Katapadi: ಭಾರೀ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ
Team Udayavani, May 12, 2023, 8:12 AM IST
ಕಟಪಾಡಿ: ಸುರಿದ ಭಾರೀ ಮಳೆ, ಬೀಸುವ ಬಲವಾದ ಗಾಳಿಯ ಪರಿಣಾಮ ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರದ ಬಳಿ ಸುಮತಿ ತಿಂಗಳಾಯ ಮನೆಯ ಮೇಲೆ ತೆಂಗಿನ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಘಟನೆ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ.
ಘಟನೆಯಿಂದ ಮನೆಯ ಪಾಶ್ವ, ಮೇಲಚಾವಣಿ ಹಾನಿಯುಂಟಾಗಿದೆ. ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್, ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ. ಕೆಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ.