ನಿಲ್ಲದ ಚಿರತೆ ಕಾಟ…;ಕಂಗಾಲಾದ ಕೊರಟಗೆರೆ ತಾಲೂಕಿನ ಜನತೆ


Team Udayavani, Jan 12, 2023, 7:05 PM IST

1-sada-dad

ಕೊರಟಗೆರೆ : ಕಳೆದ ಒಂದು ತಿಂಗಳಿನಿಂದ ಚಿರತೆಗಳ ಕಾಟ ತಾಲೂಕಿನಾದ್ಯಂತ ಹೆಚ್ಚಾಗಿ ಕಂಡುಬರುತ್ತಿದ್ದು ಕಾಡಿನಿಂದ ಚಿರತೆಗಳು ನಾಡಿಗೆ ಬರುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.

ಕಳೆದ ತಿಂಗಳಿನಲ್ಲಿ ತಾಲೂಕಿನ ಇರಸಂದ್ರ ಕಾಲೋನಿಯಲ್ಲಿ ಚಿರತೆಗಳ ಕಾಟದಿಂದ ಇಬ್ಬರು ಮಕ್ಕಳು,ಇಬ್ಬರು ಹಿರಿಯರ ಮೇಲೆ ದಾಳಿ ನಡೆಸಿತ್ತು, ನಂತರ ಕಳೆದ ವಾರದಲ್ಲಿ ಕೊರಟಗೆರೆ ಪಟ್ಟಣದ ಬಸವನ ಬೆಟ್ಟದಲ್ಲಿ ಒಂದು ತಿಂಗಳಿನಿಂದ  ಜಾನುವಾರುಗಳನ್ನು ತಿನ್ನುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಕೊರಟಗೆರೆ ತಾಲೂಕಿಗೆ ಹೊಂದಿಕೊಂಡಂತೆ ತಿಮ್ಮಲಾಪುರ ಅರಣ್ಯ ಪ್ರದೇಶ ಮತ್ತು ದೇವರಾಯನ ದುರ್ಗ ಪ್ರದೇಶಗಳಿದ್ದು,  ಚಿರತೆಗಳ ಮತ್ತು ಕರಡಿಗಳ ಸಂತತಿ ಹೆಚ್ಚಿದ್ದು, ಆಹಾರ ಅರಸಿ ನಾಡಿಗೆ ಬರುವುದು ಮಾಮೂಲಿಯಾಗಿದ್ದು ಇತ್ತೀಚೆಗೆ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮವಾಗಿ ಮಾಘ ಮಾಸದಲ್ಲಿ ಹೆಚ್ಚಿನ ರಾತ್ರಿ ಅವಧಿ ಇರುವುದರಿಂದ ಚಿರತೆಗಳು ನಾಡಿಗೆ ಬರುವುದು ಹೆಚ್ಚಾಗಿದೆ.

ತಾಲೂಕಿನ ಹೊಳವನಹಳ್ಳಿ ಹೋಬಳಿಯ,ಸೋಂಪುರ ಗ್ರಾಮದ ಕೆರೆಯ ಸುತ್ತಮುತ್ತಲಿನ ಕಳೆದ 4 ದಿನಗಳಿಂದ ರೈತರ  ಜಮೀನುಗಳಲ್ಲಿ ಚಿರತೆಯ ಓಡಾಡಿರುವಂತಹ ಹೆಜ್ಜೆ ಗುರುತುಗಳು ಗ್ರಾಮಸ್ಥರ ನಿದ್ದೆಗೆಡಿಸಿದ್ದು ಗ್ರಾಮಸ್ಥರು ಮನೆಯಿಂದ ಹೊರ ಬರಲು  ಭಯಭೀತರಾಗಿದ್ದಾರೆ.

ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರನ್ನು  ಗ್ರಾಮಸ್ಥರು ಭೇಟಿಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದ್ದ ಹಿನ್ನೆಲೆಯಲ್ಲಿ  ಗ್ರಾಮಸ್ಥರ ಜೊತೆಯಲ್ಲಿ  ಸೋಂಪುರ ಗ್ರಾಮದ ರೈತ ವಿಶ್ವೇಶ್ವರಯ್ಯರವರ ಜಮೀನಿಗೆ ಭೇಟಿಕೊಟ್ಟು ಅಲ್ಲಿ ಪತ್ತೆಯಾದ ಹೆಜ್ಜೆ ಗುರುತುಗಳನ್ನು ಕಂಡು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗ ಚಿರತೆ ಸೆರೆಹಿಡಿಯಲು ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆಗೆ ಏನು ಮಾಡುತ್ತಿದೆ ?

ನಿರಂತರವಾಗಿ ತಾಲೂಕಿನ ಒಂದಿಲ್ಲೊಂದು ಭಾಗದಲ್ಲಿ ಚಿರತೆಗಳ ಓಡಾಟ ಮತ್ತು ದಾಳಿಗಳು ಕಾಣಸಿಗುತ್ತಿದ್ದು ಅರಣ್ಯ ಇಲಾಖೆ ಇನ್ನೂ ದಾಳಿ ಮಾಡಿದ ಸಂದರ್ಭದಲ್ಲಿ, ಗ್ರಾಮಸ್ಥರ ಮನವಿಗೆ ಬೋನುಗಳನ್ನು ಇಡುತ್ತಾರೆ ಆದರೆ ಎರಡು ಮೂರು ದಿನವಾದ ನಂತರ ತೆಗೆದುಕೊಂಡು ಹೋಗುತ್ತಾರೆ ತಾಲೂಕಿನಲ್ಲಿ ಇಲ್ಲಿಯವರೆಗೆ ಎರಡು ಚಿರತೆ ಮಾತ್ರ ಸೆರೆ ಸಿಕ್ಕಿದ್ದು 5 ಕ್ಕೂ ಚಿರತೆಗಳು ಕೊರಟಗೆರೆ ಪಟ್ಟಣದ ಸನಿಹದ ಬಸವನ ಬೆಟ್ಟದಲ್ಲಿಯೇ ಇವೆ ಎಂದು ರೈತರು ಹೇಳುತ್ತಿದ್ದು ರೈತರಿಗೆ ಕೇವಲ ಒಂದು ಚಿರತೆಯನ್ನು ಹಿಡಿದರೆ  ಸಾಲದು ಇವುಗಳಿಂದ ನಮಗೆ ರಕ್ಷಣೆ ಬೇಕು ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಹೆಚ್ಚಾಗಿ ಚಿರತೆಗಳು ಹಿಂದೆ ಕೆರೆಯ ಪೊದೆಗಳಲ್ಲಿ ವಾಸ ಮಾಡುತ್ತಿದ್ದವು. ಇತ್ತೀಚೆಗೆ ಮಳೆ ಹೆಚ್ಚಾಗಿ ಬಹುತೇಕ ಕೆರೆಗಳು ನೀರಿನಿಂದ ತುಂಬಿದ್ದು ಚಿರತೆಗಳು ಕೆರೆ ಪೊದೆಗಳ ಆಶ್ರಯ ಇಲ್ಲದಂತಾಗಿದ್ದು ಇವುಗಳು ಹಳ್ಳಿಗಳ ಸನಿಹದಲ್ಲಿರವಂತಹ ಪೊದೆಗಳಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದು ಎಲ್ಲಿಯಾದರೂ ಹೊಂದಿಕೊಂಡು ಬದುಕುವಂತಹ ಸ್ವಭಾವ ಚಿರತೆ ಇರುವುದರಿಂದ ಅವು ಎಲ್ಲೆಡೆ ಬದುಕುತ್ತಿದ್ದು ಇದರ ಜೊತೆಗೆ ವರ್ಷಕ್ಕೆ ಚಿರತೆ  ಎರಡು ಬಾರಿ ತಲಾ ಎರಡೆರಡು ಮರಿ ಹಾಕುವುದರಿಂದ ಚಿರತೆಗಳ ಸಂತತಿ ಹೆಚ್ಚುತ್ತಿದ್ದು ಇದರಿಂದ ಚಿರತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ತಾಲೂಕು ಬಹುತೇಕ ಅರಣ್ಯ ಪ್ರದೇಶಗಳಿಂದ ಸುತ್ತು ವರೆದಿದೆ.ಹಿರೇಬೆಟ್ಟ, ಕುರಂಕೋಟೆ, ಮಿಂಚಗಲ್ಲು, ದೊಡ್ಡವಾಡಿ, ಕವರಗಲ್ಲು, ಸೋಳೇಕಲ್ಲು, ಸೇರಿದಂತೆ ತಿಮ್ಮಲಾಪುರ, ದೇವರಾಯನ ದುರ್ಗ  ಅರಣ್ಯದಲ್ಲಿ ಹೆಚ್ಚಾಗಿ ಚಿರತೆಗಳು ಕಂಡು ಬರುತ್ತಿದೆ ನಮ್ಮಲ್ಲಿ 4 ಬೋನುಗಳು ಇದ್ದು ಎಲ್ಲಿ ಜನರಿಗೆ ಚಿರತೆ ಇರುವ ಮಾಹಿತಿ ಸಿಕ್ಕಿದರೆ ಅಲ್ಲಿ ಇರುವಂತಹ ಪ್ರಯತ್ನ ಮಾಡುತ್ತಿದ್ದೇವೆ ಈಗಾಗಲೇ ಎರಡು ಚಿರತೆಗಳನ್ನು ಹಿಡಿದಿದ್ದೇವೆ ಸಾರ್ವಜನಿಕರು ಇವಕ್ಕೆ ಹೆದರದೇ ಇರಬೇಕು ಇವು ದಿನಕ್ಕೆ 10 ರಿಂದ 20 ಮೀ ಸಂಚಾರ ಮಾಡುತ್ತವೆ. ಯಾರು ಹೆದರುವ ಅವಶ್ಯಕತೆಯಿಲ್ಲ.-ಸುರೇಶ್, ಸಹಾಯಕ ನಿರ್ದೇಶಕ ವಲಯ ಅರಣ್ಯಾಧಿಕಾರಿ, ಕೊರಟಗೆರೆ

ನಾವು ನಿತ್ಯ ಕೃಷಿ ಕೆಲಸಕ್ಕೆ ಹೋಗುತ್ತೇವೆ. ಈ ಚಿರತೆಗಳ ದಾಳಿಯನ್ನು ಎಲ್ಲೆಡೆ ನೋಡುತ್ತಿದ್ದರೆ ನಮಗೆ ಭಯವಾಗುತ್ತದೆ ನಮಗೆ ಅರಣ್ಯ ಇಲಾಖೆಯವರು ಇವುಗಳನ್ನು ನಿಯಂತ್ರಿಸುವಂತಹ ಅಥವಾ ಬೇರೆಡೆಗೆ ಸ್ಥಳಾಂತರಿಸುವ ಇತರೆ ಯಾವುದಾರೂ ಮಾರ್ಗೋಪಾಯಗಳನ್ನು ಕಂಡು ಹಿಡಿದು ನಮಗೆ ಇವುಗಳ ಉಪಟಳದಿಂದ ಮುಕ್ತಿ ಕೊಡಬೇಕಿದೆ.-ರಾಮಣ್ಣ, ರೈತ, ಸೋಂಪುರ

ವರದಿ-ಸಿದ್ದರಾಜು. ಕೆ ಕೊರಟಗೆರೆ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.