ಭತ್ತಕ್ಕೆ ಹಸಿರು ಗೊಬ್ಬರವಾಗಿ ಸೆಣಬು ಬೆಳೆ 


Team Udayavani, Jun 10, 2018, 6:00 AM IST

0706ra3e-1.jpg

ಪಡುಬಿದ್ರಿ:  ಭತ್ತ ಬೇಸಾಯ ವನ್ನು ಲಾಭದಾಕವನ್ನಾಗಿ ಮಾಡುವು ದರೊಂದಿಗೆ ಹೆಚ್ಚುವರಿ ಇಳುವರಿ ತೆಗೆಯಲು ಕೃಷಿ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ರೈತರಿಗೆ ಕೆಲವೊಂದು ವಿಧಾನಗಳನ್ನು ಅದು ಪರಿಚಯಿಸುತ್ತಿದೆ. ಇದೀಗ ಭತ್ತದ ಕೃಷಿಗೆ ಪೂರಕವಾಗಿ ಹಸುರು ಗೊಬ್ಬರ ಒದಗಿಸಲು ಸೆಣಬು(ಸನ್‌ ಹೆಂಪ್‌)ಬೀಜ ಬಿತ್ತನೆ ವಿಧಾನ ಹೇಳಲಾಗಿದೆ. ಈ ಸೆಣಬು ಬೆಳದು ಹಸುರು ಗೊಬ್ಬರ ಮಾಡುವುದರಿಂದ ಮಣ್ಣಿನ ಫ‌ಲವತ್ತತೆ, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. 

ಬೀಜ ಪೂರೈಕೆ  
ಭತ್ತ ಬೇಸಾಯದ ಕೃಷಿ ಭೂಮಿಯ ವಿಸ್ತೀರ್ಣಕ್ಕನುಗುಣವಾಗಿ ಕೃಷಿ ಭೂಮಿಯ ಪಹಣಿ ಪತ್ರದ ಆಧಾರದಲ್ಲಿ ಸ್ಥಳೀಯ ಕೃಷಿ ಸೇವಾ ಕೇಂದ್ರಗಳ ಮೂಲಕ ಸೆಣಬು ಬೀಜವನ್ನು ರೈತ ಫಲಾನುಭವಿಗಳು ಪಡೆಯಬಹುದಾಗಿದೆ.

ಹಸಿರು ಗೊಬ್ಬರ ಸಮಸ್ಯೆಯಿಲ್ಲ
ಸತ್ವಾಂಶಗಳನ್ನು ಒದಗಿಸುವ ಯಾವುದೇ ಕೃತಕ ಪೋಷಕಾಂಶಗಳ ತಯಾರಿ ಇಂದಿನ ದಿನಗಳಲ್ಲಿ ತುಂಬಾ ದುಬಾರಿ. ಈ ನಿಟ್ಟಿನಲ್ಲಿ ಸೆಣಬನ್ನು ಬೆಳೆಸಿದರೆ ಹಸಿರು ಗೊಬ್ಬರದ ಸಮಸ್ಯೆಯೇ ಇಲ್ಲದಂತಾಗುತ್ತದೆ. ಹದ ಮಾಡಿದ ಗದ್ದೆಗೆ ಎಕರೆಗೆ 20ಕೆ. ಜಿ. ಪ್ರಮಾಣದಲ್ಲಿ ಸೆಣಬು ಬೀಜ ಬಿತ್ತನೆ ಮಾಡಿ, 45ದಿನಗಳ ನಂತರದಲ್ಲಿ 3ರಿಂದ 4ಅಡಿ ಬೆಳೆದ ಸೆಣಬು ಗಿಡಗಳನ್ನು ಕಟಾವು ಮಾಡದೆ ಉಳುಮೆ ಮಾಡುವ ಮೂಲಕ ಮಣ್ಣಿಗೆ ಸೇರಿಸಲಾಗುತ್ತದೆ.

ಬಿತ್ತನೆಯ ವಿಧಾನ
ಭತ್ತದ ಬೆಳೆಗೆ 40ದಿನಗಳ ಮೊದಲು ಮಾಗಿ ಉಳುಮೆಯಾದ ಗದ್ದೆಯನ್ನು ಸ್ವಲ್ಪ ತೇವಾಂಶದಲ್ಲಿ ಉತ್ತು ಮಣ್ಣನ್ನು ಹದ ಮಾಡಿಟ್ಟು, ಎಕರೆಗೆ ಸಾಧಾರಣ 20ಕೆ. ಜಿ. ಯಷ್ಟು ಸೆಣಬು ಬೀಜವನ್ನು ಬಿತ್ತನೆ ಮಾಡಬೇಕು. 40ದಿನಗಳಲ್ಲಿ ಸೆಣಬು ಗಿಡಗಳು 3-4ಅಡಿಗಳಷ್ಟು ಎತ್ತರವಾಗಿ ಹುಲುಸಾಗಿ ಬೆಳೆಯುತ್ತವೆ. ಇದರಿಂದ ಎಕರೆಗೆ ಸಾಧಾರಣ 10ಟನ್‌ಗಳಷ್ಟು ಹಸಿ ಸೊಪ್ಪು ಲಭ್ಯವಾಗುತ್ತದೆ.

ಮಾನವ ಶ್ರಮ ಕಡಿಮೆ
ಸೆಣಬು ಬೆಳೆಯಿಂದ ಎಕರೆಗೆ 10ರಿಂದ 12 ಟನ್‌ ಹಸಿರು ಸೊಪ್ಪು ಲಭ್ಯ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಪೋಷಕಾಂಶ ಒದಗುತ್ತದೆ. ಸೆಣಬನ್ನು ಬೆಳೆದು ಅದನ್ನೇ ಉಳುಮೆ ಮಾಡುವುದರಿಂದ ಗೊಬ್ಬರ ಹೊರುವ ಮಾನವ ಶ್ರಮವೂ ಕಡಿಮೆಯಾಗುತ್ತದೆ. 
– ಬಾಲಕೃಷ್ಣ ಭಟ್‌

2500ಎಕ್ರೆ ಸೆಣಬು ಬೆಳೆ
ಸದೃಢವಾಗಿ ಬೆಳೆದ ಸೆಣಬು ಸಸಿಗಳನ್ನು (ಕಟಾವು ಮಾಡದೆ) ಮತ್ತೂಮ್ಮೆ ಉಳುಮೆಯ ಮೂಲಕ ಮಣ್ಣಿಗೆ ಸೇರಿಸಬಹುದು. ಈ ರೀತಿಯಾಗಿ ಭೂಮಿಗೆ ಹೆಚ್ಚಿನ ಸಾರಜನಕದ ಜತೆಗೆ ರಂಜಕ, ಪೊಟಾಷ್‌ ಹಾಗೂ ಲಘು ಪೋಷಕಾಂಶಗಳನ್ನು ಸೇರಿಸಿ ದಂತಾಗುತ್ತದೆ. ಜಿಲ್ಲೆಯಲ್ಲಿ 310 ಕ್ವಿಂಟಾಲ್‌ ಸೆಣಬು ಬೀಜ ಪೂರೈಕೆಯಾಗಿದ್ದು, 2500 ಎಕರೆ ಜಮೀನಿನಲ್ಲಿ ಈ ವರ್ಷ ಸೆಣಬು ಬೆಳೆ ಬೆಳೆಸಲಾಗುತ್ತಿದೆ. 
– ಚಂದ್ರಶೇಖರ ನಾಯಕ್‌,
ಉಡುಪಿ ಜಿಲ್ಲಾ ಕೃಷಿ ಕೇಂದ್ರ ಉಪ ನಿರ್ದೇಶಕರು

– ಆರಾಮ

ಟಾಪ್ ನ್ಯೂಸ್

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.