್ರಹಸಿಕ್ಕಿರುವುದು ಗ್ರಾಮಕ್ಕೆ ಒಳಿತಾಗಲಿದೆ ಎಂದು ನಂಬಿದ್ದಾರೆ.ಸಧ್ಯಕ್ಕೆ ದೇವಾಲಯದಲ್ಲೇ ವಿಗ್ರಹ ಇಡಲಾಗಿದೆ. ಪುರಾತತ್ವಇಲಾಖೆ ಸ್ಪಷ್ಟ ಚಿತ್ರಣ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ