ಕೋಟ: ಕೋಡಿ ಬೆಂಗ್ರೆಗೆ ಸರಕಾರಿ ಬಸ್‌ ಓಡಿಸಲು ಮೀನಮೇಷ


Team Udayavani, May 15, 2024, 6:17 PM IST

ಕೋಟ: ಕೋಡಿ ಬೆಂಗ್ರೆಗೆ ಸರಕಾರಿ ಬಸ್‌ ಓಡಿಸಲು ಮೀನಮೇಷ

ಕೋಟ: ಪರಿಶೀಲಿಸಿ ಕ್ರಮ ಕೋಡಿ ಗ್ರಾ.ಪಂ. ವ್ಯಾಪ್ತಿಯ ದ್ವೀಪ ಪ್ರದೇಶವಾದ ಕೋಡಿಬೆಂಗ್ರೆ ಭಾಗಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸಬೇಕು ಎನ್ನುವ ಬೇಡಿಕೆ ಸ್ಥಳೀಯರಲ್ಲಿ ಹಲವು ವರ್ಷಗಳಿಂದ ಇದೆ. ಇಲ್ಲಿನ ನಿವಾಸಿಗಳು ಉದ್ಯೋಗ, ಮೀನು ಗಾರಿಕೆ ಮುಂತಾದ ಕಾರ್ಯ ಚಟುವಟಿಕೆಗಳಿಗಾಗಿ ಉಡುಪಿ, ಮಲ್ಪೆ, ಸಂತೆಕಟ್ಟೆಗೆ ತೆರಳಲು ಬಸ್ಸುಗಳನ್ನು ಅವಲಂಬಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೂಡ ದೂರದೂರಿಗೆ ತೆರಳಬೇಕಿದ್ದು ಬಸ್ಸು ಸಮಸ್ಯೆ ಇದೆ.

2 ಗಂಟೆಗೊಮ್ಮೆ ಬಸ್‌
ಇಲ್ಲಿನ ಕೆಮ್ಮಣ್ಣು ಹೂಡೆ ತನಕ ಸರಕಾರಿ ಬಸ್‌, ಖಾಸಗಿ ಬಸ್‌ ವ್ಯವಸ್ಥೆ ಇದೆ. ಆದರೆ ಪಡುತೋನ್ಸೆ ಬೆಂಗ್ರೆ, ಕೋಡಿ ಬೆಂಗ್ರೆಗೆ ಕೇವಲ ಎರಡು ಖಾಸಗಿ ಬಸ್‌ಗಳು ಎರಡು ಗಂಟೆಗೊಮ್ಮೆ ಸಂಚರಿಸುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ, ಮೀನುಗಾರರಿಗೆ, ಹಿರಿಯ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೂಡೆ ತನಕ ಬರುವ ಸರಕಾರಿ ಬಸ್ಸನ್ನು ಪಡುತೋನ್ಸೆ ಬೆಂಗ್ರೆ ಮತ್ತು ಕೋಡಿ ಬೆಂಗ್ರೆಯವರೆಗೆ ವಿಸ್ತರಿಸಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿತ್ತು.

ಜಿಲ್ಲಾಧಿಕಾರಿಗಳಿಗೆ ಮನವಿ
ಈ ಬಗ್ಗೆ ಸ್ಥಳೀಯರು ಬ್ರಹ್ಮಾವರದಲ್ಲಿ ಫೆ.7 2024ರಂದು ನಡೆದ ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇದು ಸಾರಿಗೆ ಇಲಾಖೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಲುಪಿ ಕೆಲವೇ ದಿನದಲ್ಲಿ ಕೆಮ್ಮಣ್ಣು ಹೂಡೆ ನಡುವೆ
ಸಂಚಾರವಿರುವ ಸರಕಾರಿ ಬಸ್ಸನ್ನು ಪಡುತೋನ್ಸೆ ಬೆಂಗ್ರೆ, ಕೋಡಿ ಬೆಂಗ್ರೆ ತನಕ ವಿಸ್ತರಿಸುವುದಾಗಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ಆದೇಶ ಇದುವರೆಗೂ ಅನುಷ್ಠಾನವಾಗಿಲ್ಲ.

ಶೀಘ್ರ ಅನುಷ್ಠಾನವಾಗಲಿ
ಕೋಡಿ ಬೆಂಗ್ರೆ ಭಾಗಕ್ಕೆ ಸರಕಾರಿ ಬಸ್‌ ಸೇವೆ ಅಗತ್ಯವಾಗಿ ಬೇಕಿದ್ದು ಈ ಹಿಂದೆ ಗ್ರಾಮಸ್ಥರು ಸಲ್ಲಿಸಿದ ಮನವಿಯಂತೆ ಬಸ್ಸು ಸಂಚಾರಕ್ಕೆ ಆದೇಶವಾಗಿದೆ. ಆದರೆ ಇದುವರೆಗೂ ಅನುಷ್ಠಾನ ನಡೆದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮಕೈಗೊಳ್ಳಬೇಕಿದೆ.
*ಪ್ರಸಾದ್‌ ತಿಂಗಳಾಯ
ಕೋಡಿಬೆಂಗ್ರೆ, ಸ್ಥಳೀಯರು

ಪರಿಶೀಲಿಸಿ ಕ್ರಮ
ಗ್ರಾಮಸ್ಥರ ಮನವಿಯಂತೆ ಪರಿಶೀಲಿಸಿ ಮಾರ್ಗ ವಿಸ್ತರಣೆಗೆ ಲಿಖಿತವಾಗಿ ಭರವಸೆ ನೀಡಲಾಗಿದೆ. ಚುನಾವಣೆ ಘೋಷಣೆಯಾದ್ದರಿಂದ ಸ್ವಲ್ಪ ಹಿನ್ನಡೆಯಾಗಿದ್ದು, ಶೀಘ್ರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
*ಕಮಲ್‌ ಕುಮಾರ್‌, ಡಿ.ಟಿ.ಒ.,
ಕೆ.ಎಸ್‌.ಆರ್‌.ಟಿ.ಸಿ. ಮಂಗಳೂರು ವಿಭಾಗ

Ad

ಟಾಪ್ ನ್ಯೂಸ್

A city that helps students: Bangalore has a place!

Bengaluru: ವಿದ್ಯಾರ್ಥಿಗಳಿಗೆ ನೆರವಾಗುವ ನಗರ: ಬೆಂಗಳೂರಿಗೂ ಸ್ಥಾನ!

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Shivakumar-DK

Greater Bengaluru; ಐದು ನಗರ ಪಾಲಿಕೆ ರಚನೆ ಶತಸಿದ್ಧ: ಡಿ.ಕೆ.ಶಿವಕುಮಾರ್‌ 

ದೇಶಾದ್ಯಂತ ಜಾತಿಗಣತಿಗೆ ಕೈ ಒಬಿಸಿ ಮೊದಲ ಸಭೆ ಸಂಕಲ್ಪ; ಸಿದ್ದು,ಡಿಕೆಶಿ ಸೇರಿ ಹಲವರು ಭಾಗಿ

ದೇಶಾದ್ಯಂತ ಜಾತಿಗಣತಿಗೆ ಕೈ ಒಬಿಸಿ ಮೊದಲ ಸಭೆ ಸಂಕಲ್ಪ; ಸಿದ್ದು,ಡಿಕೆಶಿ ಸೇರಿ ಹಲವರು ಭಾಗಿ

DRDO develops cheap artificial leg that can withstand 125 kg weight

DRDO: 125 ಕೆ.ಜಿ. ಭಾರ ತಡೆವ ಅಗ್ಗದ ಕೃತಕ ಕಾಲು ತಯಾರಿಸಿದ ಡಿಆರ್‌ಡಿಒ

Udupi: ಗೀತಾರ್ಥ ಚಿಂತನೆ-322: ಸ್ವಭಾವ-ಪ್ರಭಾವಕ್ಕನುಸಾರ ವರ್ತಿಸುವ ಜೀವಿಗಳು

Udupi: ಗೀತಾರ್ಥ ಚಿಂತನೆ-322: ಸ್ವಭಾವ-ಪ್ರಭಾವಕ್ಕನುಸಾರ ವರ್ತಿಸುವ ಜೀವಿಗಳು

Mangaluru; ಸೋಲಾರ್‌ ಸೂರ್ಯಘರ್‌ ಯೋಜನೆ: 13 ಗ್ರಾಮಗಳ ಆಯ್ಕೆ

Mangaluru; ಸೋಲಾರ್‌ ಸೂರ್ಯಘರ್‌ ಯೋಜನೆ: 13 ಗ್ರಾಮಗಳ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Udupi: ಗೀತಾರ್ಥ ಚಿಂತನೆ-322: ಸ್ವಭಾವ-ಪ್ರಭಾವಕ್ಕನುಸಾರ ವರ್ತಿಸುವ ಜೀವಿಗಳು

Udupi: ಗೀತಾರ್ಥ ಚಿಂತನೆ-322: ಸ್ವಭಾವ-ಪ್ರಭಾವಕ್ಕನುಸಾರ ವರ್ತಿಸುವ ಜೀವಿಗಳು

Malpe: ಮೀನುಗಾರ ಸಹಕಾರಿ ಸಂಘ ಅಶಕ್ತರ ಬಾಳಿನ ಆಶಾಕಿರಣವಾಗಲಿ: ಡಾ| ಜಿ. ಶಂಕರ್‌

Malpe: ಮೀನುಗಾರ ಸಹಕಾರಿ ಸಂಘ ಅಶಕ್ತರ ಬಾಳಿನ ಆಶಾಕಿರಣವಾಗಲಿ: ಡಾ| ಜಿ. ಶಂಕರ್‌

Koteshwara: ಶ್ರೀ ಸಂಯಮೀಂದ್ರತೀರ್ಥರ ಚಾತುರ್ಮಾಸ ವ್ರತ ಸ್ವೀಕಾರ

Koteshwara: ಶ್ರೀ ಸಂಯಮೀಂದ್ರತೀರ್ಥರ ಚಾತುರ್ಮಾಸ ವ್ರತ ಸ್ವೀಕಾರ

ಹೆಬ್ರಿ-ಸೋಮೇಶ್ವರ ರಸ್ತೆ ಅಪಾಯಕಾರಿ ಮರಗಳ ತೆರವು; 7 ಗಂಟೆ ವಾಹನ ಸಂಚಾರ ಬಂದ್‌

ಹೆಬ್ರಿ-ಸೋಮೇಶ್ವರ ರಸ್ತೆ ಅಪಾಯಕಾರಿ ಮರಗಳ ತೆರವು; 7 ಗಂಟೆ ವಾಹನ ಸಂಚಾರ ಬಂದ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Operation Kalanemi: 200 fake babas arrested in Uttarakhand!

Operation Kalanemi: ಉತ್ತರಾಖಂಡದಲ್ಲಿ 200 ನಕಲಿ ಬಾಬಾಗಳ ಸೆರೆ!

A city that helps students: Bangalore has a place!

Bengaluru: ವಿದ್ಯಾರ್ಥಿಗಳಿಗೆ ನೆರವಾಗುವ ನಗರ: ಬೆಂಗಳೂರಿಗೂ ಸ್ಥಾನ!

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Udupi: ಮೀನುಗಾರರು ಹವಾಮಾನ ಇಲಾಖೆ ಮುನ್ಸೂಚನೆ ಪಾಲಿಸಿ: ಸಚಿವ ಮಂಕಾಳ ವೈದ್ಯ

Why didn’t they send Dalits instead of Shubhanshu?: congress leader Udit Raj

Dalit astronaut: ಶುಭಾಂಶು ಬದಲು ದಲಿತರನ್ನು ಕಳಿಸಿಲ್ಲವೇಕೆ?: ಕೈ ನಾಯಕ ಪ್ರಶ್ನೆ

Shivakumar-DK

Greater Bengaluru; ಐದು ನಗರ ಪಾಲಿಕೆ ರಚನೆ ಶತಸಿದ್ಧ: ಡಿ.ಕೆ.ಶಿವಕುಮಾರ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.