ಅಂಡಾಶಯದಲ್ಲಿ16 ಕೆ.ಜಿ.ಗಡ್ಡೆ!:ಮಣಿಪಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
Team Udayavani, Feb 2, 2017, 4:09 PM IST
ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ದಾವಣಗೆರೆಯ ಮಹಿಳಾ ರೋಗಿಯೊಬ್ಬರ (69)ಅಂಡಾಶಯದಲ್ಲಿದ್ದ 16 ಕೆ. ಜಿ. ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಕೆಎಂಸಿ ಮತ್ತು ಆಸ್ಪತ್ರೆ ಸ್ತ್ರೀರೋಗ ವಿಭಾಗದ ಘಟಕ ಮುಖ್ಯಸ್ಥ ಡಾ| ಶ್ರೀಪಾದ ಹೆಬ್ಟಾರ್ ರೋಗಿಯನ್ನು ಅಲ್ಟ್ರಾಸೌಂಡ್ ಪರೀಕ್ಷೆಗೊಳಪಡಿಸಿ ಅಂಡಾಶಯದ ಗೆಡ್ಡೆ ಪತ್ತೆಹಚ್ಚಿದರು. ಒಂದು ವರ್ಷದಿಂದ ರೋಗಿಯ ಕಿಬ್ಬೊಟ್ಟೆ ಊದಿತ್ತು. ಕಳೆದ ಮೂರು ತಿಂಗಳಲ್ಲಿ ಹಸಿವು ಕಡಿಮೆಯಾಗಿತ್ತು. ಸ್ವಲ್ಪ$ತಿಂದರೂ ಹೊಟ್ಟೆ ತುಂಬಿದ ಅನುಭವ ಆಗುತ್ತಿತ್ತು. ಗೆಡ್ಡೆಯ ಅನುಭವ ಬಹಳ ಕಾಲದ ವರೆಗೆ ಬಂದಿರಲಿಲ್ಲ. ಡಾ| ಹೆಬ್ಟಾರ್ ತಿಂಗಳೊಳಗೆ ಗೆಡ್ಡೆಯ ಕ್ಷಿಪ್ರ ಬೆಳವಣಿಗೆ ಗಮನಿಸಿ ತೆಗೆಯಲು ಶಸ್ತ್ರಚಿಕಿತ್ಸಾ ವಿಧಾನ ಆಯ್ದುಕೊಂಡರು. ರೋಗಿ 30 ವರ್ಷಗಳ ಹಿಂದೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಅಂಡಾಶಯ ಉಳಿಸಿ ಕೊಳ್ಳಲಾಗಿತ್ತು.
ಡಾ| ಹೆಬ್ಟಾರ್ ನೇತೃತ್ವದ ತಜ್ಞರ ತಂಡ ಯಶಸ್ವಿಯಾಗಿ ಸುದೀರ್ಘ 4 ಗಂಟೆ ಶಸ್ತ್ರಚಿಕಿತ್ಸೆ ನೆರವೇರಿಸಿದರು. ತಜ್ಞರಾದ ಡಾ| ಸುಜಾತಾ, ಡಾ| ಸುನಂದಾ ಹಾಗೂ ಡಾ| ನೀತಾ ವರ್ಗಿಸ್ ನೇತೃತ್ವದ ಅರಿವಳಿಕೆ ತಂಡದವರು ನೆರವಾದರು. ಗೆಡ್ಡೆ 35 ಸೆಂ. ಮೀ. x 40 ಸೆಂ. ಮೀ. ಮತ್ತು 16 ಕೆ.ಜಿ. ತೂಕವಿತ್ತು. ರೋಗಿ ಸುಧಾರಿಸಿಕೊಳ್ಳುತ್ತಿದ್ದು, ಇನ್ನು ಕೆಲವೇ ದಿವಸಗಳಲ್ಲಿ ಸಾಮಾನ್ಯ ಜೀವನದತ್ತ ಮರಳುತ್ತಾರೆ ಎಂದು ತಿಳಿಸಲಾಗಿದೆ. ತಂಡದ ಸಾಧನೆಗೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಕ| ಎಂ. ದಯಾನಂದ ಹರ್ಷವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ