Crime News; ಬ್ರಹ್ಮಾವರ ಭಾಗದ ಅಪರಾಧ ಸುದ್ದಿಗಳು
Team Udayavani, Sep 13, 2023, 9:16 PM IST
ಕಾರು ಢಿಕ್ಕಿ: ಗಾಯ
ಬ್ರಹ್ಮಾವರ: ಕೊಕ್ಕರ್ಣೆ ಮೊಗವೀರಪೇಟೆ ಬಳಿ ಮಂಗಳವಾರ ರಸ್ತೆ ಬದಿಯಲ್ಲಿ ನಿಂತು ಬಸ್ ಚಾಲಕನ ಬಳಿ ಮಾತನಾಡುತ್ತಿದ್ದ ಶೇಖರ ಅವರಿಗೆ ಕಾರೊಂದು ಢಿಕ್ಕಿ ಹೊಡೆದು ಸಣ್ಣ ಪುಟ್ಟ ಗಾಯಗಳಾಗಿವೆ.
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಮಟ್ಕಾ ಜುಗಾರಿ; ಬಂಧನ
ಬ್ರಹ್ಮಾವರ: ಇಲ್ಲಿನ ಪೇಟೆ ರಿಕ್ಷಾ ನಿಲ್ದಾಣ ಸಮೀಪ ಮಂಗಳವಾರ ಮಟ್ಕಾ ಜುಗಾರಿ ನಡೆಸುತ್ತಿದ್ದ ಅಮ್ಮುಂಜೆ ಮೂಲದ ಪ್ರಸ್ತುತ ಪೇತ್ರಿ ಪೇಟೆಯಲ್ಲಿ ವಾಸವಿರುವ ಪ್ರಶಾಂತ್ನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 1,630 ರೂ. ನಗದು ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ
ಬ್ರಹ್ಮಾವರ: ಬಾರಕೂರು ಕಲ್ಚಪ್ರ ಬಳಿ ವೈನ್ ಶಾಪ್ ಹಿಂಬದಿಯ ಕಟ್ಟಡದ ತೆರೆದ ಸ್ಥಳದಲ್ಲಿ ಶರಾಬು ಅಕ್ರಮ ಸೇವನೆ ಮಾಡುವುದು ಪತ್ತೆಯಾಗಿದೆ.
ಕಾರ್ತಿಕ್, ಶರತ್, ಧನುಷ್, ಶಶಿಧರ್, ಮದನ್, ಸುಶಾಂತ್, ವಿಘ್ನೇಶ್, ಸುನಿಲ್, ವಸಂತ್, ರಾಘು ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸರು ದಾಳಿ ಮಾಡಿದ್ದು ಓರ್ವ ಪರಾರಿಯಾಗಿದ್ದಾನೆ. ಮದ್ಯ ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಸೇವನೆ:ಇಬ್ಬರು ವಶಕ್ಕೆ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವಿಶಾಲ್ ಕುಮಾರ್ (30), ದಿಲೀಪ್ ಬಿ.ಜಿ. (21)ಯನ್ನು ಸೆನ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !