ಕೋವಿಡ್‌ 19 ಭೀತಿ: ಬೆಲೆ ಕಳೆದುಕೊಂಡ ಅನಾನಸು

ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ;  ರೈತ ಹೈರಾಣ

Team Udayavani, Mar 23, 2020, 5:49 AM IST

ಕೋವಿಡ್‌ 19 ಭೀತಿ: ಬೆಲೆ ಕಳೆದುಕೊಂಡ ಅನಾನಸು

ಬೈಂದೂರು: ಕೋವಿಡ್‌ 19 ಭೀತಿ ಗ್ರಾಮೀಣ ಭಾಗಗಳಿಗೂ ಬಿಸಿ ಮುಟ್ಟಿಸಿದೆ. ಬೇಸಗೆ ನಿರೀಕ್ಷೆಯಲ್ಲಿ ಬೆಳೆಸಿದ ತರಕಾರಿ, ಸೌತೆಕಾಯಿ, ಸೊಪ್ಪುಗಳನ್ನು ತೋಟಕ್ಕೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ.ಅದರಲ್ಲೂ ಲಕ್ಷಾಂತರ ವ್ಯಯಮಾಡಿ ಅನಾನಸು ಬೆಳೆದ ಕೃಷಿಕರು ಫಲ ಬರುವ ಹೊತ್ತಿಗೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಾರುಕಟ್ಟೆಯಲ್ಲಿ ಉಚಿತವಾಗಿ ಕೊಟ್ಟರು ಅನಾನಸು ಕೇಳುವವರಿಲ್ಲದ ಪರಿಸ್ಥಿತಿ ಬಂದಿದೆ. ಒಟ್ಟಾರೆ ಯಾಗಿ ತರಕಾರಿ ಹಣ್ಣು ಹಂಪಲು ಬೆಳೆದ ರೈತರಿಗೆ ಬೇಸಗೆ ಬಿಸಿಲಿಗಿಂತ ಕೋವಿಡ್‌ 19 ಬಿಸಿ ಅಧಿಕವಾಗಿದೆ.

ಸಾಮಾನ್ಯವಾಗಿ ಅನಾನಸು, ಕುಂಬಳಕಾಯಿ, ಸೌತೆಕಾಯಿ, ಕಲ್ಲಂಗಡಿ ಮುಂತಾದವುಗಳು ಬೇಸಗೆಯಲ್ಲಿ ಉತ್ತಮ ಬೇಡಿಕೆ ಇರುತ್ತದೆ. ಅನಾನಸು ಒಂದು ವರ್ಷದ ಬೆಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಹಲವು ಎಕರೆ ಅನಾನಸು ಬೆಳೆ ಬೆಳೆಯಲಾಗುತ್ತಿದೆ. ಈ ಹಣ್ಣುಗಳನ್ನು ಕೇರಳ, ದೆಹಲಿ ಹಾಗೂ ಮುಂಬಯಿಗೆ ಕಳುಹಿಸಲಾಗುತ್ತದೆ. ಆದರೆ ಈ ವರ್ಷ ಹಣ್ಣು ಮಾರುವ ಸಮಯದಲ್ಲಿ ಕೋವಿಡ್‌ 19  ಭೀತಿ ಮೂಡಿಸಿದೆ. ಹೀಗಾಗಿ ಬಹುತೇಕ ಮಾರುಕಟ್ಟೆ ಬಂದ್‌ ಆಗಿದೆ. ಸ್ಥಳೀಯವಾಗಿ ಸಂತೆ, ಮಾರ್ಕೆಟ್‌ ಕೂಡ ತಟಸ್ಥವಾಗಿದೆ.

ಹೀಗಾಗಿ 30 ರೂ.ಗೆ ದೊರೆಯುತ್ತಿದ್ದ ಅನಾನಸು ಬೆಳೆ ಹತ್ತು ರೂಪಾಯಿಗೂ ಕೇಳುವವರಿಲ್ಲವಾಗಿದೆ. ಸರಾಸರಿ 1 ಕೆ.ಜಿ ಅನಾನಸು ಬೆಳೆಯಲು 15ರಿಂದ 18 ರೂ. ಖರ್ಚು ಇದೆ. ಕಳೆದ ವರ್ಷ ಕೂಡ ನಿಫಾ ವೈರಸ್‌ ನಿಂದ ಬಹುತೇಕ ಬೆಳೆಗಾರರು ಪೆಟ್ಟು ತಿಂದಿದ್ದರು. ಈ ವರ್ಷ ಕೂಡ ಕೋವಿಡ್‌ 19 ರೈತರನ್ನು ಕಂಗೆಡಿಸಿದೆ.

ಎಪ್ರಿಲ್‌, ಮೇ ತಿಂಗಳಲ್ಲಿ ದೇವಸ್ಥಾನ, ವಾರ್ಷಿಕೋತ್ಸವ, ಜಾತ್ರೆ, ಹಬ್ಬ, ಮದುವೆ, ಪೂಜೆ ಮುಂತಾದ ಕಾರ್ಯಕ್ರಮಗಳಾಗುತ್ತವೆ. ಈ ಸಮಯದಲ್ಲಿ ಬಾಳೆಎಲೆ, ತರಕಾರಿ, ಸೌತೆಕಾಯಿಗೆ ಉತ್ತಮ ಬೇಡಿಕೆ ಇರುತ್ತಿತ್ತು. ಈಗ ಪೇಟೆಗೆ ಜನ ಬರುವಂತಿಲ್ಲ. ಸಂತೆ ನಡೆಯುತ್ತಿಲ್ಲ ಹೀಗಾಗಿ ಹರಿವೆ, ಬಸಳೆ, ತೊಂಡೆ, ನುಗ್ಗೆ, ಬೆಂಡೆ, ಬದನೆ ಬೆಳೆಯುವ ರೈತರು ಕೂಡ ನಷ್ಟ ಅನುಭವಿಸಿದ್ದಾರೆ. ಬಹುತೇಕ ಬೆಳೆಗಳು ಕಟಾವು ಮಾಡಲಾಗಿದೆ. ಒಂದೆಡೆ ಮತ್ಸÂಕ್ಷಾಮ ಇನ್ನೊಂದೆಡೆ ಕೋಳಿ ಮಾಂಸದ ಬೇಡಿಕೆ ಇಲ್ಲದಿರುವುದು ಇದರ ನಡುವೆ ತರಕಾರಿ ಕೂಡ ಬೇಡಿಕೆ ಇಲ್ಲದೆ ಸಣ್ಣ ಪುಟ್ಟ ರೈತರು ಹೈರಾಣಾಗಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಆತಂಕ
ಬಹುನಿರೀಕ್ಷೆಯಿಂದ ಕೃಷಿಕರು ಬೆಳೆದ ಅನಾನಸು ಬೆಳೆಯಿಂದ ಕಳೆದೆರಡು ವರ್ಷಗಳಿಂದ ಕೈ ಸುಟ್ಟುಕೊಳ್ಳುವಂತಾಗಿದೆ. ಕಳೆದ ವರ್ಷ ನಿಫಾ ವೈರಸ್‌ ಬಂದರೆ ಈ ವರ್ಷ ಕೋವಿಡ್‌ 19 ಆತಂಕವಾಗಿದೆ. ವರ್ಷಕ್ಕೊಮ್ಮೆ ಬೆಳೆಯುವ ಈ ಬೆಳೆಗೆ ಈ ರೀತಿಯಾದರೆ ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ಯುವಜನತೆ ಆತಂಕಪಡುವಂತಾಗಿದೆ.
-ಜೋಜಿ, ಅನಾನಸು ಬೆಳೆಗಾರರು ಆಲಂದೂರು.

-ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.