ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

 ಗ್ರಾ.ಪಂ.ಗಳಲ್ಲಿ ವಿತರಿಸಲು ಸರಕಾರ ಆದೇಶಿಸಿದ್ದರೂ ಸಿಗುತ್ತಿಲ್ಲ

Team Udayavani, May 21, 2022, 7:20 AM IST

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಕಾರ್ಕಳ: ನಾಗರಿಕರಿಗೆ ಗ್ರಾ.ಪಂ. ಕಚೇರಿಗಳಲ್ಲೇ ಜನನ -ಮರಣ ಪ್ರಮಾಣಪತ್ರ ಸಿಗುವಂತೆ ಮಾಡುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನವಾಗದ ಪರಿಣಾಮ ಈ ದಾಖಲೆಗಾಗಿ ಜನರು ಕಚೇರಿಗಳಿಗೆ ಅಲೆದಾಡುವ ಸ್ಥಿತಿ ಮುಂದುವರಿದಿದೆ.

ರಾಜ್ಯ ಸರಕಾರ ಜನನ, ಮರಣ ಪ್ರಮಾಣಪತ್ರವನ್ನು ಪಿಡಿಒಗಳ ಮೂಲಕ ಗ್ರಾ.ಪಂ. ಮಟ್ಟದಲ್ಲಿ ವಿತರಿಸಲು ಆದೇಶಿಸಿತ್ತು. ಆದೇಶವಾಗಿ ವರ್ಷ ಸಮೀಪಿಸಿದ್ದರೂ ಗ್ರಾ.ಪಂ.ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇವು ಗಳ ವಿತರಣೆ ಸಾಧ್ಯವಾಗಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆಯು ಗ್ರಾಮೀಣ ಭಾಗದಲ್ಲಿ ನಾಗರಿಕ ನೋಂದಣಿ ಯನ್ನು ಬಲಪಡಿಸಿ, ಶತ ಪ್ರತಿಶತ ಮರಣ, ಜನನ ನೋಂದಣಿಯನ್ನು ದಾಖಲಿಸಲು ಅನುವಾಗುವಂತೆ
ನೋಂದಣಾಧಿಕಾರಿಯಾಗಿ ಪಿಡಿಒ ಗಳನ್ನು ನೇಮಿಸಿತ್ತು.

ಆದೇಶ ಬದಲಾವಣೆ
ಇಲಾಖೆಯ ಪ್ರಾರಂಭದ ಆದೇಶ ಪ್ರಕಾರ ಪ್ರಮಾಣಪತ್ರ ವಿತರಿಸಲು ಪಿಡಿಒಗಳನ್ನು ಮಾತ್ರ ನೇಮಿಸ ಲಾಗಿತ್ತು. ಆದರೆ ಗ್ರಾಮ ಲೆಕ್ಕಿಗರು ಈ ಅಧಿಕಾರ ಹಸ್ತಾಂತರಿಸಲು ಹಿಂದೇಟು ಹಾಕಿದ್ದರಿಂದ ಸರಕಾರ 2022ರ ಜ. 7 ಮತ್ತು ಫೆ. 22ರಂದು ಮರು ಆದೇಶ ಹೊರಡಿಸಿದೆ.

ಅದರಲ್ಲಿ ನೋಂದಣಿ ಅಧಿಕಾರಿಯಾಗಿ ಪಿಡಿಒ ಮತ್ತು ಉಪ ನೋಂದಣಿ ಅಧಿಕಾರಿಯಾಗಿ ಗ್ರಾಮಲೆಕ್ಕಿಗರಿಗೆ ಜವಾಬ್ದಾರಿ ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಆದರೂ ಪಿಡಿಒಗಳು ಜನನ-ಮರಣ ನೋಂದಣಾಧಿಕಾರಿಯಾಗಿ ಕಾರ್ಯಾ ಚರಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಈಗ ಸಚಿವರೂ ಇಲ್ಲ!
ಗ್ರಾ. ಮತ್ತು ಪಂ. ರಾಜ್‌ ಖಾತೆ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಯ ಬಳಿಕ ಈ ಖಾತೆಗೆ ಹೊಸ ಸಚಿವರ ನೇಮಕವಾಗಿಲ್ಲ. ಖಾತೆ ಸದ್ಯ ಮುಖ್ಯಮಂತ್ರಿಗಳ ನಿರ್ವಹಣೆಯಲ್ಲಿದೆ. ಜನನ -ಮರಣ ಪ್ರಮಾಣ ಪತ್ರವನ್ನು ಗ್ರಾ.ಪಂ.ಗಳಲ್ಲಿ ವಿತರಿಸುವ ಸಂಬಂಧ ಮುಖ್ಯಮಂತ್ರಿಗಳೇ ಗಮನಹರಿಸಿ ಪರಿಹಾರ ಕಂಡು ಕೊಳ್ಳಬೇಕಿದೆ.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗಳಿಗೆ ಜನನ ಮತ್ತು ಮರಣ ನೋಂದಣಿ ಪತ್ರ ವಿತರಿಸುವ ಕುರಿತು ಈ ವರೆಗೂ ತರಬೇತಿ ಸಿಕ್ಕಿಲ್ಲ. ಪ್ರಮಾಣಪತ್ರ ವಿತರಿಸಲು ಯಾವುದೇ ಅಭ್ಯಂತರವಿಲ್ಲ. ಕಾರ್ಯಾದೇಶ ದೊರೆತಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ರಾಜ್ಯ ಪಿಡಿಒ ಸಂಘದ ಅಧ್ಯಕ್ಷ ಬೋರಯ್ಯ ಅವರು ಹೇಳಿದ್ದಾರೆ.

ಏನು ಕಾರಣ?
ಸರಕಾರ ಹೊರಡಿಸಿದ ಆದೇಶ ಪೂರ್ಣಪ್ರಮಾಣದಲ್ಲಿ ಕಾರ್ಯಗತವಾಗದೆ ಇರುವುದು ಇದಕ್ಕೆ ಕಾರಣ. ಜನನ-ಮರಣ ಪತ್ರ ವಿತರಣೆಗೆ ಸಂಬಂಧಿಸಿದ ಸಾಫ್ಟ್ ವೇರ್‌ನ ತಾಂತ್ರಿಕ ತೊಂದರೆ ಗಳೂ ಕಾರಣ ಎಂದು ಪಿಡಿಒಗಳು ಹೇಳುತ್ತಾರೆ. ಈ ಬಗ್ಗೆ ಪಿಡಿಒಗಳಿಗೆ ತರಬೇತಿಯನ್ನೂ ನೀಡಲಾಗಿಲ್ಲ. ಜನನ-ಮರಣ ಪ್ರಮಾಣ ಪತ್ರವನ್ನು ಆಯಾ ಆಸ್ಪತ್ರೆ, ಪಾಲಿಕೆ, ನಗರ ಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಮಾತ್ರವೇ ನೀಡಲಾಗುತ್ತಿತ್ತು. ಅನಂತರ ಗ್ರಾ.ಪಂ.ಗಳಲ್ಲಿ ಪಿಡಿಒ ಅವರನ್ನು ಜನನ- ಮರಣ ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇ-ತಂತ್ರಾಂಶದಲ್ಲಿ ಪಿಡಿಒ ಅವರ ಡಿಜಿಟಲ್‌ ಸಹಿಯ ಮೂಲಕ ಈ ದಾಖಲೆ ವಿತರಿಸುವಂತೆ ಆದೇಶ ಇದೆ.

ಗ್ರಾ.ಪಂ. ಕಚೇರಿಯಲ್ಲಿ ಪ್ರಮಾಣಪತ್ರ ವಿತರಣೆಗೆಸಾಫ್ಟ್ವೇರ್‌ ಅಪ್‌ಡೇಟ್‌ಗೊಳಿಸುವ ತಾಂತ್ರಿಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರ ಅದು ಸರಿ ಹೋಗಲಿದೆ.
-ಡಾ| ಕುಮಾರ್‌
ಸಿಇಒ ದ. ಕನ್ನಡ ಜಿ.ಪಂ.

ಪಿಡಿಒಗಳಿಗೆ ಬಳಕೆ ಐಡಿ,ಪಾಸ್‌ವರ್ಡ್‌ ನೀಡಿಲ್ಲ. ಅವರಿಗೆ ತರಬೇತಿಯೂ ಆಗಿಲ್ಲ. ಇದಕ್ಕೆ 2-3 ತಿಂಗಳು ಬೇಕು. ಬಳಿಕ ಗ್ರಾ.ಪಂ.ಗಳಲ್ಲೇ ಜನನ- ಮರಣ ಪ್ರಮಾಣಪತ್ರ ವಿತರಣೆ ಆಗಲಿದೆ.
-ಎಚ್‌.ಕೆ. ಪ್ರಸನ್ನ,
ಸಿಇಒ, ಉಡುಪಿ ಜಿ.ಪಂ

- ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.