ಆಂತರಿಕ ದೂರು ಸಮಿತಿ; ಮಹಿಳೆಯರಲ್ಲಿ ಮಾಹಿತಿ ಕೊರತೆ

ಕೋವಿಡ್‌ ಲಾಕ್‌ಡೌನ್‌ ಅನಂತರ ದೂರುಗಳ ಸಂಖ್ಯೆ ಶೂನ್ಯ

Team Udayavani, Oct 10, 2021, 5:31 AM IST

ಆಂತರಿಕ ದೂರು ಸಮಿತಿ; ಮಹಿಳೆಯರಲ್ಲಿ ಮಾಹಿತಿ ಕೊರತೆ

ಸಾಂದರ್ಭಿಕ ಚಿತ್ರ.

ಉಡುಪಿ: ಕೇಂದ್ರ ಸರಕಾರ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯುವ ಉದ್ದೇಶದಿಂದ ಜಾರಿಗೆ ತಂದ ಜಿಲ್ಲಾಮಟ್ಟದ ಸ್ಥಳೀಯ ಹಾಗೂ ಆಂತರಿಕ ದೂರು ಸಮಿತಿಗಳು ಉಡುಪಿಯಲ್ಲಿ ರಚನೆಯಾದರೂ, ಮಾಹಿತಿ ಕೊರತೆಯಿಂದಾಗಿ ಮಹಿಳೆಯರು ದೂರು ನೀಡಲು ಮುಂದಾಗುತ್ತಿಲ್ಲ.

ಕಾನೂನಿನ ಪ್ರಕಾರ ಕನಿಷ್ಠ 10 ಉದ್ಯೋಗಿಗಳಿರುವ ಖಾಸಗಿ ಮತ್ತು ಸರಕಾರಿ ಕಚೇರಿ, ಉದ್ಯಮಗಳಲ್ಲಿ ಆಂತರಿಕ ದೂರು ಸಮಿತಿ ರಚನೆಯಾಗಬೇಕು. 10ಕ್ಕಿಂತ ಕಡಿಮೆ ಮಹಿಳಾ ಸಿಬಂದಿಯಿರುವಲ್ಲಿ ಆಂತರಿಕ ಸಮಿತಿ ರಚನೆಯಾಗದ ಸಂಸ್ಥೆಗಳಿದ್ದರೆ, ಆ ಸಂಸ್ಥೆಯವರು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಗೆ ದೂರು ನೀಡಬಹುದಾಗಿದೆ. ಜಿಲ್ಲಾ ಸಮಿತಿಗೆ ಸಾಮಾಜಿಕವಾಗಿ ಸಕ್ರಿಯವಾಗಿ ರುವ ಮಹಿಳೆಯೊಬ್ಬರು ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ವಕೀಲರೂ ಇರುತ್ತಾರೆ.

ಜಿಲ್ಲೆಯಲ್ಲಿ 10ಕ್ಕಿಂತ ಅಧಿಕ ಮಹಿಳಾ ಸಿಬಂದಿಯಿರುವ ಸರಕಾರಿ 29 ಇಲಾಖೆಗಳಲ್ಲಿ ಹಾಗೂ ಅರೆ ಖಾಸಗಿ ಸಂಸ್ಥೆಗಳಲ್ಲಿ ಇದುವರೆಗೆ 97 ಆಂತರಿಕ ದೂರು ಸಮಿತಿ ರಚಿಸಿದೆ. 10ಕ್ಕಿಂತ ಕಡಿಮೆ ಮಹಿಳಾ ಸಿಬಂದಿಯಿರುವ ಸುಮಾರು 10 ಸರಕಾರಿ ಇಲಾಖೆಗಳು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಯಲ್ಲಿ ದಾಖಲಿಸಿಕೊಂಡಿವೆ.

ಮಾಹಿತಿ ಕೊರತೆ
ಪ್ರಸ್ತುತ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಗೇರುಬೀಜ ಕಾರ್ಖಾನೆ ಸೇರಿದಂತೆ ವಿವಿಧ ಚಿಕ್ಕ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆ 10ಕ್ಕಿಂತ ಅಧಿಕವಿದ್ದರೂ ಕೆಲವಡೆ ಆಂತರಿಕ ದೂರು ಸಮಿತಿ ರಚನೆಯಾಗಿಲ್ಲ. ರಚನೆಯಾಗಿದ್ದರೂ ಅಲ್ಲಿನ ಮಹಿಳೆಯರಿಗೆ ಮಾಹಿತಿ ಕೊರತೆಯಿಂದ ಕಿರುಕುಳ ಎದುರಿಸಿದ್ದರೂ, ದೂರು ನೀಡಲು ತಿಳಿಯದೆ, ಕೆಲಸ ಬಿಟ್ಟು ಹೋಗಿರುವ ಪ್ರಕರಣಗಳು ಸಾಕಷ್ಟಿವೆ.

ಕೇವಲ 4 ಪ್ರಕರಣ!
ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿ ಹಾಗೂ ಆಂತರಿಕ ದೂರು ಸಮಿತಿಗಳು ರಚನೆಯಾಗಿ ಸುಮಾರು 10 ವರ್ಷಗಳು ಸಮೀಪಿಸುತ್ತಿದೆ. ಇದುವರೆಗೆ ಉಡುಪಿ ಸ್ಥಳೀಯ ದೂರ ಸಮಿತಿಗೆ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ 4 ಮಹಿಳೆಯರಿಂದ ಮಾತ್ರ ದೂರು ದಾಖಲಾಗಿದೆ. ಅದರ ಹೊರತಾಗಿ ಸಂಸ್ಥೆ ಹಾಗೂ ಸರಕಾರಿ ಇಲಾಖೆಯಲ್ಲಿನ ಆಂತರಿಕ ಸಮಿತಿಯಲ್ಲಿ ಇದುವರೆಗೆ ಒಂದೂ ದೂರು ದಾಖಲಾಗಿಲ್ಲ.

ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

ದೂರು ನೀಡಲು ಅಸಾಧ್ಯ
ಕಚೇರಿಗಳಲ್ಲಿ ಈಗಲೂ ಹೆಣ್ಣು ಮಕ್ಕ ಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೆ ಹಿರಿಯ ಅಧಿಕಾರಿಗಳೇ ಸಮಿತಿಯ ಪ್ರಮುಖರಾಗಿರು ವುದರಿಂದ ಆಂತರಿಕ ಸಮಿತಿಗೆ ಮುಕ್ತವಾಗಿ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕಚೇರಿಗಳಲ್ಲಿ ಸಮಿತಿ ಮತ್ತು ದೂರು ಪೆಟ್ಟಿಗೆಗಳೇ ಇಲ್ಲ.

3 ತಿಂಗಳೊಳಗೆ ದೂರು ನೀಡಿ
ಲೈಂಗಿಕ ಕಿರುಕುಳ ಬಾಧಿತ ಮಹಿಳೆಯರು ಕೃತ್ಯ ನಡೆದ 3 ತಿಂಗಳೊಳಗಾಗಿ ಲಿಖೀತ ರೂಪದಲ್ಲಿ ಸಮಿತಿಗೆ ದೂರು ನೀಡಬೇಕು. ಬಾಧಿತ ಮಹಿಳೆ 3 ತಿಂಗಳೊಳಗಾಗಿ ದೂರು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಿರುವುದಾಗಿ ನಿರೂಪಿಸಿದಲ್ಲಿ ದೂರು ಸಮಿತಿಯು ಹೆಚ್ಚುವರಿ 3 ತಿಂಗಳವರೆಗೂ (ಒಟ್ಟು 6 ತಿಂಗಳು) ದೂರನ್ನು ಸ್ವೀಕರಿಸುತ್ತದೆ. ಒಂದು ವೇಳೆ ಕಿರುಕುಳಕ್ಕೆ ಒಳಗಾದ ಮಹಿಳೆ ದೂರು ನೀಡಲು ಮಾನಸಿಕ ಮತ್ತು ದೈಹಿಕ ಸಮಸ್ಯೆಗೆ ಒಳಗಾಗಿದ್ದರೆ, ಅವರ ಕಾನೂನುಬದ್ಧ ವಾರಸುದಾರರು ದೂರು ನೀಡಲು ಅವಕಾಶವಿದೆ.

ಹೆಸರಿಗಷ್ಟೇ ಸಮಿತಿ
ಕೆಲವು ಬ್ಯಾಂಕ್‌, ಶಾಲೆ, ಕಾಲೇಜು ಮತ್ತು ಜಿಲ್ಲಾಮಟ್ಟದ ಕಚೇರಿಗಳಲ್ಲಿ ಮಾತ್ರ ಆಂತರಿಕ ಸಮಿತಿ ಸಕ್ರಿಯವಾಗಿವೆ. ಉಳಿದಂತೆ ಖಾಸಗಿ ಸಂಸ್ಥೆಗಳಲ್ಲಿ ಸಮಿತಿಗಳಿಲ್ಲ. ಕೆಲವೆಡೆ ನಿಯಮದಂತೆ ದೂರು ಪೆಟ್ಟಿಗೆ ಮತ್ತು ಸಮಿತಿ ಸದಸ್ಯರ ಹೆಸರಿನ ಫ‌ಲಕಗಳನ್ನು ಅಳವಡಿಸಿಲ್ಲ. ಪ್ರತೀ 3 ವರ್ಷಗಳಿಗೊಮ್ಮೆ ಆಂತರಿಕ ದೂರು ಸಮಿತಿಯನ್ನು ಪುನರ್‌ ರಚಿಸಬೇಕೆನ್ನುವ ನಿಯಮವಿದ್ದರೂ ಸಮಿತಿಗಳು ಬದಲಾಗಿಲ್ಲ.

ದೂರು ಸಾಬೀತಾದರೆ/ಸುಳ್ಳು ದೂರಿಗೆ ಶಿಕ್ಷೆ?
-ತಪ್ಪಿತಸ್ಥರಿಗೆ ಎಚ್ಚರಿಕೆ, ದಂಡ ವಿಧಿಸಲಾಗುತ್ತದೆ
– ವರ್ಗಾವಣೆ, ಕೆಲಸದಿಂದ ವಜಾಗೊಳಿಸಲು ಶಿಫಾರಸು
– ಪದೋನ್ನತಿ ಅಥವಾ ಸಂಬಳ ತಡೆಹಿಡಿಯುವುದು
– ದೈಹಿಕ ಮಾನಸಿಕ ಯಾತನೆಗೆ ವೈದ್ಯಕೀಯ ವೆಚ್ಚ ಭರಿಸಬೇಕು.

ಸಮಿತಿ ರಚಿಸಲು ಸೂಚನೆ
ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಸಂಸ್ಥೆಯಲ್ಲಿ 10ಕ್ಕಿಂತ ಅಧಿಕ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಲ್ಲಿ ಆಂತರಿಕ ಸಮಿತಿ ರಚಿಸುವಂತೆ ಈಗಾಲೇ ಸೂಚನೆ ನೀಡಲಾಗಿದೆ. ಸಮಿತಿ ರಚಿಸಿದೇ ಇರುವ ಸಂಸ್ಥೆಗಳಿಗೆ 50 ಸಾವಿರ ರೂ.ಯಿಂದ 1 ಲ.ರೂ. ವರೆಗೆ ದಂಡ ವಿಧಿಸುವುದು ಸೇರಿದಂತೆ, ಪರವಾನಿಗೆ ರದ್ದುಪಡಿಸುವ ಅವಕಾಶ ಕಾನೂನಿನಲ್ಲಿದೆ.
– ಶೇಷಪ್ಪ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ ಉಡುಪಿ

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.