ಸಂಶೋಧನ ಕಾರ್ಯಕ್ಕೆ ಅನುದಾನದ ಹೊಡೆತ; ಮಂಗಳೂರು ವಿ.ವಿ. ಅಧ್ಯಯನ ಕೇಂದ್ರ, ಪೀಠ


Team Udayavani, Oct 17, 2022, 6:20 AM IST

ಸಂಶೋಧನ ಕಾರ್ಯಕ್ಕೆ ಅನುದಾನದ ಹೊಡೆತ; ಮಂಗಳೂರು ವಿ.ವಿ. ಅಧ್ಯಯನ ಕೇಂದ್ರ, ಪೀಠ

ಉಡುಪಿ: ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಮೀಸಲಿರುವ ವಿಭಾಗ ಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಬಗ್ಗೆ ಉನ್ನತ ಅಧ್ಯಯನ, ಸ್ಥಳೀಯ ವಿಷಯವಾಗಿ ವಿಶೇಷ ಅಧ್ಯಯನ ಅಥವಾ ಸಂಶೋಧನೆಗೆ ಪೂರಕವಾಗುವಂತೆ ಕೆಲವು ಸಂಶೋಧನ ಪೀಠ, ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದೆ.

ಅನುದಾನದ ಕೊರತೆ ಅಥವಾ ಮೂಲ ಅನುದಾನದ ಬಡ್ಡಿ ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ದೇಶ ಪೂರೈಸಲಾಗದೆ ಬಹುತೇಕ ಕೇಂದ್ರ, ಪೀಠಗಳು ಸೊರಗುತ್ತಿವೆ.

ಅಧ್ಯಯನ ಪೀಠ ಅಥವಾ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರಕಾರದಿಂದ ಅನುದಾನ ಬರುತ್ತದೆ. ವಿ.ವಿ.ಯಲ್ಲಿ 9 ಅಧ್ಯಯನ ಪೀಠಗಳನ್ನು ಸರಕಾರದ ಅನುದಾನ ಇಲ್ಲದೆ ನಡೆಸ ಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲ ವಿ.ವಿ. ಗಳಲ್ಲೂ ಅಧ್ಯಯನ ಕೇಂದ್ರ, ಅಧ್ಯ ಯನ ಪೀಠಗಳು ಬಾಹ್ಯ, ಆಂತರಿಕ ಒತ್ತಡ ದಿಂದಲೇ ಆರಂಭವಾಗುತ್ತಿವೆ.

ಆದರೆ ಇದಕ್ಕೆ ಸರಕಾರದಿಂದ ಅವಶ್ಯ ಪ್ರಮಾಣದಷ್ಟು ಅನುದಾನ ಬರುತ್ತಿಲ್ಲ. ಕುಂದಗನ್ನಡ ಹಾಗೂ ಅರೆಭಾಷೆ ಅಧ್ಯಯನ ಪೀಠದ ಬೇಡಿಕೆಯೂ ಮುಂದಿದೆ.

ಅಧ್ಯಯನ ಕೇಂದ್ರ ಮತ್ತು ಪೀಠ
ಅಧ್ಯಯನ ಕೇಂದ್ರದಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಉನ್ನತ ಸಂಶೋಧನೆಗಳು ನಡೆಯುತ್ತವೆ. ಸಂಶೋಧನ ಅಭ್ಯರ್ಥಿಗಳು ಹಾಗೂ ಪ್ರಾಧ್ಯಾಪಕರು, ಸಹ, ಸಹಾಯಕ ಪ್ರಾಧ್ಯಾಪಕರು, ಸಿಬಂದಿ ಹೀಗೆ ದೊಡ್ಡ ವ್ಯವಸ್ಥೆ ಇರುತ್ತದೆ. ಗಾಂಧಿ, ನೆಹರೂ, ಯಕ್ಷಗಾನ ಅಧ್ಯಯನ ಕೇಂದ್ರಗಳಲ್ಲಿ ನಿರ್ದಿಷ್ಟ ಚಿಂತನೆಗಳ ಮೇಲೆ ಸಂಶೋಧನೆಗಳು ನಡೆಯುತ್ತಿರುತ್ತವೆ. ಈ ಕೇಂದ್ರದ ಆರಂಭಕ್ಕೆ ಸರಕಾರದ ಅನುದಾನವೂ ಬಂದಿರುತ್ತದೆ. ಯುಜಿಸಿಯಿಂದಲೂ ಅನುದಾನ ಸಿಗುತ್ತದೆ.

ಪೀಠಗಳ ಸ್ಥಾಪನೆ ಸರಕಾರದ ಘೋಷಣೆಯಿಂದಾದರೆ ಅನುದಾನ ಬರುತ್ತದೆ. ವಿ.ವಿ. ಸ್ಥಾಪಿಸಿದ್ದರೆ ವಿ.ವಿ.ಯೇ ನಿರ್ದಿಷ್ಟ ಅನುದಾನ ಮೀಸ ಲಿಡಬೇಕಾಗುತ್ತದೆ. ಮಂಗಳೂರು ವಿ.ವಿ. ಯ ಬಹುತೇಕ ಅಧ್ಯಯನ ಪೀಠಗಳಿ ವಿ.ವಿ.ಯೇ ಅನುದಾನ ಮೀಸಲಿಟ್ಟಿದೆ.

ಕಾರ್ಯಕ್ರಮಕ್ಕೆ ಸೀಮಿತ
ಅಧ್ಯಯನ ಕೇಂದ್ರಗಳಲ್ಲಿ ಸಂಶೋಧನ ಚಟುವಟಿಕೆ ನಡೆಯುತ್ತಿದೆ. ಅಧ್ಯಯನ ಪೀಠಗಳಲ್ಲಿ ಸಂಶೋಧನೆಯ ಜತೆಗೆ ಕ್ಷೇತ್ರ ಪರಿವೀಕ್ಷಣೆ ಇತ್ಯಾದಿ ಚಟುವಟಿಕೆಗಳೂ ನಡೆಯಬೇಕಿದ್ದು, ಅನುದಾನದ ಕೊರತೆಯಿಂದ ಅದು ಕಡಿಮೆಯಾಗುತ್ತಿದೆ. ಸದ್ಯ ಲಭ್ಯವಿರುವ ಅನುದಾನದಲ್ಲಿ ವಾರ್ಷಿಕ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನಷ್ಟೇ ಆಯೋಜಿಸಬಹುದು. ಅಧ್ಯಯನ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಕನಿಷ್ಠ 2 ಕೋ.ರೂ. ಅಗತ್ಯವಿದೆ. ಹಾಗೆಯೇ ಅಧ್ಯಯನ ಪೀಠಗಳಿಗೆ ಕನಿಷ್ಠ 25 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣ ಬೇಕಾಗುತ್ತದೆ. ಆಗ ನಿರ್ವಹಣೆಯ ಜತೆಗೆ ಸಂಶೋಧನ ಕಾರ್ಯ ನಡೆಸಲು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅನುದಾನ ಎಷ್ಟಿದೆ?
ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠಕ್ಕೆ ಯಾವುದೇ ಅನುದಾನ ಲಭಿಸಿಲ್ಲ. ತುಳುಪೀಠದಲ್ಲಿ 20 ಲಕ್ಷ ರೂ., ಶಿವರಾಮ ಕಾರಂತ ಪೀಠದಲ್ಲಿ 6 ಲಕ್ಷ, ಕನಕದಾಸ ಪೀಠದಲ್ಲಿ 10 ಲಕ್ಷ, ಕನಕದಾಸ ಸಂಶೋಧನ ಕೇಂದ್ರ, ರತ್ನಾಕರವರ್ಣಿ ಅಧ್ಯಯನ ಪೀಠ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದಲ್ಲಿ ತಲಾ 1 ಕೋ.ರೂ., ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದಲ್ಲಿ 32.50 ಲಕ್ಷ, ಅಂಬಿಗರ ಚೌಡಯ್ಯ ಪೀಠದಲ್ಲಿ 80 ಲಕ್ಷ, ಕೊಂಕಣಿ ಅಧ್ಯಯನ ಪೀಠದಲ್ಲಿ 2 ಕೋಟಿ, ನೆಹರೂ ಚಿಂತನ ಕೇಂದ್ರದಲ್ಲಿ 3 ಕೋಟಿ, ಬ್ಯಾಂಕ್‌ ಆಫ್ ಬರೋಡ ಪೀಠದಲ್ಲಿ 1.50 ಲಕ್ಷ, ಯೂನಿಯನ್‌ ಬ್ಯಾಂಕ್‌ ಪೀಠದಲ್ಲಿ 14 ಲಕ್ಷ, ಎಂ.ವಿ. ಶಾಸ್ತ್ರೀ ಪೀಠದಲ್ಲಿ 10 ಲಕ್ಷ, ಕ್ರಿಶ್ಚಿಯಾನಿಟಿ ಪೀಠದಲ್ಲಿ 41 ಲಕ್ಷ, ಡಾ| ಪಿ. ದಯಾನಂದ ಪೈ, ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯ ಯನ ಕೇಂದ್ರದಲ್ಲಿ 1 ಕೋ.ರೂ. ಇದೆ. ರಾಣಿ ಅಬ್ಬಕ್ಕ ಅಧ್ಯಯನ ಪೀಠಕ್ಕೆ 1 ಕೋ.ರೂ. ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ.

ಅಧ್ಯಯನ ಕೇಂದ್ರ ಮತ್ತು ಸ್ಥಾಪನೆ ವರ್ಷ
– ಕನಕದಾಸ ಸಂಶೋಧನ ಕೇಂದ್ರ-2005
– ಮಹಿಳಾ ಅಧ್ಯಯನ ಕೇಂದ್ರ- 2005
– ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಕೇಂದ್ರ-2005
-ಗಾಂಧಿ ಅಧ್ಯಯನ ಕೇಂದ್ರ-2005
– ಯಕ್ಷಗಾನ ಅಧ್ಯಯನ ಕೇಂದ್ರ-2009
– ಬೌದ್ಧ ಅಧ್ಯಯನ ಕೇಂದ್ರ-2010
– ನೆಹರೂ ಚಿಂತನ ಕೇಂದ್ರ-2012

ಅಧ್ಯಯನ ಪೀಠ ಮತ್ತು ಸ್ಥಾಪನೆ ವರ್ಷ
-ಧರ್ಮನಿಧಿ ಯೋಗ ಪೀಠ-1983
-ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರಿ ಸ್ಮಾರಕ ಪೀಠ-1984
– ಮಂಗಳೂರು ಧರ್ಮಪ್ರಾಂತದ ಕ್ರಿಶ್ಚಿಯಾನಿಟಿ ಪೀಠ-1986
– ಬ್ಯಾಂಕ್‌ ಆಫ್ ಬರೋಡ (ವಿಜಯ ಬ್ಯಾಂಕ್‌) ಪೀಠ-1988
– ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ-1991
– ಯೂನಿಯನ್‌ ಬ್ಯಾಂಕ್‌ (ಕಾರ್ಪೊರೇಶನ್‌ ಬ್ಯಾಂಕ್‌) ಪೀಠ-1992
– ಡಾ| ಶಿವರಾಮ ಕಾರಂತ ಪೀಠ-1993
– ಕೆನರಾ ಬ್ಯಾಂಕ್‌ ಪೀಠ (ಗ್ರಾಮೀಣ ಬ್ಯಾಂಕಿಂಗ್‌ ಮತ್ತು ವ್ಯವಸ್ಥಾಪನ ಪೀಠ)-1995
-ಎನ್‌.ಜಿ. ಪಾವಂಜೆ ಲಲಿತಕಲಾ ಪೀಠ-1998
– ಕನಕದಾಸ ಪೀಠ-2003
– ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ-2008
– ಅಂಬಿಗರ ಚೌಡಯ್ಯ ಅಧ್ಯಯನ ಪೀಠ-2008
– ಡಾ| ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಪೀಠ-2009
– ಮಹಾಕವಿ ರತ್ನಾಕರ ವರ್ಣಿ ಅಧ್ಯಯನಪೀಠ-2014
-ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ-2015
– ರಾಣಿ ಅಬ್ಬಕ್ಕ ಅಧ್ಯಯನ ಪೀಠ-2015 -ಕೊಂಕಣ ಅಧ್ಯಯನ ಪೀಠ-2016
– ಬ್ಯಾರಿ ಅಧ್ಯಯನ ಪೀಠ-2017
-ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ-2021

ಅಧ್ಯಯನ ಪೀಠದಿಂದ ವಾರ್ಷಿಕ ನಿರ್ದಿಷ್ಟ ವಿಷಯದ ಕೆಲವು ಕಾರ್ಯಕ್ರಮಗಳನ್ನು ನಡೆಸಬಹುದೇ ವಿನಾ ಸಂಶೋಧನ ಕಾರ್ಯಕ್ಕೆ ಬೇಕಾ ದಷ್ಟು ಅನುದಾನ ಲಭ್ಯವಿಲ್ಲ. ಸರಕಾರದ ಅನುದಾನ ಹಾಗೂ ವಿ.ವಿ. ನೀಡಿರುವ ಅನುದಾನದಲ್ಲಿ ಸಂಶೋಧನೆಗಳು ನಡೆಯುತ್ತವೆ.
– ಡಾ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ,
ಕುಲಪತಿ. ಮಂ.ವಿ.ವಿ.

- ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.