ಸಿದ್ಧಗಂಗಾ ಮಠ ನಿಸ್ವಾರ್ಥ ಕಾರ್ಯ: ಅಮಿತ್ ಶಾ
Team Udayavani, Apr 2, 2022, 8:15 PM IST
ತುಮಕೂರು: ನಾನು ಮೂರನೇ ಬಾರಿಗೆ ಶ್ರೀಮಠಕ್ಕೆಬರುತ್ತಿದ್ದೇನೆ. ಪ್ರತಿ ಸಾರಿ ಬಂದಾಗಲೂ ಮಾನವಜೀವನದ ಅತ್ಯಂತ ಉತ್ಕೃಷ್ಟ ಆದರ್ಶಗಳನ್ನುಕಲಿತುಕೊಂಡು ಹೋಗಿದ್ದೇನೆ. ಇಡೀ ದೇಶದಲ್ಲಿ ರಾಮ,ಕೃಷ್ಣ ಮತ್ತು ಇತರೆ ಸ್ವಾಮೀಜಿಗಳ ಹೆಸರಿನ ಅನೇಕಮಠಗಳು ಸ್ಥಾಪನೆಯಾಗಿವೆ.
ಆದರೆ, ಎಲ್ಲಮಠಗಳಿಗಿಂತ ಸಿದ್ಧಗಂಗಾ ಮಠ ನಿಸ್ವಾರ್ಥ ಕಾರ್ಯಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿರಾಷ್ಟ್ರೀಯ ನಾಯಕ ಅಮಿತ್ ಶಾ ಹೇಳಿ ದರು.ಬೇಡಿ ಬರುತ್ತಿರುವ ಭಕ್ತರ ಇಷ್ಟಾರ್ಥ ಸಿದ್ಧಿಸುವದೇವರಾಗಿರುವ ಕರ್ನಾಟಕ ರತ್ನ ಡಾ.ಶಿ ವ ಕು ಮಾರಸ್ವಾಮೀ ಜಿ ಯ ವರ 115ನೇ ಜಯಂತ್ಯು ತ್ಸವ ಹಿನ್ನೆಲೆ ಶ್ರೀಗಳಗದ್ದುಗೆಗೆ ಶುಕ್ರ ವಾರ ವಿಶೇಷ ಪೂಜೆ ಸಲ್ಲಿಸಿ ಮಾತ ನಾ ಡಿದರು.
ಶೈಕ್ಷಣಿಕ ನಗರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿತುಮಕೂರು ವಿಶ್ವ ವಿದ್ಯಾನಿಲಯ ಹೆಲಿಪ್ಯಾಡ್ನಿಂದಹೊರ ಬರುತ್ತಿದ್ದಂತೆ ವಿವಿ ಮುಂಭಾಗದಿಂದ ಮಠದವರೆಗೆ ರಸ್ತೆಯ ಎರಡೂ ಬದಿ ಸಾವಿರಾರು ಸಂಖ್ಯೆಯಲ್ಲಿಬಿಜೆಪಿ ಕಾರ್ಯಕರ್ತರು ಮತ್ತು ನಾಗರಿಕರು ಸೇರಿಹೂಮಳೆ ಭವ್ಯ ಸ್ವಾಗತ ಕೋರಿದರು.ನಂತರ ಶ್ರೀ ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನುಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ವಾಗತಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕೇಂದ್ರಹಾಗೂ ರಾಜ್ಯದ ಸಚಿವರು ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ