ಶಿಥಿಲಾವಸ್ಥೆಯಲ್ಲಿ 25 ವರ್ಷ ಹಿಂದಿನ ನೀರಿನ ಟ್ಯಾಂಕ್
Team Udayavani, Jan 21, 2021, 3:00 AM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಂಡೇರಂಗಡಿ ಪಿಲತಕಟ್ಟೆ ಕುಂಜದಲ್ಲಿರುವ ನೆಲಮಟ್ಟದಲ್ಲಿರುವ ನೀರಿನ ಟ್ಯಾಂಕ್ ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಈಗ ಶಿಥಿಲಗೊಂಡಿದೆ. ಇದರಿಂದ ಜೀವಜಲ ವ್ಯರ್ಥವಾಗುತ್ತಿದೆ.
ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ಈ ಟ್ಯಾಂಕ್ ದೊಂಡೇರಂಗಡಿ ಪ್ರದೇಶಕ್ಕೆ ನೀರು ಪೂರೈಸುವ ಮೂಲವಾಗಿದೆ. 1995ನೇ ಸಾಲಿನಲ್ಲಿ ನಿರ್ಮಾಣಗೊಂಡ ಟ್ಯಾಂಕ್ನಿಂದ ಪ್ರಸ್ತುತ ಸುಮಾರು 175 ಕುಟುಂಬಗಳು ನೀರಿನ ಸಂಪರ್ಕ ಪಡೆದಿವೆ.
ದೊಂಡೇರಂಗಡಿ ಕುಕ್ಕಜೆಯ ಪಾಣಾರ ಕಾಲನಿ, ದೊಂಡೇರಂಗಡಿ ಪೇಟೆ, ಪೆಲತ್ತಕಟ್ಟೆ, ಇಸಾರ್ಮಾರ್, ಬುಕ್ಕಿಗುಡ್ಡೆ, ಕಾಲೇಜು ರಸ್ತೆ, ಗದ್ದಿಗೆ ಪ್ರದೇಶಗಳಿಗೆ ಇದರಿಂದಲೇ ನೀರು ಪೂರೈಕೆಯಾಗುತ್ತಿದೆ.
ಸ್ಲ್ಯಾಬ್ಗಳಿಗೆ ಹಾನಿ :
ಟ್ಯಾಂಕ್ ಶಿಥಿಲಗೊಂಡು ನೀರು ಸೋರಿಕೆ ಯಾಗುತ್ತಿರುವುದರಿಂದ ಟ್ಯಾಂಕ್ನ ಸ್ಲಾಬ್ಗಳಿಗೂ ಹಾನಿಯಾಗಿದೆ. ಅಲ್ಲದೇ ಒತ್ತಡ ಕಡಿಮೆಯಾಗಿ ಜನ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಎತ್ತರದ ಪ್ರದೇಶಗಳಿಗೆ ನೀರೇ ಬಾರದ ಸ್ಥಿತಿ ಇದೆ ಎಂದು ಸ್ಥಳೀಯರು ದೂರಿದ್ದಾರೆ.
ಸೋರಿಕೆಯಿಂದಾಗಿ ಟ್ಯಾಂಕ್ ಕುಸಿಯುವ ಅಪಾಯವೂ ಇದ್ದು ಹಾಗಾದರೆ ನೀರಿಗಾಗಿ ಪರದಾಡಬೇಕಾಗುತ್ತದೆ. ಗ್ರಾಮದ ಇನ್ನಷ್ಟು ಮಂದಿ ನಳ್ಳಿ ನೀರಿನ ಸಂಪರ್ಕ ಪಡೆಯಲಿರುವುದರಿಂದ ಹೊಸದಾಗಿ ಇನ್ನೊಂದು ಕೊಳವೆ ಬಾವಿ ನಿರ್ಮಿಸಿ ಮೋಟಾರ್ ಅಳವಡಿಸುವ ಅಗತ್ಯವಿದೆ. ಬೇಸಗೆಯಲ್ಲಿ ಈ ಭಾಗದಲ್ಲಿ ಬಹುತೇಕ ಖಾಸಗಿ ಬಾವಿಗಳು ಬರಿದಾಗಿ ಕುಡಿಯುವ ನೀರಿಗೆ ಸಂಕಷ್ಟ ಪಡಬೇಕಾಗುತ್ತದೆ. ಓವರ್ ಹೆಡ್ ಟ್ಯಾಂಕ್ ನಿರ್ಮಾಣದಿಂದ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಕಾಣಬಹುದಾಗಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಪಂಚಾಯತ್ಗೆ ಆದಾಯ :
ಓವರ್ ಹೆಡ್ ಟ್ಯಾಂಕ್ ನಿರ್ಮಾಣದಿಂದ ಹೆಚ್ಚಿನ ಮನೆಗೆ ನೀರು ಪೂರೈಕೆ ಮಾಡಬಹುದಾದ್ದರಿಂದ ಪಂಚಾಯತ್ಗೂ ಆದಾಯ ಹೆಚ್ಚಾಗಲಿದೆ. ನೀರು ಪೂರೈಕೆಯಲ್ಲಿ ಸಮಸ್ಯೆ ಇಲ್ಲದಿದ್ದರೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ನಳ್ಳಿ ನೀರಿನ ಸಂಪರ್ಕ ಪಡೆಯುವುದಾಗಿ ಹೇಳುತ್ತಾರೆ. ಇದರಿಂದ ನೀರಿನ ಬಿಲ್ಲು ಪಂಚಾಯತ್ಗೆ ನೇರವಾಗಿ ಪಾವತಿಯಾಗುವುದರಿಂದ ಪಂಚಾಯತ್ ಆದಾಯ ಹೆಚ್ಚಾಗಲಿದೆ.
ದೊಂಡೇರಂಗಡಿ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಟ್ಯಾಂಕ್ ತೀರಾ ಹಳೆಯದಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಶೀಘ್ರವಾಗಿ ಆಗುವಂತೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.-ಪ್ರಸನ್ನ ದೇವಾಡಿಗ, ಸ್ಥಳೀಯರು
ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅಂದಾಜು ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗಿದೆ. ತ್ವರಿತವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.-ಫರ್ಜಾನಾ ಎಂ., ಪಿಡಿಒ ಕಡ್ತಲ ಗ್ರಾ.ಪಂ.
ಜಗದೀಶ್ ಅಂಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ