ಗುಲ್ವಾಡಿ ವೆಂಟೆಡ್ ಡ್ಯಾಂ ಮೂಲಕ ಬಸ್ ಸಂಚರಿಸಲಿ: ಪ್ರಯಾಣಿಕರ ಮನವಿ
Team Udayavani, Feb 10, 2020, 6:49 AM IST
ಬಸ್ರೂರು: ಬಸ್ರೂರಿನಿಂದ ವಾರಾಹಿ ನದಿ ತಟದ ಮೇಲೆ ಗುಲ್ವಾಡಿ ಕಳುವಿನಬಾಗಿಲುವರೆಗೆ ರಸ್ತೆಯಿದೆ. ಬಹಳ ಹಿಂದೆ ಇಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಕ್ಕೂ ಮೊದಲು ಒಂದು ಬಸ್ ಕಂಡ್ಲೂರು ಹಳೆ ಕಳುವಿನಬಾಗಿಲಿನವರೆಗೆ ಬಂದು ಹೋಗುತ್ತಿತ್ತು. ಅನಂತರ ಆ ಬಸ್ ನಿಂತು ಹೋಯಿತು.
ಕಳುವಿನಬಾಗಿಲಿನಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಕಳೆಯಿತು. ಈ ಡ್ಯಾಂ ಮೇಲೆ ದೊಡ್ಡ ವಾಹನ ಮಾತ್ರ ಸಂಚರಿಸಲು ಸಾಧ್ಯವಿಲ್ಲ. ಅಂದರೆ ಮಿನಿ ಬಸ್ ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಮನವಿಯಾಗಿದೆ.
ಕುಂದಾಪುರದಿಂದ ತಲ್ಲೂರು-ಹೆಮ್ಮಾಡಿ ಮೂಲಕ ಕೊಲ್ಲೂರು ತಲುಪುದಕ್ಕೆ ಹೆಚ್ಚು ದೂರವಿದೆ. ಆ ಮಾರ್ಗದ ಬದಲು ಬಸ್ರೂರು-ಗುಲ್ವಾಡಿ-ಮಾವಿನಕಟ್ಟೆ-ವಂಡ್ಸೆ ಮೂಲಕ ಕೊಲ್ಲೂರಿಗೆ ಸಂಚರಿಸಿದರೆ ಅರ್ಧಕ್ಕಿಂತ ಹೆಚ್ಚು ದೂರ ಕಡಿಮೆಯಾಗುತ್ತದೆ.
ಈ ಮಾರ್ಗದಲ್ಲಿ ಬಸ್ ಸಂಚ ರಿಸುವುದರಿಂದ ಬಸ್ರೂರು-ಕೋಣಿ-ಕಂದಾವರ-ಬಳ್ಕೂರು-ಜಪ್ತಿಹುಣ್ಸೆ ಮಕ್ಕಿ-ಹಾಲಾಡಿ- ನೇರಳಕಟ್ಟೆ ಮಂತಾದ ಗ್ರಾಮಗಳ ಜನರಿಗೆ ಅನುಕೂಲ
ವಾಗುತ್ತದೆ ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.
ಬಸ್ ಸಂಚರಿಸಿದರೆ ಅನುಕೂಲ
ನಾನು ಪ್ರತಿದಿನ ಬಸ್ರೂರಿನಿಂದ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗಲು ಕುಂದಾಪುರಕ್ಕೆ ಹೋಗಿ ಅಲ್ಲಿಂದ ತಲ್ಲೂರು-ಮಾವಿನಕಟ್ಟೆ ಮಾರ್ಗವಾಗಿ ಸಾಗಿ ನೇರಳಕಟ್ಟೆಗೆ ಕಚೇರಿ ಕೆಲಸಕ್ಕೆ ಹೋಗುತ್ತಿದ್ದೇನೆ. ಈ ಮಾರ್ಗದಲ್ಲಿ ಬಸ್ ಸಂಚರಿಸಿದರೆ ನನ್ನಂತಹ ಅನೇಕ ಮಂದಿಗೆ ಅನುಕೂಲ
– ರಮಾನಾಥ್, ಸ್ಥಳೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ