ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ: ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ
Team Udayavani, May 28, 2022, 2:09 PM IST
ಕುಣಿಗಲ್ : ಬೇಗೂರು ಗ್ರಾ.ಪಂ ಸದಸ್ಯನೋರ್ವನಿಗೆ ಅವಾಚ್ಯವಾದ ಶಬ್ದಗಳಿಂದ ನಿಂದಿಸಿ ಕಪಾಳ ಮೋಕ್ಷ ಮಾಡಿರುವ ಕುಣಿಗಲ್ ಪೊಲೀಸ್ ಠಾಣೆ ಪಿಎಸ್ ಐ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಬೇಗೂರು ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ನಾರಾಯಣ್ ಎಂಬುವವರನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಸಂಬಂಧ ವಿಚಾರ ತಿಳಿಯಲು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿ.ಹೆಚ್ ನಾಗನಂದ್ ಠಾಣೆ ಬಳಿಗೆ ಹೋಗಿದ್ದಾಗ ಇಲ್ಲಿನ ಪಿಎಸ್ ಐ ಲಕ್ಷ್ಮಣ್ ಅನುಮತಿ ಇಲ್ಲದೆ ಹೇಗೆ ಒಳಗೆ ಪ್ರವೇಶ ಮಾಡಿದೆ ಎಂದು ಏಕಾಏಕಿ ನಾಗನಂದ ಅವರನ್ನು ಏಕ ವಚನದಲ್ಲಿ ನಿಂದಿಸಿ ಕೆನ್ನೆಗೆ ಹೊಡೆದು ಶೆರ್ಟ್ ಕಾಲರ್ ನ್ನು ಹಿಡಿದು ಹೊರಗೆ ನೂಕಿದ್ದಾರೆ ಎಂದು ಆರೋಪಿಸಿ ನೂರಾರು ಮಂದಿ ಠಾಣೆಗೆ ನುಗ್ಗಿ ಪಿಎಸ್ ಐ ವಿರುದ್ದ ಧಿಕ್ಕಾರ ಕೂಗಿ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಪಡಿಸುವಂತೆ ಆಗ್ರಹಿಸಿದರು.