ಕಲ್ಯಾಣಪುರ -ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ: ಇಂದಿನಿಂದ ಬದಲಿ ಮಾರ್ಗ “ಪ್ರಯೋಗ’


Team Udayavani, Jan 30, 2023, 7:23 AM IST

ಕಲ್ಯಾಣಪುರ -ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ: ಇಂದಿನಿಂದ ಬದಲಿ ಮಾರ್ಗ “ಪ್ರಯೋಗ’

ಉಡುಪಿ: ಸಂತೆಕಟ್ಟೆ ಪರಿಸರದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಿಸಲು ಮತ್ತು ಆಗುತ್ತಿರುವ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಓವರ್‌ ಪಾಸ್‌ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿದ್ದು, ಕಾಮಗಾರಿಗೆ ಪೂರಕವಾಗಿ ಸೋಮವಾರದಿಂದ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗುತ್ತದೆ.

ವ್ಯವಸ್ಥಿತವಾಗಿ ಬದಲಿ ಮಾರ್ಗ ರೂಪುಗೊಳಿಸದ ಹಿನ್ನೆಲೆಯಲ್ಲಿ ಒಮ್ಮೆ ಶುರುವಾಗಿದ್ದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಅಲ್ಲದೆ, ಗುದ್ದಲಿ ಪೂಜೆಯ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸ್ಥಳೀಯ ಶಾಸಕ ರಘುಪತಿ ಭಟ್‌ ಅವರು ಬದಲಿ ಮಾರ್ಗವನ್ನು ಪೂರ್ಣ ಪ್ರಮಾಣದಲ್ಲಿ ಸಮರ್ಪಕವಾಗಿ ರೂಪಿಸಿದ ಅನಂತರವೇ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಮತ್ತು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು. ಬದಲಿ ಮಾರ್ಗ ಸಮರ್ಪಕವಾಗಿ ರೂಪಿಸದೆ ಕಾಮಗಾರಿ ಆರಂಭಿಸಿದರೆ ಟ್ರಾಫಿಕ್‌ ಸಮಸ್ಯೆಯ ಜತೆಗೆ ಹಲವು ರೀತಿಯಲ್ಲಿ ಸಾರ್ವಜನಿಕರಿಗೆ ಅನನುಕೂಲವೂ ಆಗಲಿದೆ ಎಂಬ ಎಚ್ಚರಿಕೆ ನೀಡಿದ್ದರು.
ಅದರಂತೆ ಈ ಪ್ರಕ್ರಿಯೆ ಜಿಲ್ಲಾಡಳಿತ ಮತ್ತು ಪೊಲೀಸ್‌, ಹೆದ್ದಾರಿ ಪ್ರಾಧಿಕಾರದ ಸಮನ್ವಯದೊಂದಿಗೆ ಬದಲಿ ಮಾರ್ಗ ರೂಪಿಸಲಾಗಿದೆ.

ಬದಲಿ ಮಾರ್ಗ
ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್‌ ಸಹಿತವಾಗಿ ಬೃಹತ್‌ ವಾಹನಗಳನ್ನು ಕೆ.ಜಿ. ರೋಡ್‌, ಕೊಳಲಗಿರಿ, ಉಪ್ಪೂರು ಮಾರ್ಗವಾಗಿ ಶೀಂಬ್ರಾ ಸೇತುವೆಯಿಂದ ಪೆರಂಪಳ್ಳಿ – ಮಣಿಪಾಲದ ಕಾಯಿನ್‌ ವೃತ್ತಕ್ಕೆ ಬಂದು ಸಿಂಡಿಕೇಟ್‌ ವೃತ್ತದಿಂದ ಉಡುಪಿಗೆ ಬರಲಿದೆ. ಇದರಿಂದ ಸುಮಾರು 10 ಕಿ.ಮೀ ಸುತ್ತುವರಿದು ಬರಬೇಕಾಗುತ್ತದೆ. ಸೋಮವಾರದಿಂದ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಶುರುವಾಗಲಿದೆ.

ಸಂತೆಕಟ್ಟೆ ಪರಿಸರದ ಸ್ಥಳೀಯರಿಗೆ ಅನುಕೂಲವಾಗುವಂತೆ ಪೂರ್ಣ ಪ್ರಮಾಣದಲ್ಲಿ ಸರ್ವೀಸ್‌ ರಸ್ತೆ ಬಳಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ.

ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಸಮರ್ಪಕವಾದ ಅನಂತರದಲ್ಲಿ ಒಂದು ಭಾಗದ ಕಾಮಗಾರಿ ಶುರುವಾಲಿದೆ. ಆ ವೇಳೆಯಲ್ಲಿ ಉಡುಪಿಯಿಂದ ಕುಂದಾಪುರದ ಕಡೆಗೆ ಹೋಗುವ ಎಲ್ಲ ವಾಹನಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲೇ ಸಂಚರಿಸಲಿದೆ. ಸದ್ಯಕ್ಕೆ ಉಡುಪಿ-ಕುಂದಾಪುರ ಸಂಚರಿಸುವ ಯಾವ ವಾಹನಕ್ಕೂ ಬದಲಿ ಮಾರ್ಗ ಗೊತ್ತುಮಾಡಿಲ್ಲ.

ಕುಂದಾಪುರದಿಂದ ಉಡುಪಿಗೆ ಬರುವ ವಾಹನಗಳನ್ನು ಸೋಮವಾರದಿಂದ ಬದಲಿ ಮಾರ್ಗದಲ್ಲಿ ಸಂಚರಿಸಲು ಬೇಕಾದ ವ್ಯವಸ್ಥೆಯಾಗಿದೆ. ಪೊಲೀಸ್‌, ಜಿಲ್ಲಾಡಳಿತ, ಪ್ರಾಧಿಕಾರ ಎಲ್ಲರೂ ಈ ಕಾರ್ಯದಲ್ಲಿ ಜತೆಯಾಗಲಿದ್ದಾರೆ. ಸ್ಥಳೀಯರಿಗೆ ಸರ್ವಿಸ್‌ ರಸ್ತೆಯನ್ನು ವ್ಯವಸ್ಥಿತಗೊಳಿಸಲಾಗುವುದು.
– ಕೆ. ರಘುಪತಿ ಭಟ್‌ ಶಾಸಕರು, ಉಡುಪಿ

 

ಟಾಪ್ ನ್ಯೂಸ್

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

1-w-ewwqe

ಝಾಕಿರ್‌ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ

1-fqweeqwe

ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

ananth kumar hegde

ಕೇಂದ್ರ ಸರಕಾರದಿಂದ ಉತ್ತರ ಕನ್ನಡ ಜಿಲ್ಲೆಗೆ 232 ಕೋ.ರೂ. ಅನುದಾನ

ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎ. 2: “ಬಸಂತ್‌ ಉತ್ಸವ್‌’; ಸಿತಾರ್‌-ಬಾನ್ಸುರಿ ಜುಗಲ್‌ಬಂದಿ

ಎ. 2: “ಬಸಂತ್‌ ಉತ್ಸವ್‌’; ಸಿತಾರ್‌-ಬಾನ್ಸುರಿ ಜುಗಲ್‌ಬಂದಿ

3-shirwa

ಬಂಟಕಲ್‌ ತಾಂತ್ರಿಕ ಕಾಲೇಜು: ಅನಂತೋತ್ಸವಕ್ಕೆ ಚಾಲನೆ

2-shirwa

ಶಿರ್ವ: ಢಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಚಾಲಕ ವಶಕ್ಕೆ

ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ

ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ

MOULYA

ಮಾ. 27ರಿಂದ ಐದು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!

1-w-ewwqe

ಝಾಕಿರ್‌ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ

Malegaala Bantu Saniha song from pranayam movie

‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’

1-fqweeqwe

ಮಂಗಳೂರು: ಪೊಲೀಸರಿಂದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.