ನೀರಿಗಾಗಿ ಗ್ರಾಪಂಗೆ ಬೀಗ ಹಾಕಿದ ಮಹಿಳೆಯರು
Team Udayavani, May 4, 2019, 3:20 PM IST
ತುರುವೇಕೆರೆ ತಾಲೂಕಿನ ಮುನಿಯೂರು ಗ್ರಾಪಂ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ನೂರಾರು ಮಹಿಳೆಯರು ಶಾಶ್ವತ ನೀರಿಗಾಗಿ ಆಗ್ರಹಿಸಿ ಖಾಲಿ ಕೊಡ ಹಿಡಿದು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತುರುವೇಕೆರೆ: ಕೂಡಲೇ ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸಬೇಕೆಂದು ಒತ್ತಾಯಿಸಿ ಮುನಿಯೂರು ಗ್ರಾಪಂ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ನೂರಾರು ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬೋರ್ವೆಲ್ ಕೊರೆಸಿ: ತಾಲೂಕಿನ ಬಳ್ಳೆಕಟ್ಟೆ ಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 250ಕ್ಕೂ ಹೆಚ್ಚು ಜನರು ವಾಸಿಸುತ್ತಿ ದ್ದಾರೆ. ಬಳ್ಳೆಕಟ್ಟೆ ಗ್ರಾಮದ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿತ್ತು. ಆದರೆ ಸುಮಾರು 4 ವರ್ಷದಿಂದ ಕೊಳವೆ ಬಾವಿಯಲ್ಲಿ ನೀರು ಬಾರದೆ ಕುಡಿಯಲು ನೀರಿಲ್ಲದೆ ಜನರಿಗೆ ನೀರಿನ ಹಾಹಾಕಾರ ತಲೆದೋರಿದೆ. ಗ್ರಾಪಂ ಕೇವಲ ದಿನಕ್ಕೆ ಒಂದು ಟ್ಯಾಂಕರ್ ಮಾತ್ರ ನೀರು ನೀಡು ತ್ತಿದೆ. ಟ್ಯಾಂಕರ್ ನೀರು ಹಿಡಿಯಲು ಕೆಲಸ ಕಾರ್ಯ ಬಿಟ್ಟು ದಿನವಿಡೀ ಕಾಯು ವಂತಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ನೂತನ ಬೋರ್ವೆಲ್ ಕೊರೆಸಬೇಕು. ಇಲ್ಲದಿದ್ದರೆ ತಾಪಂ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪರಿಹಾರ ಕಲ್ಪಿಸಲು ಮುಂದಾಗಿ: ವೃದ್ಧೆ ಬೈರಮ್ಮ ಮಾತನಾಡಿ, ಮೊದಲು ಗ್ರಾಮದ ಕಿರು ನೀರು ಸಿಸ್ಟನ್ನಲ್ಲಿ ನೀರು ಸಿಗುತ್ತಿತ್ತು. ಆದ ರೆ ಇತ್ತೀಚೆಗೆ ನೀರು ಸಿಗದೆ ಪರದಾಡುವಂತಾಗಿದೆ. ಸಿಸ್ಟನ್ನಲ್ಲಿ ನೀರಿಲ್ಲ, ಟ್ಯಾಂಕರ್ ನೀರು ಬಂದಾಗ ನೀರು ಹಿಡಿಯಲು ಸಾಧ್ಯವಾಗಿಲ್ಲ. ಜನರ ನೂಕು ನುಗ್ಗಲು ಹೆಚ್ಚಾಗಿರುತ್ತದೆ. ಕೂಡಲೇ ಶಾಶ್ವತ ನೀರಿನ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪಿಡಿಒ ಮನವೊಲಿಕೆ ಪತ್ರಿಭಟನೆ ಅಂತ್ಯ: ಪ್ರತಿಭಟನಾಕಾರರ ಜೊತೆ ಪಿಡಿಒ ಬಾಬು ಶ್ರೀನಿವಾಸ್ ಮಾತನಾಡಿ, ಇನ್ನೆರೆಡು ಟ್ಯಾಂಕರ್ ನೀರು ಒದಗಿಸುವುದಾಗಿ ಆಶ್ವಾಸನೆ ನೀಡಿದ ರಲ್ಲದೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಶಾಶ್ವತ ಪರಿಹಾರ ಆಗಬೇಕು. ಎಂದು ಒತ್ತಾಯಿ ಸಿದರು. ಕೂಡಲೇ ಜಿಪಂ ಸದಸ್ಯರು ಹಾಗೂ ಕುಡಿಯುವ ನೀರಿನ ಎಂಜಿನಿಯರ್ ಜೊತೆ ಮಾತನಾಡಿ ಅವರ ಆದೇಶದಂತೆ ಸದ್ಯದಲ್ಲಿಯೇ ಹೊಸ ಬೋರ್ವೆಲ್ ಕೊರಸಿಕೊಡುವುದಾಗಿ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯ ಗೊಳಿಸಿದರು. ಗ್ರಾಮದ ಮುಖಂಡ ಗಂಗಾಧರ್, ಕುಮಾರಣ್ಣ, ಸಿದ್ದಲಿಂಗಯ್ಯ, ನಂಜುಂಡಯ್ಯ, ಸಾಗರ್, ನರಸಿಂಹಯ್ಯ, ವಿಜಿಕುಮಾರ್, ಕೃಷ್ಣಪ್ಪ, ಮಹಿಳೆೆಯರಾದ ಬಸಮ್ಮ, ಕಾಮಾಕ್ಷಿ, ಕಮಲಮ್ಮ, ಬೈರಮ್ಮ, ರತ್ನಮ್ಮ, ಮಾನಸ, ಗಂಗಮ್ಮ, ಮಂಜಮ್ಮ, ಲಕ್ಷ್ಮಮ್ಮ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ