ಕಟಪಾಡಿ: ಬೈಕ್ ರಿಪೇರಿ ಮಾಡಿಕೊಂಡು ಗ್ಯಾರೇಜ್ ಮಾಲಕನಿಗೆ ಹಲ್ಲೆ ನಡೆಸಿ ಪರಾರಿ
Team Udayavani, Mar 17, 2022, 9:58 PM IST
ಸಾಂದರ್ಭಿಕ ಚಿತ್ರ
ಕಾಪು: ಗ್ಯಾರೇಜ್ಗೆ ಬಂದ ಅಪರಿಚಿತರು ಬೈಕ್ ರಿಪೇರಿ ಮಾಡಿಸಿಕೊಂಡು ರಿಪೇರಿಯ ಹಣದ ಬದಲು ಗ್ಯಾರೇಜ್ ಮಾಲಕನಿಗೆ ಇಂಜಿನ್ ಕೇಸ್ನಿಂದ ಹೊಡೆದು ಪರಾರಿಯಾದ ಘಟನೆ ಮಾ. 16ರಂದು ಕಟಪಾಡಿಯಲ್ಲಿ ನಡೆದಿದೆ.
ಕಟಪಾಡಿ ಏಣಗುಡ್ಡೆಯಲ್ಲಿ ಶ್ರೀ ದೇವಿ ಆಟೋ ವರ್ಕ್ಸ್ ಎಂಬ ಹೆಸರಿನ ಗ್ಯಾರೇಜ್ ನಡೆಸುತ್ತಿರುವ ಪಾಂಗಾಳ ಆರ್ಯಾಡಿ ನಿವಾಸಿ ಕೇಶವ ಹಲ್ಲೆಗೊಳಗಾದ ಗ್ಯಾರೇಜ್ ಮಾಲಕ.
ಮಾ.16ರಂದು ಸಂಜೆ ಕೇಶವ ಅವರ ಗ್ಯಾರೇಜ್ಗೆ ನಂಬರ್ ಪ್ಲೇಟ್ ಇಲ್ಲದ ಟಿವಿಎಸ್ ಅಪಾಚಿ ಬೈಕ್ನೊಂದಿಗೆ ಬಂದ ಅಪರಿತರಿಬ್ಬರು ಬೈಕ್ ರಿಪೇರಿ ಮಾಡಿಕೊಡುವಂತೆ ಕೇಳಿ ಕೊಂಡಿದ್ದರು. ಬೈಕ್ ರಿಪೇರಿಯಾದ ಬಳಿಕ ಗ್ಯಾರೇಜ್ ಮಾಲಕ 400 ರೂಪಾಯಿ ರಿಪೇರಿಯ ಹಣವನ್ನು ಕೇಳಿದ್ದರು. ಆದರೆ ಆರೋಪಿಗಳು 250 ರೂಪಾಯಿ ಕೊಡುತ್ತೇವೆ, ಉಳಿದಿದ್ದನ್ನು ನಾಳೆ ಕೊಡುತ್ತೇವೆ ಎಂದು ಹೇಳಿದ್ದರು. ಗ್ಯಾರೇಜ್ ಮಾಲಕ ಕೇಶವ ಅವರು ಅದಕ್ಕೆ ಒಪ್ಪದಿದ್ದಾಗ ಕೈಯ್ಯಲ್ಲಿ, ಹೊಡೆದು ಇಂಜಿನ್ ಕೇಸ್ನಿಂದ ಹೊಡೆದು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಕೇಶವ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ