ತ್ವರಿತಗತಿಯಲ್ಲಿ ಗ್ರಾಮಸ್ಥರಿಗೆ ನೀರು ಒದಗಿಸಲು ಸೂಚನೆ
ಕೊಲ್ಲೂರು: ಜಿಲ್ಲಾಧಿಕಾರಿಯಿಂದ ವಿವಿಧ ಅಭಿವೃದ್ಧಿ ಯೋಜನೆ ವೀಕ್ಷಣೆ
Team Udayavani, Mar 1, 2020, 5:57 AM IST
ಕೊಲ್ಲೂರು: ಕೊಲ್ಲೂರಿನಲ್ಲಿ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಫೆ.28ರಂದು ವೀಕ್ಷಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಂ. ಅವರು ಅಧಿ ಕಾರಿಗಳೊಡನೆ ನಡೆದ ಸಭೆಯಲ್ಲಿ ಚರ್ಚಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದ ಬಳಿಕ ವಿವಿಧ ಇಲಾಖೆಯ ಅಧಿ ಕಾರಿಗ ಳೊಡನೆ ವೆಂಟೆಡ್ ಡ್ಯಾಮ್, ಶುದ್ದ ಕುಡಿಯುವ ನೀರಿನ ಘಟಕ , ಒಳ ಚರಂಡಿ ವ್ಯವಸ್ಥೆ ವೀಕ್ಷಿಸಿ ಗ್ರಾಮಸ್ಥರು, ದೇವಾಲಯಕ್ಕೆ ತುರ್ತು ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ಥೆ ಕೂಡಲೇ ಒದಗಿಸುವಂತೆ ಸೂಚಿಸಿದರು.
ಕೊಲ್ಲೂರು ಗ್ರಾ.ಪಂ.ಗೆ ಹೆಚ್ಚಿದ ಜವಾಬ್ದಾರಿ
ಇದೇ ಮಾರ್ಚ್-ಎಪ್ರಿಲ್ ತಿಂಗಳೊಳಗೆ ಕೊಲ್ಲೂರು ದೇಗುಲ ಸಹಿತ ಅಲ್ಲಿನ ನಿವಾಸಿಗಳ ಮನೆ ವಾಣಿಜ್ಯ ಸಂಕೀರ್ಣ ವಸತಿ ಗೃಹಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಜೋಡಿಸಲಾದ ಪೈಪ್ಲೈನ್ಗಳಿಗೆ ಮೀಟರ್ ಅಳವಡಿಸಿ ದರ ನಿಗದಿ ಪಡಿಸಿ ವ್ಯವಸ್ಥೆಗೊಳಿಸುವಲ್ಲಿ ಕೊಲ್ಲೂರು ಗ್ರಾ.ಪಂ. ಹಾಗೂ ಕರ್ನಾಟಕ ನಗರಾಭಿವೃದ್ಧಿ ನೀರು ಸರಬರಾಜು , ಒಳಚರಂಡಿ ಮಂಡಳಿ ಸೇರಿ ಒಡಂಬಡಿಕೆ ಮೂಲಕ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಮಲ್ಟಿ ಲೆವೆಲ್
ಪಾರ್ಕಿಂಗ್ ವ್ಯವಸ್ಥೆ
ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ನಿಲುಗಡೆಗೆ ಎದುರಾಗಿರುವ ಜಾಗದ ಕೊರತೆ ನಿಭಾಯಿಸಲು ಈಗಿರುವ ವ್ಯವಸ್ಥೆ ಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. ಕೊಲ್ಲೂರಿನ ನಿವಾಸಿಗಳಿಗೆ ಸದಾ ಸಮಸ್ಯೆಯಾಗಿರುವ ವಿದ್ಯುತ್ ಕಣ್ಣು ಮುಚ್ಚಾಲೆ, ಲೋವೋಲ್ಟೆಜ್ ಸಮಸ್ಯೆ ಬಗೆಹರಿಸಲು ಹಾಲ್ಕಲ್ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸಬ್ ಸ್ಟೇಶನ್ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿ ಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ದೇಗುಲದ ಕಾರ್ಯ ನಿರ್ವ ಹಣಾಧಿ ಕಾರಿ ಅರವಿಂದ ಎ. ಸುತಗುಂಡಿ, ಉಪಕಾರ್ಯನಿರ್ವಹಣಾ ಧಿಕಾರಿ ಕೃಷ್ಣ ಮೂರ್ತಿ, ದೇಗುಲದ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸದಸ್ಯರಾದ ರಮೇಶ ಗಾಣಿಗ, ಸರಸಿಂಹ ಹಳಗೇರಿ, ಶ್ರೀಧರ ಅಡಿಗ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ಅರಣ್ಯ ಇಲಾಖೆಯ ಡಿ.ಎಫ್. ಒ. ಆಶೀಶ್ ರೆಡ್ಡಿ, ಮೆಸ್ಕಾಂ ಮುಖ್ಯ ಇಂಜಿನಿಯರ್ ರಾಕೇಶ್,ಕೊಲ್ಲೂರು ಗ್ರಾ.ಪಂ.ಪಿ.ಡಿ.ಒ.ರಾಜೇಶ್, ದೇಗುಲದ ಇಂಜಿನಿಯರ್ಗಳಾದ ಪ್ರದೀಪ್ ಹಾಗೂ ಮುರಳೀಧರ, ಬೈಂದೂರು ಹಾಗೂ ಕುಂದಾಪುರ ತಹಶೀಲ್ದಾರರು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಕಮಿಷನರ್, ಕರ್ನಾಟಕ ನಗರಾಭಿವೃದ್ಧಿ ನೀರು ಸರಬರಾಜು ಇಲಾಖೆಯ ಇಂಜಿನಿಯರ್ಗಳು,ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ