ಮಿನಿ ವಿಧಾನ ಸೌಧ ಸ್ಲ್ಯಾಬ್ ಗೆ ತೇಪೆ

ಕಚೇರಿ ಸಿಬಂದಿಗೆ ಭಯದಲ್ಲೇ ಕಾರ್ಯನಿರ್ವಹಿಸುವ ಅನಿವಾರ್ಯ

Team Udayavani, Mar 19, 2020, 5:27 AM IST

ಮಿನಿ ವಿಧಾನ ಸೌಧ ಸ್ಲ್ಯಾಬ್ ಗೆ ತೇಪೆ

ಕುಂದಾಪುರ: ಮಳೆ ಗಾಲದಲ್ಲಿ ಸೋರುತ್ತಿದ್ದ, ಕಾಂಕ್ರೀಟಿನ ಚಕ್ಕೆ ಗಳೇ ಉದುರಿ ಬೀಳುತ್ತಿದ್ದ ಮಿನಿ ವಿಧಾನ ಸೌಧದ ಸ್ಲ್ಯಾಬ್ ಗೆ ತೇಪೆ ಹಾಕಲಾಗಿದೆ.

ಫೌಂಡೇಶನ್‌ ಹಾಕುವಾಗಲೇ ಅಪಶಕುನ ಪ್ರಾರಂಭವಾಗಿ ಉದ್ಘಾಟನೆ ದಿನವೇ ಗಾರೆ ಬಿದ್ದು ಸುದ್ದಿಯಾಗಿದ್ದ ಮಿನಿ ವಿಧಾನಸೌಧದಲ್ಲಿ 23 ಸರಕಾರಿ ಕಚೇರಿ ಕಾರ್ಯಾರಂಭ ಮಾಡುತ್ತಿದೆ. ಮೂರು ಬಾರಿ ಸ್ಲ್ಯಾಬ್ ಗಾರೆ ಕಳಚಿಬೀಳುವ ಮೂಲಕ ದೊಡ್ಡ ಸುದ್ದಿಯಾಗಿತ್ತು. ಅನಂತರ ಮಳೆಗಾಲದಲ್ಲಿ ಕಟ್ಟಡ ಸೋರುವ ಮೂಲಕ ಮತ್ತೂಮ್ಮೆ ಸುದ್ದಿಯಾಯಿತು. ಎರಡನೇ ಬಾರಿ ಸ್ಲ್ಯಾಬ್ ಸಿಮೆಂಟ್‌ ಪ್ಲಾಸ್ಟರ್‌ ಸಿಬಂದಿ ಮೇಲೆ ಬಿದ್ದು, ಅದೃಷ್ಟವಶಾತ್‌ ಅನಾಹುತ ನಡೆಯದೇ ಸುದ್ದಿಗೆ ಗ್ರಾಸವಾಗಿತ್ತು. ಈಗ ಸೋರುವ ಸ್ಲಾéಬ್‌ ಮೇಲೆ ಮತ್ತೂಂದು ಸುತ್ತಿನ ಸಿಮೆಂಟ್‌ ಹಾಕಲಾಗಿದೆ.

ಸೋರುವುದು ನಿಂತಿಲ್ಲ
ಮಿನಿ ವಿಧಾನ ಸೌಧದಲ್ಲಿ ಧೈರ್ಯವಾಗಿ ಕೆಲಸ ಮಾಡೋದಕ್ಕೆ ಸಿಬಂದಿ ಹೆದರುತ್ತಾರೆ. ಮಳೆಗಾಲ ಬಂದರಂತೂ ಸಿಬಂದಿ ಕೊಡೆ ಹಿಡಿದು ಕೂರುವ ಸ್ಥಿತಿ. ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಕಟ್ಟಡ ಮಾಡಿದ್ದು, ಮಳೆ ನೀರು ಸೋರದಂತೆ ಸ್ಲಾéಬ್‌ ಮೇಲೆ ಕೂಡು ಸಂಧು ಆಧಾರ ಕಂಬಗಳಲ್ಲಿ ನೀರು ಇಳಿಯ ದಂತೆ ಸಿಮೆಂಟ್‌ ಪ್ಲಾಸ್ಟರ್‌ ಮಾಡಿದರೂ ಸೋರುವುದು ಕಡಿಮೆ ಆಗಿಲ್ಲ.

ಕಚೇರಿಗಳು
ಮಿನಿ ವಿಧಾನಸೌಧ ಹಿಂಭಾಗದ ನೆಲ ಅಂತಸ್ತಿನಲ್ಲಿ ಕಂದಾಯ, ಆಹಾರ, ಖಜಾನೆ, ನೋಂದಣಿ ಕಚೇರಿಗಳಿದ್ದು, ಮಳೆಗಾಲದಲ್ಲಿ ಸೋರುತ್ತಿದ್ದು, ಸೋರುವುದು ನಿಲ್ಲಿಸಲು ಸ್ಲಾéಬ್‌ ಮೇಲೆ ಮತ್ತೂಂದು ಸಿಮೆಂಟ್‌ ಹಾಸು ಹಾಕಲಾಗಿದೆ. ಸ್ಲ್ಯಾಬ್ ಸಮತಟ್ಟಾಗಿರದೆ ಇರುವುದರಿಂದ ಸಮತಟ್ಟು ಮಾಡಲು ಸಿಮೆಂಟ್‌ ಹಾಕಲಾಗುತ್ತದೆ ಎಂದು ಕೆಲಸ ನಿರ್ವಹಿಸಿದ ಮುಖ್ಯಸ್ಥರು ತಿಳಿಸಿದ್ದಾರೆ. ಸಿಮೆಂಟ್‌ ಸ್ಲಾéಬ್‌ ಹಾಕಿ ಅದು ಗಟ್ಟಿಯಾದ ಅನಂತರ ಅದರ ಮೇಲೆ ಮತ್ತೂಂದು ಹಾಸು ಹಾಕುವುದರಿಂದ ಹಾಕಿದ ಸಿಮೆಂಟ್‌ ಗಟ್ಟಿಯಾಗಿ ಕೂರುತ್ತದಾ ಎಂದರೆ ಕೆಮಿಕಲ್‌ ಸಿಂಪಡಣೆ ಮಾಡಿದ್ದೇವೆ ಎಂದಿದ್ದಾರೆ.

ಕಳಪೆ
ಮಿನಿ ವಿಧಾನಸೌಧ ಹಿಂದೆ ಎಸಿ ಕಚೇರಿಯಾಗಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಅತ್ಯಂತ ವಿಶಾಲ ವಾಗಿದ್ದು, ಹೆಂಚು ಮಾಡಿತ್ತು.

ಕಚೇರಿ ಕೂಡ ಸುಂದರ ಕಾಷ್ಠ ಕೆತ್ತನೆಯಲ್ಲಿ ಸುಂದರ ವಾಗಿತ್ತು. ಎಸಿ ಕಟ್ಟಡ ಕೆಡವಿ ಮಿನಿ ವಿಧಾನ ಸೌಧ ಕಟ್ಟಲು ವಿರೋಧವಿದ್ದು, ಹಳೆಯ ಕಟ್ಟಡ ಉಳಿಸಿಕೊಳ್ಳಬೇಕು ಎನ್ನುವ ಹೋರಾಟ ಕೂಡ ನಡೆದಿತ್ತು. ಇದೆಲ್ಲವನ್ನೂ ನಿವಾರಿಸಿಕೊಂಡು ಕಟ್ಟಡ ಕೆಲಸ ಆರಂಭವಾಗಿದ್ದು, ಕಾಮಗಾರಿ ಕಳಪೆ ಎನ್ನುವ ಕೂಗು ಕೂಡ ಆಗಲೇ ಎದ್ದಿತ್ತು. ಅನಂತರ ಕಟ್ಟಡ ಕಾಮಗಾರಿ ಸಂಪೂರ್ಣವಾಗದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಅಲ್ಲಲ್ಲಿ ಸೋರಿ ಪಾಚಿಕಟ್ಟಿದ ಗೋಡೆ, ಸ್ಲ್ಯಾಬ್ ಗಳು ಪಾಚಿಕಟ್ಟಿ ಕಪ್ಪಡರಿದೆ. ಸ್ಲ್ಯಾಬ್ ಗ ಹಾಕಿದ ಗಾರೆ ಅಲ್ಲಲ್ಲಿ ಕಳಚಿಬಿದ್ದು, ಮತ್ತೆ ಪ್ಲಾಸ್ಟ್‌ ಮಾಡಿದ ಚಿಹ್ನೆ ಕಾಣಿಸುತ್ತದೆ. ಇಷ್ಟೆಲ್ಲಾ ಕಳಪೆ ಇದ್ದರೂ ಕಾಮಗಾರಿ ಮಾಡಿದವರ ಬಗ್ಗೆ ಕ್ರಮ ಇಲ್ಲದೆ, ಅದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಹಣ ಸುರಿಯುತ್ತಿದೆ.

ಅಪಾಯಕಾರಿ
ಮಿನಿ ವಿಧಾನ ಸೌಧ ಕಟ್ಟಡವೇ ಅಪಾಯಕಾರಿ ಆಗಿದ್ದು, ಕಟ್ಟಡ ಕಟ್ಟುವಾಗಿ ಡಬಲ್‌ ಲೇಯರ್‌ ಮೂಲಕ ಕಬ್ಬಿಣಿದ ರಾಡ್‌ ಬಳಸದೆ ಸಿಂಗಲ್‌ ಆಗಿ ಉದ್ದುದ್ದಕ್ಕೆ ಜೋಡಿಸಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಸೋರುವ ಜಾಗದಲ್ಲಿ ಸಿಮೆಂಟ್‌ ಪ್ಲಾಸ್ಟ್‌ ಮಾಡಿದರೂ ಸೋರುವುದು ನಿಂತಿಲ್ಲ. ಅಂತಾದ್ದರಲ್ಲಿ ಮತ್ತೆ ಸ್ಲ್ಯಾಬ್ ಮೇಲೆ ಸ್ಲ್ಯಾಬ್ ಹಾಕುವುದು ಎಷ್ಟು ಸರಿ ಅನ್ನುವುದು ಎಂಜಿನಿಯರ್‌ ಸ್ಪಷ್ಟಪಡಿಸಬೇಕು. ಸೋರುವುದನ್ನು ತಪ್ಪಿಸಲು ಮತ್ತೆ ಸ್ಲ್ಯಾಬ್ ಹಾಕಿದರೂ ಅದು ಕಚ್ಚದೆ ಮತ್ತೆ ಸೋರುವಿಕೆಗೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ಸ್ಥಳೀಯರು.

ಮಿನಿ ವಿಧಾನಸೌಧ ಸೋರುತ್ತಿರುವ ಕುರಿತು ಉದಯವಾಣಿ 2019ರ ಜೂ.23ರಂದು “ಮಿನಿಯಲ್ಲ ಹನಿ ವಿಧಾನಸೌಧ’ ಎಂದು ವರದಿ ಪ್ರಕಟಿಸಿತ್ತು. ಈ ಸಂದರ್ಭ ಲೋಕೋಪಯೋಗಿ ಇಲಾಖೆಗೆ ದುರಸ್ತಿಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದರು.

ಸಿಮೆಂಟ್‌ ಹಾಸು
ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಸೋರುವ ಸ್ಲ್ಯಾಬ್ ಗೆ ಸಿಮೆಂಟ್‌ ಹಾಸು ಹಾಕಲಾಗಿದೆ. ಸಿಮೆಂಟ್‌ ಹಾಸಿನ ಮೇಲೆ ಮತ್ತೂಂದು ಹಾಸು ಹಾಕಿದರೆ ಸರಿಯಾಗುತ್ತದಾ ಇಲ್ಲವಾ ಎನ್ನೋದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಗೊತ್ತು. ಅದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ತೆಗೆದುಕೊಂಡ ನಿರ್ಧಾರ.
-ತಿಪ್ಪೇಸ್ವಾಮಿ, ತಹಶೀಲ್ದಾರ್‌ ಕುಂದಾಪುರ

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.