![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ನದಿಯಲ್ಲಿ ತೇಲುವ ಪ್ರವಾಸಿ ಬೋಟ್ಹೌಸ್ ಉದ್ಘಾಟನೆ
Team Udayavani, Apr 22, 2018, 7:00 AM IST
![2104mle4.jpg](https://www.udayavani.com/wp-content/uploads/2018/04/22/2104mle4.jpg)
ಮಲ್ಪೆ: ಉಡುಪಿ ತಾಲೂಕಿನ ಕೋಡಿಬೆಂಗ್ರೆಯಲ್ಲಿ ಕೇರಳ ಮಾದರಿಯ ನೂತನವಾದ ಬೋಟ್ಹೌಸ್ ತಿರುಮಲ ಕ್ರೂಸ್ನ ಉದ್ಘಾಟನ ಸಮಾರಂಭವು ಎ. 22ರಂದು ಸಂಜೆ 6ಕ್ಕೆ ಕೋಡಿಬೆಂಗ್ರೆಯಲ್ಲಿ ನಡೆಯಲಿದೆ.
ಅಂಬಲಪಾಡಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ನೂತನ ಬೋಟ್ಹೌಸನ್ನು ಉದ್ಘಾಟಿಸಲಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್., ಉಡುಪಿ ಕರಾವಳಿ ಪ್ರವಾಸೋದ್ಯಮ ಅಸೋಸಿಯೇಶನ್ನ ಅಧ್ಯಕ್ಷ ಮನೋಹರ್ ಶೆಟ್ಟಿ, ಉಡುಪಿ ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾಲಕ್ಷ್ಮೀ ಆರ್., ಉಡುಪಿ ಕಿದಿಯೂರು ಹೊಟೇಲ್ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಕೇಶವ ಕುಂದರ್, ಶಂಕರ್ ಕುಂದರ್, ಮಹಾಬಲ ತೋಳಾರ್, ಗೋಪಾಲ್ ಕುಂದರ್, ಗೋಪಾಲ್ ಮೆಂಡನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಾಲ್ಕು ವಿಭಾಗದ ಯಾನ
ಡೇ ಕ್ರೂಸ್, ನೈಟ್ ಕ್ರೂಸ್, ಓವರ್ನೆçಟ್ ಮತ್ತು ಡೇ ಆ್ಯಂಡ್ ನೈಟ್ ಕ್ರೂಸ್ ಹೀಗೆ ಒಟ್ಟು ನಾಲ್ಕು ವಿಭಾಗದ ಯಾನ ಇದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್ನೆçಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30, ಡೇ ಆ್ಯಂಡ್ ನೈಟ್ ಕ್ರೂಸ್ನಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8.30ರ ವರೆಗೆ ಉಳಿದುಕೊಳ್ಳಬಹುದಾಗಿದೆ ಎಂದು ತಿರುಮಲ ಕ್ರೂಸ್ ಪಾಲುದಾರ ನಾಗರಾಜ್ ಬಿ. ಕುಂದರ್ ಕೋಡಿಬೆಂಗ್ರೆ ತಿಳಿಸಿದ್ದಾರೆ.ಮಲ್ಪೆ, ಎ. 21: ಉಡುಪಿ ತಾಲೂಕಿನ ಕೋಡಿಬೆಂಗ್ರೆಯಲ್ಲಿ ಕೇರಳ ಮಾದರಿಯ ನೂತನವಾದ ಬೋಟ್ಹೌಸ್ ತಿರುಮಲ ಕ್ರೂಸ್ನ ಉದ್ಘಾಟನ ಸಮಾರಂಭವು ಎ. 22ರಂದು ಸಂಜೆ 6ಕ್ಕೆ ಕೋಡಿಬೆಂಗ್ರೆಯಲ್ಲಿ ನಡೆಯಲಿದೆ.
ಅಂಬಲಪಾಡಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ನೂತನ ಬೋಟ್ಹೌಸನ್ನು ಉದ್ಘಾಟಿಸಲಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್., ಉಡುಪಿ ಕರಾವಳಿ ಪ್ರವಾಸೋದ್ಯಮ ಅಸೋಸಿಯೇಶನ್ನ ಅಧ್ಯಕ್ಷ ಮನೋಹರ್ ಶೆಟ್ಟಿ, ಉಡುಪಿ ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾಲಕ್ಷ್ಮೀ ಆರ್., ಉಡುಪಿ ಕಿದಿಯೂರು ಹೊಟೇಲ್ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಕೇಶವ ಕುಂದರ್, ಶಂಕರ್ ಕುಂದರ್, ಮಹಾಬಲ ತೋಳಾರ್, ಗೋಪಾಲ್ ಕುಂದರ್, ಗೋಪಾಲ್ ಮೆಂಡನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಾಲ್ಕು ವಿಭಾಗದ ಯಾನ
ಡೇ ಕ್ರೂಸ್, ನೈಟ್ ಕ್ರೂಸ್, ಓವರ್ನೆçಟ್ ಮತ್ತು ಡೇ ಆ್ಯಂಡ್ ನೈಟ್ ಕ್ರೂಸ್ ಹೀಗೆ ಒಟ್ಟು ನಾಲ್ಕು ವಿಭಾಗದ ಯಾನ ಇದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್ನೆçಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30, ಡೇ ಆ್ಯಂಡ್ ನೈಟ್ ಕ್ರೂಸ್ನಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8.30ರ ವರೆಗೆ ಉಳಿದುಕೊಳ್ಳಬಹುದಾಗಿದೆ ಎಂದು ತಿರುಮಲ ಕ್ರೂಸ್ ಪಾಲುದಾರ ನಾಗರಾಜ್ ಬಿ. ಕುಂದರ್ ಕೋಡಿಬೆಂಗ್ರೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.