ಕುಂದಾಪುರದಲ್ಲಿ ಭಾರೀ ಗಾಳಿ-ಮಳೆ; ಹಾನಿ
Team Udayavani, May 31, 2017, 12:07 PM IST
ಕುಂದಾಪುರ: ಕುಂದಾಪುರದ ಪರಿಸರದಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಕೆಲವಡೆ ಮರಗಳು ಉರುಳಿವೆ. ನಗರದ ಹೊರ ವಲಯದ ಸಂಗಮ ಪರಿಸದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಬೃಹತ್ ಮರವೊಂದು ಉರುಳಿ ಸುಮಾರು 6 ಲಕ್ಷ ರೂ. ಹಾನಿ ಸಂಭವಿಸಿದೆ.
ಸಂಜೆ ಶಾಲೆ ಬಿಟ್ಟು ಹತ್ತು ನಿಮಿಷಗಳ ಅನಂತರ ಮರ ಉರುಳಿದ್ದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷರು, ಸ್ಥಳೀಯ ಸಂಗಮ್ ಫ್ರೆಂಡ್ಸ್ ಸದಸ್ಯರು ಭೇಟಿ ನೀಡಿದರು. ಮರದ ತೆರವು ಕಾರ್ಯ ಬುಧವಾರ ನಡೆಸಲಾಗುತ್ತದೆ.
ಬಸೂÅರು ಗ್ರಾಮದ ಮಾರ್ಗೋಳಿ ಕಿಶನ್ ಎಂಟರ್ಪ್ರೈಸಸ್ನಲ್ಲಿ ಸಂಜೆ ಬೀಸಿದ ಗಾಳಿಗೆ ಮಾಡಿನ ತಗಡು ಹಾಗೂ ಟ್ರಸ್ ಹಾರಿಹೋಗಿ 2 ಲ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.ದೋಣಿ, ಬಲೆ ನೀರುಪಾಲುಭಾರೀ ಗಾಳಿಯಿಂದಾಗಿ ಪಂಚ ಗಂಗಾವಳಿ ತೀರದಲ್ಲಿ ಲಂಗರು ಹಾಕಿದ್ದ ಅನೇಕ ಪಾತಿ ದೋಣಿಗಳು ನದಿಯಲ್ಲಿ ತೇಲಿಹೋದವು. ತಟದಲ್ಲಿದ್ದ ದೋಣಿಗಳಲ್ಲಿ ಇರಿಸಿದ್ದ ಬಲೆಗಳು ನೀರುಪಾಲಾದರೂ ತತ್ಕ್ಷಣ ಜಾಗೃತರಾದ ಮೀನುಗಾರರು ಅವುಗಳನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು.
ಖಾರ್ವಿಕೇರಿ ಪರಿಸರದಲ್ಲಿ ಚಂದ್ರ ಖಾರ್ವಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ರಂಗ ಖಾರ್ವಿ ಅವರ ಮನೆಯ ಹೆಂಚುಗಳು ಹಾರಿಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ