ತುರುವೇಕೆರೆ: ಪ್ರಪಂಚಕ್ಕೆ ಭಾರತವೇ ದೇವರ ಮನೆ: ಸ್ವಾಮೀಜಿ

ಶ್ರೀರೇಣುಕಾಚಾರ್ಯರು ಎಲ್ಲಾ ಮುನಿವರ್ಯರಿಗೂ ಶಿಖರವಿದ್ದಂತೆ

Team Udayavani, Apr 4, 2024, 5:55 PM IST

ತುರುವೇಕೆರೆ: ಪ್ರಪಂಚಕ್ಕೆ ಭಾರತವೇ ದೇವರ ಮನೆ: ಸ್ವಾಮೀಜಿ

■ ಉದಯವಾಣಿ ಸಮಾಚಾರ
ತುರುವೇಕೆರೆ: ಪ್ರತಿಯೊಂದು ಮನೆಗೆ ದೇವರ ಮನೆ ಹೇಗೆ ಇರುತ್ತದೋ, ಹಾಗೆಯೇ ಪ್ರಪಂಚಕ್ಕೆ ಭಾರತವೇ ದೇವರ ಮನೆ ಇದ್ದ ಹಾಗೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀವೀರಶೈವ ಸಮಾಜ, ಬಸವೇಶ್ವರ ಯುವಕ ಸಂಘ, ಪಾರ್ವತಿ ಮಹಿಳಾ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುಣ್ಯಭೂಮಿ: ಭಾರತ ಸಂಸ್ಕೃತಿಯ ನೆಲೆವೀಡು. ಇಲ್ಲಿ ದೈವೀ ಶಕ್ತಿ ಇದೆ. ಗುರು ಹಿರಿಯರು ಸೇರಿದಂತೆ ಎಲ್ಲರಿಗೂ ಗೌರವ ಕೊಡುವ ಪದ್ಧತಿ ಇದೆ. ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಸಾವಿರಾರು ತಪಸ್ವಿಗಳು ನೆಲೆಸಿದ ಪುಣ್ಯ ಭೂಮಿ. ಯೋಗಪುರುಷರು ಜನಿಸಿದ ಕ್ಷೇತ್ರ. ಹಾಗಾಗಿ ಈ ಪುಣ್ಯ ಭೂಮಿ ಪ್ರಪಂಚದ ದೇವಾಲಯವಾಗಿದೆ ಎಂದು ಶ್ರೀಗಳು ಹೇಳಿದರು.

ಮಾರ್ಗದರ್ಶಕರು: ಶ್ರೀರೇಣುಕಾಚಾರ್ಯರು ಎಲ್ಲಾ ಮುನಿವರ್ಯರಿಗೂ ಶಿಖರವಿದ್ದಂತೆ. ಎಲ್ಲ ಮಹಾಪುರುಷರಿಗೂ ಅವರು ಮಾರ್ಗದರ್ಶಕರಾಗಿದ್ದರು. ರೇಣುಕಾಚಾರ್ಯರು ಮಾನವತಾವಾದಿಯಾಗಿದ್ದರು. ಅವರು ಜಾತಿ ಬೇಧ ಮಾಡದೇ ಮನುಕುಲ ಶ್ರೇಯಸ್ಸಿಗೆ ದುಡಿದವರಾಗಿದ್ದರು. ರೇಣುಕಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಮಾಡಿದ್ದ ಸಾಧನೆ ಇಂದಿಗೂ ಎಲ್ಲರೂ ನೆನೆಯುವಂತೆ ಮಾಡಿದೆ.

ಸರ್ವರ ಹಿತ ಕಾಯುವ ಮನಸ್ಥಿತಿ ಇದ್ದ ರೇಣುಕಾಚಾರ್ಯರ ಮಾರ್ಗದರ್ಶನದಲ್ಲಿ ಎಲ್ಲ ಮಠಾಧಿಪತಿಗಳು ನಡೆಯುವಂತಾಗಬೇಕು ಎಂದು ಸಲಹೆ ನೀಡಿದರು.

ನಾಶ ಎಂಬುದಿಲ್ಲ: ಯೋಗಶಕಿಯ್ತಿಂದ ಜನ ಹೆಚ್ಚು ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ನಿರೋಗಿಯಾಗಿ ಬದುಕಬಹುದು. ಯಾರು ಯೋಗದೊಂದಿಗೆ ಪರಮಾತ್ಮನ ಸೇವೆ ಮಾಡುವನೋ ಅವನೇ ಸುಖಿ ಜೀವಿ. ಲಿಂಗ ಪೂಜೆ ಮಾಡುವವನು ಜಗತ್ತೇ ನನ್ನದು. ಎಲ್ಲರೂ ಸುಖ ಸಂತೋಷದಿಂದ ಇರಲಿ ಎಂದು ಆಶಿಸುವವನು ಆಗಿರುತ್ತಾನೆ. ದೇವಾನು ದೇವತೆಗಳೇ ಲಿಂಗಪೂಜೆ ಮಾಡುತ್ತಿದ್ದರು. ಮೊದಲ ಪೂಜೆಯೇ ಲಿಂಗಪೂಜೆಯಾಗಿತ್ತು. ಲಿಂಗಪೂಜೆ ಮಾಡುವವನಿಗೆ ನಾಶ ಎಂಬುದೇ ಇರುವುದಿಲ್ಲ ಎಂದರು.

ಪ್ರದಾನ: ಶಿವಗಂಗಾ ಮೇಲಣಗವಿ ಮಠದಿಂದ ಕೊಡ ಮಾಡುವ ಶಿವಗಂಗಾ ಪ್ರಶಸ್ತಿಯನ್ನು ಮುಂಬರುವ ವರ್ಷದಲ್ಲಿ ಕಾಡ ಸಿದ್ದೇಶ್ವರ ಮಠವನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದು ಎಲ್ಲರ ಬದುಕಿಗೆ ದಾರಿ ದೀಪವಾಗಿ ಸೇವೆ ಮಾಡುತ್ತಿರುವ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಿಸಿದರು.

ಹಿತ ಕಾಯುವ ಧರ್ಮ: ಭಕ್ತರಿಗೆ ಆಶೀರ್ವಚನ ನೀಡಿದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮೀಜಿ, ವೀರಶೈವ ಧರ್ಮ ಆಲದ ಮರವಿದ್ದಂತೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ವೀರಶೈವ ಧರ್ಮ ಸರ್ವರ ಹಿತ ಕಾಯುವ ಧರ್ಮವಾಗಿದೆ ಎಂದರು.

ಸಮಾರಂಭದಲ್ಲಿ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಸಮಾಜದ ಮುಖಂಡರಾದ ಗುರುಚನ್ನಬಸವಾರಾಧ್ಯ, ಎಸ್‌.ಎಂ.ಕುಮಾರಸ್ವಾಮಿ, ಮುಖ್ಯ ಶಿಕ್ಷಕ ನಟೇಶ್‌, ಚಂದ್ರಶೇಖರ್‌, ಸುನೀಲ್‌ ಬಾಬು, ಡಾ.ರುದ್ರಯ್ಯ‌ ಹಿರೇಮಠ್, ಅಂಬಿಕಮ್ಮ, ನಿರ್ಮಲಾ, ಗಣೇಶ್‌, ಚಿದಾನಂದ್‌, ರೇಣುಕೇಶ್‌, ವಿಶ್ವನಾಥ್‌, ವಕೀಲ ಧನಪಾಲ್‌, ಮಲ್ಲಿಕಾರ್ಜುನ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಟೇಶ್‌ ಸ್ವಾಗತಿಸಿದರು. ಸುನೀಲ್‌ ಬಾಬು ನಿರೂಪಿಸಿದರು.

ಶೀಘ್ರ ಕೃಷಿ ಉತ್ಪನ್ನಕ್ಕೆ ಬೆಲೆ ಬರಲಿದೆ
ನಾವು ಏನೇ ಕಾಯಕ ಮಾಡಿದರೂ ಬಹಳ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಏಕಾಗ್ರತೆ ಇರಬೇಕು. ವ್ಯವಸಾಯ ಎಂಬುದು ಭೂತಾಯಿಯ ಸೇವೆಯಂತೆ. ಆದರೆ, ಈಗ ಭೂತಾಯಿಯ ಸೇವೆ ಮಾಡುವವರಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಇಡೀ ಜೀವಸಂಕುಲಕ್ಕೆ ಜೀವನಾಧಾರ ಆಗಿರುವ ರೈತರ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದ ಅರಿವಿಗೆ ಬರಲಿದೆ. ಎಷ್ಟೇ ಹಣ, ಚಿನ್ನ, ಬೆಳ್ಳಿ ಸಂಪಾದಿಸಿದರೂ ಎಲ್ಲರೂ ರೈತರು ಬೆಳೆಯುವ ಆಹಾರವನ್ನೇ ತಿನ್ನಬೇಕು. ಮುಂಬರುವ ದಿನಗಳಲ್ಲಿ ಆಹಾರದ ಬೆಲೆ ಏನು ಎಂಬುದು ಅರಿಗೆ ಬರಲಿದೆ ಎಂದು ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಟಾಪ್ ನ್ಯೂಸ್

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha-Kharandlaje

Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್‌ ಸರ್ಕಾರ: ಕೇಂದ್ರ ಸಚಿವೆ ಶೋಭಾ 

5-tumkur

Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ

4-koratagere

Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.