ಬೀಚ್‌ ಅಭಿವೃದ್ಧಿ ಸಮಿತಿಯಿಂದ ಕಡು ಬಡವರಿಗೆ ಶವ ಸಂಸ್ಕಾರ ಉಚಿತ

ಮೂಲ ಸೌಕರ್ಯದೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಮಲ್ಪೆ ಬೀಚ್‌

Team Udayavani, Nov 10, 2022, 10:11 AM IST

1

ಮಲ್ಪೆ: ಬೀಚ್‌ ಆಭಿವೃದ್ಧಿ ಸಮಿತಿ ಬೀಚ್‌ನ ಎಲ್ಲ ಅಭಿವೃದ್ಧಿ ಕೆಲಸ ಹಾಗೂ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇತ್ತೀಚೆಗೆ ನಗರಸಭಾ ಅಧಿವೇಶನದಲ್ಲಿ ಬೀಚ್‌ನ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ 5 ಭಜನಾ ಮಂದಿರಗಳ ವಿರುದ್ದ ನಗರಸಭಾ ಸದಸ್ಯರೋರ್ವರು ಸುಳ್ಳು ಆಪಾದನೆ ಮಾಡುತ್ತಿರುವುದು ಅವರ ಘನತೆಗೆ ತಕ್ಕುದಲ್ಲ.

ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಜನಾ ಮಂದಿರಗಳ ಹೆಸರಿಗೆ ಕಳಂಕ ತರುವ ಕೆಲವರ ದುರುದ್ದೇಶ ಖಂಡನೀಯ ಎಂದು ಬೀಚ್‌ ಆಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಹೇಳಿದ್ದಾರೆ.

ಇಲ್ಲಿ ಕಾಲಿಡಲು ಹೆದರಿಕೆ

ಒಂದು ಕಾಲದಲ್ಲಿ ಮಲ್ಪೆ ಬೀಚ್‌ ಅಭಿವೃದ್ಧಿಯಾಗದೇ ಪ್ರವಾಸಿಗರು ಇಲ್ಲಿ ಕಾಲಿಡಲೂ ಹೆದರುವಂತಹ ಸಮಯ ಇತ್ತು. ಊರಿನ ಬೀಚ್‌ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸ್ಥಳೀಯ ಭಜನಾ ಮಂದಿರದ ಸೇವಾ ಘಟಕವಾಗಿ ರಚಿಸಲ್ಪಟ್ಟ ಸಮಿತಿಯೇ ಬೀಚ್‌ ಅಭಿವೃದ್ಧಿ ಸಮಿತಿ.

1976ರವರೆಗೂ ಇಲ್ಲಿ ರಾತ್ರಿ ಲಾರಿಗಟ್ಟಲೆ ಮರಳು ಸಾಗಿಸಿ ಬೀಚ್‌ ಉದ್ದಕ್ಕೂ ಕಸ ತುಂಬಿದ ದೊಡ್ಡ ದೊಡ್ಡ ಹೊಂಡಗಳಿತ್ತು. ಭಜನಾ ಮಂದಿರದ ಪ್ರಯತ್ನದಿಂದ ಮರಳು ಸಾಗಟ ನಿಲ್ಲಿಸ ಲಾಯಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅವರು ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಲಾಗಿರುವ ಹೊಟೇಲನ್ನು ಸರಕಾರ ಹೊಟೇಲ್‌ ಮತ್ತು ಅದರ ಎದುರಿನ ರಸ್ತೆ ತುಂಡರಿಸಿ ಸಮುದ್ರತೀರದ ಉದ್ದಕ್ಕೂ ಸಾರ್ವಜನಿಕರು ಬಾರ ದಂತೆ ಅವರಣಗೋಡೆ ನಿರ್ಮಿಸಿ ಖಾಸಗಿಯವರಿಗೆ ನೀಡಲು ಹೊರ ಟಾಗ ಅದರ ವಿರುದ್ದ ಹೋರಾಟ ನಡೆಸಿದರ ಪರಿಣಾಮ ಇಂದು ಬೀಚ್‌ ಸಾರ್ವಜನಿಕರಿಗಾಗಿ ಉಳಿದುಕೊಂಡಿದೆ ಎನ್ನುತ್ತಾರೆ ಪಾಂಡುರಂಗ ಮಲ್ಪೆ.

ಮೂಲ ಸೌಕರ್ಯ

2008ರಲ್ಲಿ ಅಂದಿನ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ ಅವರು ಪ್ರಯತ್ನ, ಕೆ. ರಘುಪತಿ ಭಟ್‌ ಅವರ ಮುಂದಾಳುತನದಲ್ಲಿ, ರಸ್ತೆ ಮತ್ತು ಪಾರ್ಕಿಂಗ್‌ ಪ್ರದೇಶದಲ್ಲಿ ಇಂಟರ್‌ಲಾಕ್‌, ಶೌಚಾಲಯ, ಸ್ನಾನಗೃಹ, ಗಾಂಧಿ ಪ್ರತಿಮೆ ನಿರ್ಮಾಣ, ವೇದಿಕೆ, ಹೈಮಾಸ್ಟ್‌ ದೀಪ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

ಸುರಕ್ಷೆಗೆ ಗಮನ

ಪ್ರವಾಸಿಗರ ಸುರಕ್ಷೆ ದೃಷ್ಟಿಯಿಂದ 8 ಮಂದಿ ಲೈಫ್‌ ಗಾರ್ಡ್‌, ಜೀವ ರಕ್ಷಕ ಸಾಧನ, ಸಿ. ಸಿ ಕೆಮರಾ, ಧ್ವನಿವರ್ಧಕ, ಸೂಚನೆ ನೀಡಲು ಮೋಟಾರ್‌ ಬೈಕ್‌, ಈಜಲು ಪ್ರತ್ಯೇಕ ಸ್ವಿಮ್ಮಿಂಗ್‌ ಝೋನ್‌, ಸೂಚನಾ ಫಲಕ, ಸ್ವಚ್ಚತಾ ಸಿಬಂದಿ, ಹಟ್‌, ಸ್ವಚ್ಚತಾ ವಾಹನ, ವಾಚ್‌ ಟವರ್‌ ನಿರ್ಮಿಸ ಲಾಗಿದೆ. ಅದರೂ ಜೀವರಕ್ಷಕರ ಎಚ್ಚರಿಕೆ ಧಿಕ್ಕರಿಸಿ ಅಥವಾ ಮದ್ಯಪಾನ ಮಾಡಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

ಟೆಂಡೆರ್‌ ನಿಯಮದಂತೆ ದ್ವಿಚಕ್ರ ವಾಹನ ಸಹಿತ ಪ್ರತಿ 2 ಗಂಟೆಯಂತೆ ಪಾರ್ಕಿಂಗ್‌ ಶುಲ್ಕ ವಸೂಲು ಮಾಡಲು ಅವಕಾಶ ಇದೆ. ಇಡೀ ದಿನಕ್ಕೆ ಒಂದೇ ಶುಲ್ಕ ಸ್ವೀಕರಿಸಲಾಗುತ್ತದೆ. ಇದುವರೆಗೂ ದ್ವಿಚಕ್ರಕ್ಕೆ ವಾಹನ ಶುಲ್ಕ ಸ್ವೀಕರಿಸುವುದಿಲ್ಲ. ಪಾರ್ಕಿಂಗ್‌ ಜಾಗ ಚಿಕ್ಕದಾಗಿರುವ ಕಾರಣ ವಡಭಾಂಡೇಶ್ವರದ ಸ್ವಾಗತ ಕಮಾನಿ ನಿಂದ ಹನುಮಾನ್‌ ವಿಠೊಭ ಭಜನಾ ಮಂದಿರದವರೆಗೆ ಮತ್ತು ಶಿವ ಪಂಚಾಕ್ಷರಿ ಭಜನಾ ಮಂದಿರದ ರಸ್ತೆಯ ಎರಡೂ ಬದಿ ಪಾರ್ಕಿಂಗ್‌ ಶುಲ್ಕ ಸಂಗ್ರಹ ಮಾಡಲು ಟೆಂಡೆರ್‌ನಲ್ಲಿ ಅವಕಾಶ ಒದಗಿಸಲಾಗಿದೆ.

ಕಡು ಬಡವರಿಗೆ ಉಚಿತ ಸೇವೆ

ಪಾಳುಬಿದ್ದಿ ಹಿಂದೂ ರುದ್ರಭೂಮಿ ಯನ್ನು ಬೀಚ್‌ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಶಾಸಕರ ಮತ್ತು ನಗರ ಸಭೆಯ ನಿಧಿಯಿಂದ 2 ಲಕ್ಷ ರೂ. ವಿನಿಯೋಗಿಸಿ ಜುಲೈ ಒಂದ 2012ರಲ್ಲಿ ಸಾರ್ವಜನಿಕರ ಸೇವೆ ಒದಗಿಸಲಾಗಿತ್ತು. ಕೊರೋನ ಸಂದರ್ಭದಲ್ಲಿ ದೂರದ ಊರುಗಳಿಂದ ತಂದ ಶವಗಳಿಗೆ ಸಂಸ್ಕಾರ ಮಾಡಲಾಗಿದೆ. ಈಗಲೂ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ. ಎಲ್ಲವೂ ಸಮಿತಿಯ ವತಿಯಿಂದ ಪಾವತಿ ಮಾಡಲಾಗುತ್ತದೆ.

ದತ್ತಿ ಇಲಾಖೆಯ 5 ಲಕ್ಷ ಅನುದಾನ ದಲ್ಲಿ ಸ್ವಾಗತ ಗೋಪುರ, ನಗರಸಭೆ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಕಟ್ಟಿಗೆ ದಾಸ್ತಾನು ಕೊಠಡಿ ನಿರ್ಮಿಸಲಾಗಿದೆ. ಮುಂದೆ ರುದ್ರಭೂಮಿಯ ಅಭಿವೃದ್ಧಿಗೆ ಕರಾವಳಿ ಪ್ರಾಧಿಕಾರದಿಂದ 10ಲಕ್ಷ. ಸಮಾಜ ಕಲ್ಯಾಣ ಇಲಾಖೆಯಿಂದ 10ಲಕ್ಷ ಬಿಡುಗಡೆಯಾಗಿದೆ.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.