ಕರಾವಳಿ ಅಭಿವೃದ್ಧಿಗೆ ಸ್ಪಷ್ಟ ಕಲ್ಪನೆಯಿದೆ

ಉದಯವಾಣಿ ಅತಿಥಿ ಸಂಪಾದಕರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Team Udayavani, Apr 12, 2022, 7:00 AM IST

ಕರಾವಳಿ ಅಭಿವೃದ್ಧಿಗೆ ಸ್ಪಷ್ಟ ಕಲ್ಪನೆಯಿದೆ

ಉದಯವಾಣಿ ಕಚೇರಿ, ಮಣಿಪಾಲ: ಕರಾವಳಿ ಅಭಿವೃದ್ಧಿಯ ಬಗ್ಗೆ ಅನೇಕ ಯೋಚನೆ, ಯೋಜನೆ ಇದೆ. ಆದರೆ ನಮಗೆ ಸಿಆರ್‌ಝಡ್‌ ನಿಯಮ ಸಮಸ್ಯೆ ಒಡ್ಡುತ್ತಿದೆ. ಪಕ್ಕದ ಕೇರಳ ಮತ್ತು ಗೋವಾಗಳಲ್ಲಿ ಸಿಆರ್‌ಝಡ್‌ ನಿಯಮಗಳಲ್ಲಿ ಕೆಲವು ವಿನಾಯಿತಿ ಇದೆ. ಹೀಗಾಗಿ ಅಲ್ಲಿ ಬೀಚ್‌ ಟೂರಿಸಂ ಇತ್ಯಾದಿ ಚೆನ್ನಾಗಿವೆ. ನಾವು ಕೂಡ ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಿಆರ್‌ಝಡ್‌ ನಿಯಮಗಳಿಗೆ ವಿನಾಯಿತಿಗೆ ಕೇಳಿದ್ದೇವೆ. ನಮ್ಮ ಪ್ರವಾಸೋದ್ಯಮ ಸಚಿವರಾದ ಆನಂದ್‌ ಸಿಂಗ್‌ ಕೂಡ ಜತೆಗಿದ್ದರು. ನಿಯಮ ಸಡಿಲಿಕೆ ಆಗುವ ಭರವಸೆ ಸಿಕ್ಕಿದೆ ಮತ್ತು ನಮ್ಮ ಪ್ರಯತ್ನವೂ ನಡೆಯುತ್ತಿದೆ. ಒಮ್ಮೆ ವಿನಾಯಿತಿ ಸಿಕ್ಕಿದರೆ ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭವಾಗಲಿವೆ. ಧಾರ್ಮಿಕ, ಬೀಚ್‌ ಪ್ರವಾಸೋದ್ಯಮದ ಜತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಮತ್ತು ಹೂಡಿಕೆಯೂ ಜಾಸ್ತಿಯಾಗಲಿದೆ. ಜಗತ್ತಿನ ಅತೀ ಸುಂದರ ಬೀಚ್‌ಗಳು ನಮ್ಮಲ್ಲಿವೆ. ಸಿಆರ್‌ಝಡ್‌ ನಿಯಮ ಸಡಿಲವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದಾಗಿದೆ. ಹೊಸ ಬಂದರು ನಿರ್ಮಾಣಕ್ಕೂ ಚಿಂತನೆ ನಡೆಸುತ್ತಿದ್ದೇವೆ. ಬಂದರುಗಳ ವಿಸ್ತರಣೆಗೂ ಪ್ರಯತ್ನ ಆಗುತ್ತಿದೆ. ಸ್ಪೆಷಲ್‌ ಹ್ಯಾಂಗರ್‌ ಮೂಲಕ ಲಕ್ಷದ್ವೀಪದಿಂದ ಕ್ರೂಸ್‌ ಆರಂಭ ಮಾಡಲು ವಿಶೇಷವಾದ ಸ್ಥಳವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಕರಾವಳಿಯ ಅಭಿವೃದ್ಧಿಗೆ ಹಲವು ಯೋಚನೆಗಳು ಇವೆ ಮತ್ತು ಅದನ್ನು ಕಾರ್ಯರೂಪಕ್ಕೂ ತರಲಿದ್ದೇವೆ…

– ಸೋಮವಾರ, ಎ. 11ರಂದು ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಗೆ ಭೇಟಿ ನೀಡಿ ಅತಿಥಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ ನಡೆದ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಯ ಅಭಿವೃದ್ಧಿಯ ಬಗ್ಗೆ ಹೊಂದಿರುವ ಯೋಜನೆಗಳ ಬಗ್ಗೆ ಹೇಳಿದ್ದಿದು.

ಸಾಫ್ಟ್ ಆಗಿದ್ದರೂ ಕಠಿನ ನಿರ್ಧಾರ ತೆಗೆದುಕೊಳ್ಳುವೆ
ಕೆಲಸ ಮಾಡದ ಮಾತ ನಾ ಡುವ ಸಿಎಂಗಿಂತ ಮಿತಭಾಷಿ ಸಿಎಂ ಉತ್ತ ಮ. ನಾವು ಗಟ್ಟಿ ಧ್ವನಿಯ ಹಲವು ಸಿಎಂ, ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ಅಂತಿಮ ಫ‌ಲಿತಾಂಶ ಏನೂ ಸಿಕ್ಕಿಲ್ಲ. ಜನರ ಭಾವನೆ ಅರ್ಥಮಾಡಿಕೊಂಡು ಸೂಕ್ಷ್ಮತೆಯಿಂದ, ಸಮಸ್ಯೆಯ ಭಾಗವಾಗದೆ ಪರಿಹಾರದ ಭಾಗವಾದಾಗ ಸಮಚಿತ್ತದಿಂದ ಮುನ್ನಡೆಯಬಹುದು. ನಾವು ಹೆಚ್ಚು ಮಾತಾಡಬಾರದು, ನಮ್ಮ ಕೆಲಸವೇ ಮಾತಾಡಬೇಕು ಎಂದು ತನ್ನ ಕಾರ್ಯ ವೈಖರಿಯನ್ನು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸಮಯ ಬಂದಾಗ ಅತ್ಯಂತ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಕರ್ನಾಟಕ ವೈಶಿಷ್ಟéಪೂರ್ಣವಾದ ರಾಜ್ಯವಾಗಿದೆ ಮತ್ತು ಅಪಾರ ನೈಸರ್ಗಿಕ ಸಂಪತ್ತಿದೆ. ಜನರಿಗೆ ಅವಕಾಶ ನೀಡಿದರೆ ಪ್ರಬಲವಾದ ಸಮರ್ಥ ಆರ್ಥಿಕ ಬೆಳವಣಿಗೆ ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಸಂಬಂಧ ಸ್ಪಷ್ಟ ಕಲ್ಪನೆ ನನ್ನಲ್ಲಿ ಇರುವುದರಿಂದ ಯಾವುದೇ ಹೇಳಿಕೆಗಳಿಗೂ ವಿಚಲಿತನಾಗದೆ ಗುರಿ ಸಾಧನೆಗೆ ಕೆಲಸ ಮಾಡುತ್ತೇನೆ. ಕೂಲ್‌, ಸಾಫ್ಟ್ ಏನೇ ಹೇಳಿ; ಆದರೆ ಸಮಯ ಬಂದಾಗ ಕಠಿನ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.

ಖಾರ್‌ಲ್ಯಾಂಡ್‌ ಯೋಜನೆ ಅನುಷ್ಠಾನ
ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಜತೆಗೆ ಖಾರ್‌ಲ್ಯಾಂಡ್‌ ಯೋಜನೆಯನ್ನು ಉಡುಪಿ, ದಕಿಣ ಕನ್ನಡಕ್ಕೂ ವಿಸ್ತರಣೆ ಮಾಡಿದ್ದೇವೆ. ಉ.ಕ. ಜಿಲ್ಲೆಯಲ್ಲಿ ಈಗಾಗಲೇ 300 ಕೋಟಿ ರೂ.ಗಳ ಕಾರ್ಯ ಆರಂಭವಾಗಿದೆ. ಈ ಯೋಜನೆಯಿಂದ ನದಿಯ ಸಿಹಿ ನೀರು ಉಪ್ಪಾಗುವುದನ್ನು ತಡೆಯಲು ಸಾಧ್ಯವಿದೆ ಮತ್ತು ಕೃಷಿ ಭೂಮಿಗೆ ಉಪ್ಪು ನೀರು ಹರಿಯುವುದನ್ನು ತಡೆಯಬಹುದಾಗಿದೆ. ಉಡುಪಿ, ದ.ಕ.ದಲ್ಲೂ ಯೋಜನೆ ಶೀಘ್ರ ಆರಂಭಿಸಲಿದ್ದೇವೆ.

ಮೌಲ್ಯಾಧಾರಿತ ರಾಜಕಾರಣ,
ಮೌಲ್ಯದ ರಾಜಕಾರಣ…
ಸರಕಾರಕ್ಕೆ ಸವಾಲುಗಳು ಸದಾ ಇರುತ್ತವೆ. ಜನಸಂಖ್ಯೆ ಹೆಚ್ಚಾದಂತೆ ಸರಕಾರದ ಮೇಲೆ ನಿರೀಕ್ಷೆಗಳು, ಬೇಡಿಕೆಗಳು ಹೆಚ್ಚುತ್ತವೆ ಮತ್ತು ಆ ಮೂಲಕ ಸವಾಲು ಜಾಸ್ತಿಯಾಗುತ್ತವೆ. ರಾಜಕಾರಣ ಮೂಲಭೂತವಾಗಿ ಸಾಕಷ್ಟು ಬದಲಾಗಿದೆ ಎಂದರೂ “ಮೌಲ್ಯಾಧಾರಿತ’ ರಾಜಕಾರಣಕ್ಕಿಂತ “ಮೌಲ್ಯ’ದ ರಾಜಕಾರಣವೇ ಹೆಚ್ಚಿದೆ. ಮೌಲ್ಯಾಧಾರಿತವೇ ಅಥವಾ ಮೌಲ್ಯದ ರಾಜಕಾರಣ ಆಯ್ಕೆ -ಇವೆ ರಡು ನಮ್ಮ ಮುಂದಿವೆ. “ಪೀಪಲ್‌ ಪೊಲಿಟಿಕ್ಸ್‌’ ಮೂಲಕ “ಪವರ್‌ ಪೊಲಿಟಿಕ್ಸ್‌’ ಮಾಡಬೇಕೇ ಅಥವಾ ಕೇವಲ “ಪವರ್‌ ಪೊಲಿಟಿಕ್ಸ್‌’ ಮಾಡಬೇಕೇ? ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಈ ಸವಾಲಿತ್ತು, ಈಗಲೂ ಇದೆ. ನೀತಿಗಳು, ಮೌಲ್ಯಗಳು ಒಂದೇ ರೀತಿ ಇದೆ. ವ್ಯಕ್ತಿಯ ನಿಯತ್ತು ಮತ್ತು ಅದನ್ನು ನೋಡುವ ದೃಷ್ಟಿಯೂ ಬದಲಾಗಿದೆ.

ಜನರು-ನಿಸರ್ಗ-ಸುಸ್ಥಿರ ಪರಿಸರ
ಜನರು ಮತ್ತು ನಿಸರ್ಗ ಒಟ್ಟಿಗೆ ಜೀವನ ನಡೆಸಿಕೊಂಡು ಸಾಗಿದಲ್ಲಿ ಮಾತ್ರ ಸುಸ್ಥಿರ ಪರಿಸರ ನಿರ್ಮಾಣ ಸಾಧ್ಯ. ಕರಾವಳಿ, ಮಲೆನಾಡಿನ ಅರಣ್ಯದಂಚಿನ ಜನರು, ಕಾಡಂಚಿನ ಗ್ರಾಮೀಣ ಭಾಗದವರು ಸಣ್ಣ ಕೃಷಿ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಹಿಂದಿನಿಂದಲೂ ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಹಸುರುಸ್ನೇಹಿ ಯೋಜನೆಗಳಿಗೆ ಪರಿಸರ ಬಜೆಟ್‌ನಲ್ಲಿ 100 ಕೋ. ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಕಸ್ತೂರಿರಂಗನ್‌ ವರದಿ ಜಾರಿ ಬಗ್ಗೆ ಅವಸರದ ತೀರ್ಮಾನ ಅಗತ್ಯವಿಲ್ಲ. ಜನರ ಬದುಕನ್ನು ತೊಂದರೆಗೆ ಸಿಲುಕಿಸುವ ಕೆಲಸವನ್ನು ಸರಕಾರ ಮಾಡುವುದಿಲ್ಲ . ನಾಡಿನ ಜನರು ಕಾಡಿನೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.


ಮಂಗಳೂರು ಅಭಿವೃದ್ಧಿ ಹೊಂದು ತ್ತಿರುವ ನಗರ. ಇಲ್ಲಿಗೆ ಮೆಟ್ರೋ ವ್ಯವಸ್ಥೆ ಮಾಡುವ ಆಲೋಚನೆ ಇದೆಯೇ?

ಮಂಗಳೂರು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಾಗ ಮತ್ತಷ್ಟು ಅವಕಾಶ ಸಿಗಲಿದೆ. ಮೆಟ್ರೋ ನಿರ್ಮಾಣಕ್ಕೆ ಅದರದ್ದೇ ಆದ ನಿಯಮಗಳಿವೆ. ಜನಸಂಖ್ಯೆ ದಟ್ಟನೆಗಳನ್ನು ನೋಡಿಕೊಂಡು ಮಾಡ ಲಾಗುತ್ತದೆ. ಬೆಂಗಳೂರಿನಂತೆ ಮಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಮಾಡುವುದು ಸಂತೋಷದ ವಿಚಾರ.

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.