ಬೆರಳ ತುದಿಯಲ್ಲಿಯೇ ಖಟ್ಲೆಗಳ ಪ್ರವರ…


Team Udayavani, Jun 23, 2017, 5:09 PM IST

140617Astro02.jpg

ಉಡುಪಿ: ನ್ಯಾಯ ಅರಸಿ ಬಂದವರಿಗೆ ಬೆರಳ ತುದಿಯಲ್ಲಿಯೇ ಮಾಹಿತಿ ನೀಡಬಲ್ಲ ಸೂಪರ್‌ ಕಿಯಾಸ್ಕ್ ಯಂತ್ರ ಉಡುಪಿ ನ್ಯಾಯಾಲಯದಲ್ಲಿ ಸೇವೆಯನ್ನು ನೀಡುತ್ತಿದೆ.

ಮಾಹಿತಿ ತಂತ್ರಜ್ಞಾನಕ್ಕೆ ನ್ಯಾಯಾಲಯವೂ ಈ ರೀತಿ ಮುಕ್ತವಾಗಿ ತೆರದುಕೊಂಡದ್ದು ಮತ್ತು ಸಕಾಲದಲ್ಲಿ ಸಕಲ ಮಾಹಿತಿಗಳು ಏಕತ್ರ ಲಭ್ಯವಾಗುವಂತೆ ಮಾಡಿದ್ದು ನ್ಯಾಯಾಲಯಗಳ ಕಾರ್ಯವ್ಯಾಪ್ತಿ, ವಿಸ್ತಾರ ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸುತ್ತಿದೆ.

ಸ್ವಯಂ ಚಾಲಿತ ಕಿಯಾಸ್ಕ್  ಸ್ಪರ್ಶ ಪರದೆಯನ್ನು ಹೊಂದಿದೆ. ಇದರಲ್ಲಿ ಪ್ರಕರಣಗಳ ಸರ್ವ ವಿವರ ಲಭ್ಯವಾಗುತ್ತದೆ. ಪ್ರಕರಣ ಸಂಖ್ಯೆಯನ್ನು ನಮೂದಿಸಿದರೆ ಸಾಕು ಪರದೆ ಮೇಲೆ ಪಟಪಟನೆ ಮಾಹಿತಿಗಳು ತೋರಲು ಆರಂಭವಾಗುತ್ತದೆ. ದಾವೆ ಯಾವ ಹಂತದಲ್ಲಿದೆ? ಯಾವ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದೆ? ಯಾವ ದಿನಾಂಕಕ್ಕೆ ಮುಂದೆ ಹೋಗಿದೆ? 

ದಾವೆ ತಟಸ್ಥವಾಗಿದ್ದರೆ ಅದಕ್ಕೆ ಕಾರಣಗಳೇನು ಎಂಬಿತ್ಯಾದಿ  ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಾಗುತ್ತವೆ.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಪರ್ಶì ಪರದೆಯ ಕಿಯೋಸ್ಕ್ ಕಳೆದ ತಿಂಗಳು ಬಂದು ಕಾರ್ಯ ನಿರ್ವಹಿಸಲು ಆರಂಭಿಸಿದೆ. ಇದಕ್ಕೂ ಮುನ್ನ 3 ಸಾಧಾರಣ ಕಿಯೋಸ್ಕ್ಗಳು ಸೇವೆ ನೀಡುತ್ತಿದ್ದವು ಎಂದು ಉಡುಪಿ ಜಿಲ್ಲಾ ನ್ಯಾಯಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎ. ವಿಜಯಲಕ್ಷ್ಮೀ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 5, ಕಾರ್ಕಳದಲ್ಲಿ 3 ಹಾಗೂ ಉಡುಪಿಯಲ್ಲಿ 7 ಹೀಗೆ ಒಟ್ಟು 15 ನ್ಯಾಯಾಲಯಗಳು ನ್ಯಾಯದಾನ ಮಾಡುತ್ತಿವೆ. ಇವುಗಳ ಪೈಕಿ ಕುಂದಾಪುರದಲ್ಲಿ 2 ಮತ್ತು ಕಾರ್ಕಳದಲ್ಲಿ 1 ಕಿಯಾಸ್ಕ್  ಸೇವೆ ನೀಡುತ್ತಿದೆ. ಉಡುಪಿಗೆ  ಕುಂದಾಪುರಕ್ಕೆ ತಲಾ 2 ಹೆಚ್ಚುವರಿ ನ್ಯಾಯಾಲಯಗಳು ಮಂಜೂರುಗೊಂಡಿದ್ದು ಅವುಗಳ ಕಾರ್ಯಾರಂಭ ನಡೆಸಿದರೆ ಅಲ್ಲಿಯೂ ಈ ಸೇವೆ ದೊರಕಲಿದೆ. www.ecourts.gov. in./udupi ಸೈಟ್‌ಗೆ ಹೋದರೆ ಅಲ್ಲಿ ಕೇಸ್‌ ಸ್ಟೇಟಸ್‌ನಲ್ಲಿ ಈ ಎಲ್ಲ  ಮಾಹಿತಿಗಳು ಲಭ್ಯವಾಗುತ್ತವೆ. 

ಇಂಗ್ಲಿಷ್‌ ಭಾಷೆಗೆ ಈ ವೈಬ್‌ಸೈಟ್‌
ತೀವ್ರವಾಗಿ ಸ್ಪಂದಿಸುತ್ತದೆ. ಕನ್ನಡ ಭಾಷೆಯಲ್ಲೂ ಮಾಹಿತಿ ಪಡೆಯಬಹುದಾಗಿದ್ದು ತುಸು ವಿಳಂಬವಾಗುತ್ತಿದೆ. ಸದ್ಯದಲ್ಲಿಯೇ ಈ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ತಂತ್ರಜ್ಞರು ಮಾಹಿತಿ ನೀಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಲೋಕಕ್ಕೆ ವಿಶೇಷವಾಗಿ ತೆರೆದುಕೊಂಡು ನ್ಯಾಯ ಬಯಸಿ ಬಂದವರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡುತ್ತಿರುವ ಈ ಕಿಯಾಸ್ಕ್ ನ್ಯಾಯಾಂಗದ ವಿಶಿಷ್ಟ ಕೊಡುಗೆಯಾಗಿದೆ.

ನಿತ್ಯ ಅಪ್‌ಡೇಟ್‌
ನ್ಯಾಯಾಧೀಶರು ಸಂಜೆ ತಮ್ಮ ನಿವಾಸಕ್ಕೆ ತೆರಳುವ ಮುನ್ನ ಎಲ್ಲ ನ್ಯಾಯಾಲಯಾಗಳಲ್ಲಿ ಜರಗಿದ ಖಟ್ಲೆಗಳ ಪೂರ್ಣ ಮಾಹಿತಿ ಈ ಕಿಯೋಸ್ಕ್ನಲ್ಲಿ ಅಪ್‌ಡೇಟ್‌ ಆಗುತ್ತದೆ. ಹಾಗಾಗಿ ದಾವೆ ಹೂಡಿದವರು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ಸಂಖ್ಯೆಯನ್ನು ನಮೂಸಿದರೆ ಸಾಕು ಸಕಲ ಮಾಹಿತಿಯೂ ಲಭ್ಯವಾಗುತ್ತದೆ.

ಲ್ಯಾನ್‌ ಸಂಪರ್ಕ
ಉಡುಪಿ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಬರುವ ನ್ಯಾಯಾಲಯಗಳಲ್ಲಿ ಈ ಕಿಯೋಸ್ಕ್ ಲ್ಯಾನ್‌ ಮೂಲಕ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಇಂಟರ್‌ನೆಟ್‌ ಆವಶ್ಯಕತೆ ಇಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.45ರ ವರೆಗೆ ಸಾರ್ವಜನಿಕರು ಮತ್ತು ವಕೀಲರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ವೈರಸ್‌ಗಳ ದಾಳಿಯನ್ನು ಎದುರಿಸಲು ಇದು ಲೀನಕ್ಸ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಿಯೋಸ್ಕ್ಗಳಿಗೆ ಯುಪಿಎಸ್‌ ವ್ಯವಸ್ಥೆಯೂ ಇರುವುದರಿಂದ ಸಾರ್ವಜನಿಕರು ಯಾವುದೇ ತೊಂದರೆಗಳಿಲ್ಲದೆ ಮಾಹಿತಿಗಳನ್ನು ಪಡೆದುಕೊಳ್ಳ ಬಹುದಾಗಿದೆ ಎಂದು ಕಿಯೋಸ್ಕ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಐವನ್‌ ಮಾಹಿತಿ ನೀಡಿದ್ದಾರೆ.

ಇಂಟರೆಟ್ಟಲ್ಲೂ ಲಭ್ಯ
ನ್ಯಾಯಾಲಯಗಳಿಗೆ ಬಾರಲು ಸಾಧ್ಯವಾಗದವರೂ ಇಂಟರ್‌ನೆಟ್‌ಮೂಲಕ ಇದೇ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

– ಆಸ್ಟ್ರೋ ಮೋಹನ್‌

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.