ಹೈನುಗಾರರು ಬದುಕು ಕಟ್ಟಿಕೊಳ್ಳಲು ನೆರವಾದ ಸಂಸ್ಥೆ
ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ
Team Udayavani, Feb 15, 2020, 6:45 AM IST
ಬಹಳ ವರ್ಷಗಳ ಹಿಂದೆಯೇ ಹೈನುಗಾರರನ್ನು ಒಟ್ಟಾಗಿಸಿ, ಅವರಿಗೊಂದು ದಾರಿದೀಪವಾದ ಕೀರ್ತಿ ಸಿದ್ದಾಪುರ ಹಾಲು ಉತ್ಪಾದಕರ ಸಂಘದ್ದು. ಅಂದು 70 ಲೀ. ಹಾಲು ಸಂಗ್ರಹಿಸುತ್ತಿದ್ದ ಸಂಘ ಇಂದು ಬೆಳೆದ ಪರಿ ನಿಜಕ್ಕೂ ಅದ್ಭುತ.
ಸಿದ್ದಾಪುರ: ಸ್ವಾವಲಂಬನೆ ಬದುಕಿನ ಉದ್ದೇಶದಿಂದ ಆರಂಭಗೊಂಡ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಸಮಾಜಮುಖೀ ಧೋರಣೆಯನ್ನು ಹೊಂದಿದ್ದು, ಹೈನುಗಾರರ ಪಾಲಿಗೆ ಆಶಾಕಿರಣವಾಗಿದೆ.
ಈ ಸಂಘಕ್ಕೆ 45 ವರ್ಷಗಳ ಇತಿಹಾಸವಿದ್ದು, ಜಿಲ್ಲೆಯ ಪ್ರಮುಖ ಸಂಘವಾಗಿಯೂ ಗುರುತಿಸಿಕೊಂಡಿದೆ.
1975ರಲ್ಲಿ ಸಿದ್ದಾಪುರ ಗ್ರಾ.ಪಂ.ನ ಮೂರು ಗ್ರಾಮಗಳ ವ್ಯಾಪ್ತಿಯ 40 ಸದಸ್ಯರನ್ನು ಒಟ್ಟು ಸೇರಿಸಿ ಸಂಘ ಸ್ಥಾಪನೆಯಾಯಿತು. ಆರಂಭದ ದಿನಗಳಲ್ಲಿ ಪೇಟೆಯಲ್ಲಿರುವ ವ್ಯಾಸರಾವ್ ಅವರ ಕಟ್ಟಡದಲ್ಲಿ ಸಂಘ ಪ್ರಾರಂಭಗೊಂಡಿತು.
ಹೈನುಗಾರರಿಗೆ ವರದಾನ
ಸಿದ್ದಾಪುರ, ಜನ್ಸಾಲೆ, ಹೆನ್ನಾಬೈಲು ವ್ಯಾಪ್ತಿಯ ಗ್ರಾಮಸ್ಥರು ಮನೆಯಲ್ಲಿರುವ ಅಲ್ಪ ಪ್ರಮಾಣದ ಹಾಲನ್ನು ಹೊಟೇಲುಗಳಿಗೆ ಕೊಟ್ಟು ಆದಾಯಗಳಿಸುತ್ತಿದ್ದರು. ಇದನ್ನು ಊರ ಮುತ್ಸದ್ದಿಗಳು ಗಮನಿಸಿ ಹೈನುಗಾರರಿಗೆ ನಿಶ್ಚಿತ ಆದಾಯ, ಬದುಕಿನ ಭದ್ರತೆಗಾಗಿ ಸಂಘ ನಿರ್ಮಾಣಕ್ಕೆ ಯೋಜಿಸಿದರು.
ಅತ್ಯುತ್ತಮ ವ್ಯವಹಾರದ ಮೂಲಕ ಸಂಘ ಬೆಳವಣಿಗೆ ಹೊಂದುತ್ತಿದ್ದಂತೆಯೇ 1984ರಲ್ಲಿ ಗ್ರಾ. ಪಂ.ನಿಂದ 15 ಸೆಂಟ್ಸ್ ಜಾಗ ಕಾದಿರಿಸಿಕೊಂಡು ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸದ್ಯ ಕಟ್ಟಡದಲ್ಲಿ ನಾಲ್ಕು ಅಂಗಡಿ ಕೋಣೆಗಳಿದ್ದು ಇದರಿಂದಲೇ ಸಂಘಕ್ಕೆ ಲಕ್ಷ ರೂ.ವರೆಗೆ ಆದಾಯ ಬರುತ್ತಿದೆ.
ಶೀತಲೀಕರಣ ಘಟಕ
ಸಂಘ ತನ್ನ ಬಳಿ ಶೀತಲೀಕರಣ ಘಟಕವನ್ನೂ ಹೊಂದಿದ್ದು ಇರಿಗೆ, ಕಲ್ಸಂಕ, ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಕೆರೆಕಟ್ಟೆ, ಹಂಚಿಕಟ್ಟೆ ಹಾಗೂ ಸಿದ್ದಾಪುರ ಸೇರಿದಂತೆ 8 ಸಂಘಗಳಿಂದ ಹಾಲು ಬಂದು ಶೇಖರಣೆಗೊಳ್ಳುತ್ತದೆ. ಸಂಘದ ವ್ಯಾಪ್ತಿಯ 40 ಸಂಘಗಳಿಗೆ ಸಂಬಂಧಿಸಿದಂತೆ ಪಶು ವೈದ್ಯಕೀಯ ಶಿಬಿರ ಕಚೇರಿ ಹೊಂದಿದೆ. ಪ್ರತಿ ತಿಂಗಳಿಗೆ ಸರಾಸರಿ 250 ಕೃತಕ ಗರ್ಭಧಾರಣೆ ನಡೆಯುತ್ತಿದೆ.
1600 ಲೀ. ಹಾಲು ಸಂಗ್ರಹ
ಸಂಘ ಆರಂಭವಾದ ಕಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್ಗೆ ಹಾಲು ಸರಬರಾಜು ಮಾಡುತ್ತಿದ್ದು ಉತ್ತಮ ಬೆಳೆವಣಿಗೆ ಕಂಡಿತ್ತು. ಬಳಿಕ ಒಕ್ಕೂಟ ಸ್ಥಾಪನೆಯಾದ ಬಳಿಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದೆ. ಆರಂಭದ ದಿನಗಳಲ್ಲಿ ಸಂಘದಲ್ಲಿ ದಿನಕ್ಕೆ 70 ಲೀ. ಹಾಲು ಸಂಗ್ರಹವಾಗುತ್ತಿತ್ತು. ಈಗ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ 433 ಸದಸ್ಯರನ್ನು ಹೊಂದಿದ್ದು, 260 ಸದಸ್ಯರು ಸಂಘಕ್ಕೆ ಹಾಲು ನೀಡುತ್ತಿದ್ದಾರೆ. ಆಜ್ರಿ ಮೂರುಕೈಯಲ್ಲಿ ತನ್ನ ಶಾಖೆಯನ್ನೂ ಹೊಂದಿದೆ.
ಪ್ರಸ್ತುತ 5 ಸಾವಿರ ಲೀ. ಸಾಮಥ್ಯದ ಬಿ.ಎಂ.ಸಿ ಕೇಂದ್ರ ಆರಂಭಿಸಿದೆ. ಮುಂದೆ 8 ಸಾವಿರ ಸಾಮಥ್ಯದ ಬಿ.ಎಂ.ಸಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರ ಬಗ್ಗೆ ಈಗಾಗಲೇ ಒಕ್ಕೂಟಕ್ಕೆ ಪ್ರಾಸ್ತವನೆ ಕೂಡ ಸಲ್ಲಿಸಲಾಗಿದೆ.
– ಡಿ. ಗೋಪಾಲಕೃಷ್ಣ ಕಾಮತ್ ಅಧ್ಯಕ್ಷರು, ಸಿದ್ದಾಪುರ ಹಾ.ಉ.ಸ.ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ