ಕೃಷಿ ಪ್ರಶಸ್ತಿ ಪುರಸ್ಕೃತ, ಇಳಿ ವಯಸ್ಸಲ್ಲೂ ಕುಗ್ಗದ ಉತ್ಸಾಹಿ

ಬಾಳೆ, ಕಬ್ಬು, ಭತ್ತ, ಗೆಣಸು ಕೃಷಿಯಲ್ಲಿ ಯಶ ಕಂಡ ಗಣಪಯ್ಯ ಗಾಣಿಗ

Team Udayavani, Dec 18, 2019, 5:17 AM IST

cv-17

ಹೆಸರು: ಗಣಪಯ್ಯ ಗಾಣಿಗ
ಏನೇನು ಕೃಷಿ: ಬಾಳೆ, ಕಬ್ಬು, ಭತ್ತ, ಗೆಣಸು
ಎಷ್ಟು ವರ್ಷ ಕೃಷಿ: 50
ಕೃಷಿ ಪ್ರದೇಶ: 1.5 ಎಕರೆ

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಒಂದು ಎಕರೆ ಕೃಷಿ ಭೂಮಿಯಲ್ಲಿ ಅಧಿಕ ಕಬ್ಬು ಬೆಳೆದು ಶ್ರೇಷ್ಠ ಕೃಷಿಕ ಪ್ರಶಸ್ತಿ, ಅನ್ನಪೂರ್ಣೇಶ್ವರಿ ಕ್ಯಾವೆಂಡಿಶ್‌ ಬಾಳೆ, ಮೆಣಸು, ಗೆಣಸು, ಭತ್ತ ಹೀಗೆ ತರಹೇ ವಾರಿ ಕೃಷಿ ಬೆಳೆಸಿದ್ದು, ಮಾತ್ರವಲ್ಲದೆ ಅದರಲ್ಲಿ ಪ್ರಯೋಗಶೀಲತೆ ಅಳವಡಿಸಿ ಮಾದರಿಯಾದ ಕಳುವಿನ ಬಾಗಿಲಿನ ಗಣಪಯ್ಯ ಗಾಣಿಗ. 4ನೇ ತರಗತಿಯವರೆಗೆ ಓದಿದ್ದರೂ ಕೃಷಿ ವಿಶ್ವವಿದ್ಯಾಲಯಕ್ಕೂ ಕಡಿಮೆಯಿಲ್ಲದ ಅಪಾರ ಕೃಷಿ ಜ್ಞಾನ ಇವರದು. ಕಂಬಳದಲ್ಲಿ 3 ವರ್ಷ ಓಟಗಾರರಾಗಿದ್ದು, ಕೆಂಚನೂರಿನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ಕೇವಲ 1 ಎಕರೆ ಕೃಷಿ ಭೂಮಿಯಲ್ಲಿ ಬರೋಬ್ಬರಿ 117 ಟನ್‌ ಕಬ್ಬು ಬೆಳೆಯುವ ಮೂಲಕ ಅಧಿಕ ಇಳುವರಿ ಗಳಿಸಿದ್ದಕ್ಕೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವತಿಯಿಂದ ಕೊಡಮಾಡುವ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು 1987 ಹಾಗೂ 88ರಲ್ಲಿ ಸತತ ಎರಡು ಬಾರಿ ಪಡೆದ ಸಾಧನೆ ಇವರದು. 1987ರಲ್ಲಿ ದ.ಕ. ಜಿಲ್ಲಾ ಸೋಮ ಕ್ಷತ್ರಿಯ ಸಮಾಜ ಕೊಡಮಾಡಿದ ರೈತ ಶ್ರೇಷ್ಠ ಪ್ರಶಸ್ತಿ, 2014 ರಲ್ಲಿ ಕುಂದಾಪುರ ತಾ| ಗಾಣಿಗ ಸೇವಾ ಸಮಾಜ ನೀಡಿದ ಪ್ರಶಸ್ತಿಗಳು ಇವರ ಕೃಷಿ ಸಾಧನೆಗೆ ಸಂದ ಗೌರವ.

ಸಕ್ಕರೆ ಕಾರ್ಖಾನೆ ಕಷ್ಟ
ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಗೊಂಡರೂ ಅದನ್ನು ಮುನ್ನಡೆಸಿಕೊಂಡು ಹೋಗುವುದು ತುಂಬಾ ಸವಾಲಿನ ಸಂಗತಿ ಎನ್ನುವ ಗಣಪಯ್ಯ, ಮೊದಲೆಲ್ಲ ಎಕರೆಗೆ 100 ಟನ್‌ ಕಬ್ಬು ಬೆಳೆಯುತ್ತಿದ್ದರೆ, ಈಗ ಬರೀ 30-40 ಟನ್‌ ಅಷ್ಟೇ ಸಿಗಬಹುದು. ಇದಲ್ಲದೆ ಕರಾವಳಿ ಭಾಗದಲ್ಲಿ ಬೆಳೆದ ಕಬ್ಬುಗಳಲ್ಲಿ ಸಿಹಿ ಅಂಶ ಕಡಿಮೆ ಇರುವುದರಿಂದ ಗುಣಮಟ್ಟದ ಸಕ್ಕರೆ ಸಿಗುವುದು ಕಷ್ಟ ಎನ್ನುತ್ತಾರವರು.

ವಿಭಿನ್ನ ಕೃಷಿ
ಇವರಲ್ಲಿ ತಾವು ಬೆಳೆಯುವ ಕೃಷಿಯ ಬಗ್ಗೆ ಪರಿಪೂರ್ಣತೆ, ಅಪಾರ ಅನುಭವವಿತ್ತು. ಹಾಗಾಗಿ 30 ವರ್ಷಗಳ ಹಿಂದೆ ಬಳ್ಕೂರು ಗ್ರಾಮದಲ್ಲಿಯೇ ಮೊದಲ ಬಾರಿಗೆ ಹಸಿಮೆಣಸು ಬೆಳೆಸಿ, ಅದರಲ್ಲಿ ಆ ಕಾಲದಲ್ಲಿ ವರ್ಷಕ್ಕೆ 40-50 ಸಾವಿರ ರೂ. ಆದಾಯ ಗಳಿಸಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ ಚೆಂಬೂರ್‌ಗುಳ್ಳ, ಕಬ್ಬು, ತೆಂಗು, ವಿಶಿಷ್ಟ ತಳಿಗಳ ಭತ್ತ, ಗೆಣಸು ಹೀಗೆ ವಿಭಿನ್ನ ಮಾದರಿಯ ಕೃಷಿಯನ್ನು ಪೋಷಿಸಿ, ಅದರಲ್ಲೂ ಯಶ ಕಂಡಿದ್ದರು, ಕೃಷಿಕರಿಗೆ ಮಾದರಿಯಾಗಿದ್ದರು.

85 ವರ್ಷದ ವರೆಗೂ ಕೃಷಿ ಕಾಯಕ
ಈಗ ಇವರಿಗೆ 87 ವರ್ಷ. ಕಳೆದ 2 ವರ್ಷದಿಂದ ವಯೋಸಹಜ ಸಮಸ್ಯೆಯಿಂದ ಕೃಷಿಯಿಂದ ಹಿಂದೆ ಸರಿದಿದ್ದಾರೆ. ಆದರೆ 85 ವರ್ಷದ ವರೆಗೂ ಕೃಷಿ ಕಾಯಕದಲ್ಲಿದ್ದರು. ಇವರ ಇಬ್ಬರು ಗಂಡು ಮಕ್ಕಳಾದ ರಾಮಚಂದ್ರ ಹಾಗೂ ರತ್ನಾಕರ ಕೂಡ ಈ ಕೃಷಿ ಪರಂಪರೆಯನ್ನು ಮುಂದುವರಿಸಿದ್ದಾರೆ.

ವಿಶಿಷ್ಟ ಬಾಳೆ ಕೃಷಿ
2015ರಲ್ಲಿ ತನ್ನ ಅರ್ಧ ಎಕರೆ ತೆಂಗಿನ ತೋಟ ದಲ್ಲಿಯೇ ಹೊಸ ತಳಿಯ ಬಾಳೆ ಅನ್ನಪೂರ್ಣೇಶ್ವರೀ ಕ್ಯಾವೆಂಡಿಶ್‌ ಗಿಡಗಳನ್ನು ಬೆಳೆಸಿ, ಭರಪೂರ ಯಶ ಕಂಡವರು. ಬ್ರಹ್ಮಾವರದ ಪೇತ್ರಿಯಿಂದ ಈ ಗಿಡಗಳನ್ನು ತಂದು ನೆಟ್ಟು, ಅದಕ್ಕೆ ಸಾವಯವ ಗೊಬ್ಬರ, ಹಿತ ಮಿತ ನೀರು ಹಾಕಿ ಬೆಳೆಸಿ, 7-8 ತಿಂಗಳಲ್ಲಿಯೇ ಫಸಲು ತೆಗೆದಿದ್ದರು. ಸಾಮಾನ್ಯವಾಗಿ ಬಾಳೆ ಗೊನೆ ಕಟಾವಿಗೆ 10ರಿಂದ 12 ತಿಂಗಳ ವರೆಗೆ ಕಾಯಬೇಕು. 4 ಅಡಿ ಎತ್ತರದ ಒಂದೊಂದು ಗೊನೆ 30-35 ಕೆಜಿ ವರೆಗೂ ತೂಕವಿರುತ್ತಿತ್ತು. ಅತ್ಯಂತ ರುಚಿಕರ ಮತ್ತು ಆರೋಗ್ಯ ದಾಯಕವಂತೆ. 6 ಅಡಿ ಆಳ, ಆರು ಅಡಿ ಅಗಲದ ಸಾಲು ದಂಡೆ ಮಾಡಿ ಒಂದೊಂದು ಗಿಡದ ನಡುವೆ 6 ಅಡಿ ಅಂತರ ಕಾಯ್ದುಕೊಂಡು ಬೆಳೆಸಲಾಗಿತ್ತು. ಈ ಬಳ್ಕೂರು, ಬಸ್ರೂರು ಪ್ರದೇಶದ ಮಣ್ಣಿನಲ್ಲಿ ಈ ಬಾಳೆ ಕೃಷಿ ಅಸಾಧ್ಯ ಎನ್ನುವರರ ಮಾತನ್ನೇ ಸುಳ್ಳಾಗಿಸಿದ್ದರು.

ಮಾರುಕಟ್ಟೆ ಕಲೆಯೂ ಅಗತ್ಯ
ರೈತರು ಕೃಷಿ ಮಾಡುವ ಜತೆಗೆ ಅದಕ್ಕೆ ಮಾರುಕಟ್ಟೆ ಮಾಡುವುದನ್ನು ಕೂಡ ಕಲಿತರೆ ಮಾತ್ರ ಯಶಸ್ಸು ಪಡೆಯಬಹುದು. ಇಲ್ಲದಿದ್ದರೆ ಕಷ್ಟಪಟ್ಟು ದುಡಿಯುವುದು ಯಾರೋ? ಲಾಭ ಗಳಿಸುವುದು ಇನ್ನು ಯಾರೋ ಆಗಿರುತ್ತಾರೆ. ಸರಕಾರ ಕೂಡ ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಒಂದು ಸೊಸೈಟಿಯಂತಹ ಮಾರುಕಟ್ಟೆ ವ್ಯವಸ್ಥೆಯನ್ನು ತಂದರೆ ಅನುಕೂಲವಾಗುತ್ತದೆ. ಕೇವಲ ಸಾವಯವದಿಂದ ಅಧಿಕ ಇಳುವರಿ, ಉತ್ತಮ ಫಸಲು ಕಷ್ಟವಾದರೂ ಮಣ್ಣಿನ ಫಲವತ್ತತೆಗಾಗಿ ಆದಷ್ಟು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ. ಕೃಷಿಯ ಬಗ್ಗೆ ಮುಖ್ಯವಾಗಿ ಆಸಕ್ತಿಯಿರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ.
-ಗಣಪಯ್ಯ ಗಾಣಿಗ, ಕಳುವಿನಬಾಗಿಲು

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.